ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಖಂಡಿತ ಕವಿಯಲ್ಲ..

rajeev narayan nayakರಾಜೀವ ನಾರಾಯಣ ನಾಯಕ

ನಾನು ಖಂಡಿತ ಕವಿಯಲ್ಲ

ಆದರೆ ಇಷ್ಟು ಹತ್ತಿರ

ಬಂದಿರುವಾಗ ಚಂದಿರ

ಕವನ ಬರೆಯದಿರುವುದು

ಸರ್ವಥಾ ಸರಿಯಲ್ಲ!

moon-climbing

ಮೂನ್ ನೋಡ್ತಿದ್ದರೆ

ಮೂಡ್ ಏಕೋ ಥರಥರಾ:

ಆಗಸದಲ್ಲಿ ಒಂಟಿ ಚಂದಿರ

ಸೇಮ್ ನಂಥರ

ಆಗಸದಲ್ಲಿ ಪೂರ್ಣ ಚಂದಿರ

ಸೇಮ್ ಟು ಸೇಮ್ ನಿಂಥರ!

ನಿನ್ನ ಕಲ್ಲಿನಂಥ ಮೌನವನ್ನು

ಇನ್ನೊಂದು ಮೌನದಿಂದ ಕೊಲ್ಲಬಲ್ಲೆ

ನಿನ್ನ ನಿಷ್ಕಾರಣ ವಿದಾಯವನ್ನು

ಕಠೋರವಾಗಿ ಬೀಳ್ಕೊಡಬಲ್ಲೆ

ಈ ಚಂದ್ರ ನೆನಪಿಸುವ ನಿನ್ನ ಕಾಂತಿಯನ್ನು

ಮಾತ್ರ ಹೇಗೆ ಮರೆಯಲಿ ಹೇಳು ನಲ್ಲೆ?

ಓ ಚಂದಿರನೆ!

ನಿನ್ನ ಹೊಳಪಿಗೆ ನೀನೇ ಬೀಗಬೇಡ

ನಿನ್ನದು ಅರ್ಧ ಕಾಂತಿ ಮಾತ್ರ

ಉಳಿದರ್ಧ ನಿನ್ನನ್ನೆಲ್ಲೋ ನೋಡುತ್ತಿರುವ

ನನ್ನವಳಿಂದ ಪ್ರತಿಫಲಿಸಿದ್ದು, ಮರೆಯಬೇಡ!

‍ಲೇಖಕರು Admin

17 November, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading