ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನೇಕೆ ‘ಟೈಮ್ಸ್ ಆಫ್ ಇಂಡಿಯಾ’ವನ್ನು ಹೊಗಳಲಾರಂಭಿಸಿದ್ದೇನೆ?

ನಮ್ಮ ನಿಯತಕಾಲಿಕಗಳ ಬಗ್ಗೆ ನಾವೆಷ್ಟು ಹೆಮ್ಮೆಪಡುತ್ತೇವೆ ಎಂಬ ಬಗ್ಗೆ ಓದುಗರಿಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನನ್ನ ಸಂಪಾದಕೀಯದ ಓದುಗರಂತೂ ಇವರಿಗೆ ಅತಿಯಾದ ಆತ್ಮವಿಶ್ವಾಸ ಮತ್ತು ದಾರ್ಷ್ಟ್ಯ ಎಂದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಈ ದೇಶಕ್ಕೆ ಯಾವುದು ಅಗತ್ಯವೋ ಅದನ್ನು ಬೌದ್ಧಿಕ ಪ್ರಬುದ್ಧತೆ ಮತ್ತು ಚಿಂತನೆಗೆ ಹಚ್ಚುವ ವಿಶ್ಲೇಷಣೆಯೊಂದಿಗೆ ನೀಡುವ ಸಾಮರ್ಥ್ಯವಿರುವ ಮತ್ತೊಂದು ಮಾಧ್ಯಮ ಸಂಸ್ಥೆ ವಿರಳ ಎಂಬುದನ್ನು ನಾನು ವಿನಯದಿಂದಲೇ ನಿಮ್ಮ ಗಮನಕ್ಕೆ ತರಬಯಸುತ್ತೇನೆ. ಆದರೆ, ತಮ್ಮ ಜಾಣ್ಮೆಯ ವಿಶ್ಲೇಷಣೆಗಳ ಮೂಲಕ ನಮ್ಮನ್ನು ಪದೇ- ಪದೇ ಮಣಿಸಿದ ಅಂತಹ ಮತ್ತೊಂದು ಸಂಸ್ಥೆ ಇದ್ದರೆ ಅದು ‘ಟೈಮ್ಸ್ ಆಫ್ ಇಂಡಿಯಾ’ ಸಮೂಹ!
ಎಷ್ಟೋ ಬಾರಿ ನಾವು ಈ ಬಾರಿ ಈ ವಿಷಯವನ್ನು ಮುಖಪುಟ ಸುದ್ದಿಯಾಗಿ ಮಾಡಬಹುದು, ಉತ್ತಮ ವಿಷಯವಿದು ಎಂದುಕೊಂಡು ಚರ್ಚಿಸಿದ ಮಾರನೇ ದಿನ ‘ಟಿಒಐ’ನಲ್ಲಿ ಅದೇ ವಿಷಯ ಮುಖಪುಟ ತುಂಬಿರುತಿತ್ತು. ಅಂತಹದ್ದಕ್ಕೆ ಒಂದು ನಿದರ್ಶನವೆಂದರೆ ಇತ್ತೀಚಿನ ಆಜಂಗಢದ ಸುದ್ದಿ. ಆ ಸುದ್ದಿಯನ್ನು ಪ್ರಕಟಿಸಿದ್ದೇ ವಿಶೇಷವಲ್ಲ, ಬದಲಾಗಿ ಅದಕ್ಕೆ ಸಂಬಂಧಪಟ್ಟಂತೆ ಅವರು ಕಲೆ ಹಾಕಿದ ಅಂಕಿ- ಅಂಶ, ಮಾಹಿತಿಗಳು ನಿಜಕ್ಕೂ ಅದು ಪತ್ರಿಕೋದ್ಯಮದ ಕಾರಣಕ್ಕಾಗಿ ಪತ್ರಿಕೋದ್ಯಮ ಎಂಬ ಧೋರಣೆಯ ಕಾರ್ಯವಲ್ಲ, ಬದಲಾಗಿ ಬದ್ಧತೆಯ ನೆಲೆಯ ಬೌದ್ಧಿಕ ಪತ್ರಿಕೋದ್ಯಮ ಎಂಬುದನ್ನು ಹೇಳುತ್ತಿದ್ದವು. ಯಾವುದೇ ಮುಂಚೂಣಿಯಲ್ಲಿರುವ ವ್ಯಕ್ತಿಯನ್ನು ಆತನ ಪ್ರತಿ ವಿಷಯದಲ್ಲೂ ಟೀಕಿಸುವುದು ಸುಲಭ. ಆದರೆ, ಯಾರೂ ಕೂಡ ಏನನ್ನೂ ಮಾಡದೆ ಏಕಾಏಕಿ ನಂಬರ್ ಒನ್ ಆಗಲು ಸಾಧ್ಯವಿಲ್ಲ. ಒಟ್ಟಾರೆ ತನ್ನದೇ ವೈಶಿಷ್ಟ್ಯ, ಕ್ರಿಯಾಶೀಲತೆಯೊಂದಿಗೆ ಓದುಗರ ಮನಗೆಲ್ಲುವುದರೊಂದಿಗೆ ಪ್ರಬುದ್ಧ ಪತ್ರಿಕೋದ್ಯಮಕ್ಕೆ ಟಿಒಐ ಸಾಕ್ಷಿಯಾಗಿದೆ.
ಪೂರ್ಣ ಓದಿಗೆ : ಮೀಡಿಯಾ ಮೈಂಡ್

‍ಲೇಖಕರು avadhi

23 December, 2009

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading