ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನಾನು’ ಅಂದ್ರೆ ಯಾರ್ಯಾರು ಗೊತ್ತಾ?

ಲಲಿತ ಪ್ರಬಂಧ

– ಅಕ್ಷಯ ಕಾಂತಬೈಲು

ಎಲ್ಲರು ಎಲ್ಲವೂ ಆಗಲು ಸಾಧ್ಯನಾ… ನಟ ಅಮೀರ್ ಖಾನನ ‘ತ್ರೀ ಈಡಿಯೇಟ್ಸ್’ ನ ಡಯಲಾಗ್ -‘ಲತಾ ಮಂಗೇಶ್ಕರ್ ಕ್ರಿಕೇಟರ್ ಆಗಿದ್ರೆ… ಸಚಿನ್ ತೆಂಡೂಲ್ಕರ್ ಸಿಂಗರ್ ಆದ್ರೆ…’ ನಿಜ ಅಲ್ವ? ಈರ್ವರು ಏನಾಗಬೇಕೊ ಅದು ಆಗಿದ್ದಾರೆ.
‘ನಾನು’ ಒಂದು ಅಸ್ತಿತ್ವವನ್ನು ಸೂಚಿಸುತ್ತೆ. ಹಾಗೆಯೇ ‘ನಾನು’ ಸಾರ್ವತ್ರಿಕ, ಸಾರ್ವಕಾಲಿಕವಾಗಿ ಪ್ರಯೋಗಿಸುತ್ತೀವಿ. ನಾನು ಎಂಬುವುದರಲ್ಲಿ ನಾವಿದ್ದೇವೆ. ಹುಟ್ಟಿ ಕಣ್ತೆರೆದ ಪ್ರತಿಯೊಂದರಲ್ಲೂ ಪ್ರತಿಭೆ ಇದ್ದೇ ಇದೆ -ಮನುಷ್ಯ ಚಿಂತಿಸುತ್ತಾನೆ, ಜಲಚರ ಈಜತ್ತೆ, ಹಕ್ಕಿ ಹಾರುತ್ತೆ… ಗಮನಿಸಬೇಕು ನಮ್ಮನ್ನು ರೂಪಿಸಲು, ನಾನು ‘ಹೀಗೆಯೇ’ ಎಂದು ಕೆತ್ತಲು ಪರಿಸರ ಮತ್ತು ಸುತ್ತಲಿನ ಸಮೂಹದ ಪ್ರಭೆ ಧಾರಾಳವಾಗಿರುತ್ತೆ. ಜಾಗ, ಸ್ಥಾನ ಹೊರತು ‘ನಾನು’ ನಗಣ್ಯ. ನಾನೆಂಬುದು ಎಷ್ಟು ಜನರನ್ನು ಉದ್ಧರಿಸಿದೆ, ಎಷ್ಟು ಜನರನ್ನು ಉರುಳಿಸಿದೆ, ಎಷ್ಟು ಜನರನ್ನು ಅರೆಹುಚ್ಚನನ್ನಾಗಿಸಿದೆ, ಎಷ್ಟು ಜನರನ್ನು ಪೂತರ್ಿಹುಚ್ಚನನ್ನಾಗಿಸಿದೆ ಬದಲಾದವರಿಗೇ ಗೊತ್ತು! ಗಾಯಕ ಸೋನುನಿಗಂ, ಮಹಮ್ಮದ್ ರಫಿಯನ್ನ ಅನುಕರಿಸಿ ಅವರಿಂದ ‘ನಾನು’ಆದ. ಅಣ್ಣಾವ್ರ ಮೂರೂ ಮಕ್ಕಳು ‘ನಾನು’ವಿನಲ್ಲಿ ಅಪ್ಪ, ವರನಟ ರಾಜ್ಕುಮಾರರನ್ನು ಕಂಡರು. ಇತ್ತೀಚಿಗೆ ನಿಧನರಾದ ಹಿರಿಯ ಸಾಹಿತಿ ಯು. ಆರ್. ಅನಂತಮೂರ್ತಿ ಅವರ ಆತ್ಮಕಥನ ‘ಸುರಗಿ’ ಓದಬೇಕಾದರೆ ಹಾಗೆ ಅನ್ನಿಸಿತು. ಶಾಂತವೇರಿ ಗೋಪಾಲಗೌಡರು ಸೇರಿ ಹಲವು ಸ್ನೇಹಿತ ಬಂಧುಗಳು ಅವರನ್ನು ಸಮಾಜವಾದಿ ಚಿಂತನೆಗಳಿಗೆ ಓರೆ ಹಚ್ಚಿದ್ದರು. ಅವರೇ ಹೇಳುವಂತೆ -ನನ್ನನ್ನು ರೂಪಿಸಲು ಲೋಹಿಯಾ ಅವರೂ ಕಾರಣರು. ಅಂತರ್ಗಹಿಯಾಗಿ ಯೋಚಿಸಿದರೆ; ಅನಂತಮೂರ್ತಿ ಅವರನ್ನು ಸ್ನೇಹ ಸಮೂಹ ಪರಿಸರ ಬೆಳೆಸಿದ್ದೋ ಅಥವ ಅವರು ಬೆಳೆದದ್ದೋ… ಎಂದು ಕಾಡುತ್ತದೆ. ನನ್ನಪ್ಪ ಯಾವಾಗಲೂ ಹೇಳುತ್ತಿರುತ್ತಾರೆ -ಒಬ್ಬ ಸಜ್ಜನನಿಗೆ ಅಂತವರೇ ಸ್ನೇಹಿತರು, ರಾಸ್ಕಲ್ನಿಗೆ ಹಾಗಿರುವವನೇ ಗೆಳೆಯರು ಸಿಗುತ್ತಾರೆ. ಇದು ವೈಚಿತ್ರ್ಯ ಅಂದ್ರೆ.

ಸಾಕ್ಷರತೆಯ ಚೌಕಟ್ಟಿನಲ್ಲಿ ನೋಡಿದರೆ – ‘ನಾನು’ ಅನ್ನುವುದನ್ನು ಪರ್ಮನೆಂಟ್ ಆಗುವುದಕ್ಕೆ ನಾವು ಇಂಟರ್ಮೀಡಿಯೇಟ್ ಮುಂದೆ ಡಿಗ್ರಿ ಪೂರೈಸುತ್ತೇವೆ. ನನ್ನೊಬ್ಬ ಗೆಳೆಯ ಮನೆಯ ಆಥರ್ಿಕ ಪರಿಸ್ಥಿತಿ ಸೊರಗುತ್ತಿದ್ದಿದ್ದರಿಂದ ತನ್ನ ಐ.ಟಿ.ಐ ಕೋರ್ಸನ್ನು ಅರ್ಧಕ್ಕೇ ನಿಲ್ಲಿಸಿ ಸರಕಾರಿ ಸಂಸ್ಥೆಯೊಂದಕ್ಕೆ ಜಾಬಿಗೆ ಅಪ್ಲೈ ಮಾಡಿದ. ರೆಸ್ಯೂಮಿನಲ್ಲಿ ಡಿಗ್ರಿ ಪದವಿ ಅರ್ಧದಲ್ಲಿ ನಿಲ್ಲಿಸಿದ್ದನ್ನು ನಮೂದಿಸಿದ್ದರಿಂದ ಉದ್ಯೋಗಕ್ಕೆ ಸೇರಲಾಗಲಿಲ್ಲ. ನಮ್ಮದು ಪ್ರಜಾಪ್ರಭುತ್ವ ದೇಶವಾದರೂ ಸರಕಾರಿ ಅರ್ಜಿಗಳಲ್ಲಾಗಲಿ, ಉದ್ಯೋಗದ ನಮೂನೆಯಲ್ಲಾಗಲಿ ‘ಕ್ಯಾಸ್ಟ್’ ಕಾಲಂ ಇದ್ದೆ ಇರುತ್ತೆ. ಅಂಬೆಡ್ಕರನ್ನು ನೆನೆಯಲು ಅವರ ಜಯಂತಿಯಲ್ಲಿ ಗಡದ್ದಾಗಿ ಭಾಷಣ ಬಿಗಿದರೆ ಅಲ್ಲಿಗೆ ಮುಗಿಯಿತೆಂಬ ಭಾವನೆ ರಾಜಕಾರಣಿಗಳಲ್ಲಿ. ಅವರು ‘ಕ್ಯಾಸ್ಟಿಸಂ’ ತೆಗದರಷ್ಟೇ ಅಂಬೆಡ್ಕರರವರಿಗೆ ಸಲ್ಲಿಸುವ ನೈಜ ಗೌರವ ಮತ್ತು ಪ್ರಜಾಪ್ರಭುತ್ವಕ್ಕೊಂದು ಅರ್ಥ, ದಲಿತವರ್ಗದ ‘ಅಸ್ತಿತ್ವ’. ನಾನು ಅನ್ನುವುದರಿಂದ ಅವೆಷ್ಟು ಶೋಷಣೆಗಳೂ, ಕಸಿಯುವಿಕೆ ನಡೆಯುತ್ತಿದೆ ಮತ್ತು ನಡೆದಿದ್ದು ಇತಿಹಾಸದಲ್ಲಿ ಸೇರಿಹೋಗಿರುವುದು ಆ ದೇವರೇ ಬಲ್ಲ. ಅಂತಮರ್ುಖಿ ದೃಷ್ಟಿಯಲ್ಲಿ ನಾನೆಂಬುದು ‘ಅಹಂ’. ಇದರ ನಿಗ್ರಹಿಕೆಯಲ್ಲಿ ಸಿದ್ದಾರ್ಥ -ಗೌತಮ ಬುದ್ಧನಾದ, ನರೇಂದ್ರನಾಥ -ಸ್ವಾಮಿ ವಿವೇಕಾನಂದರಾದರು, ಇನ್ನು ಹಲವರು ಸನ್ಯಾಸಿಗಳಾದರು. ಸಾಮಾನ್ಯವಾಗಿ ವಯಸ್ಸು ಮಾಗುತ್ತಿದ್ದ ಹಾಗೆ ನಾನು ಸಂಕುಚಿತಗೊಂಡು ಕೊನೆಗೆ ಶೂನ್ಯದಲ್ಲಿ ಲೀನವಾಗುತ್ತದೆ.
ಗೆಳೆತನದ ‘ನಾನು’ವಿನಲ್ಲಿ ‘ನಾವು’ಇರುತ್ತೆ. ಸಿಗರೇಟು ಸೇದುತ್ತಾ ಜನನಿಬಿಡತೆಯಲ್ಲಿ ವಾಕ್ ಮಾಡದರೆ ಸಾಕು. ಒಬ್ಬ ‘ಬಾಸ್ ಪೊಟ್ನ ಇದ್ಯಾ ಸಿಗರೇಟು ಹಚ್ಚಕೆ…’ ಅಂದ್ರೆ. ಇನ್ನೊಬ್ಬ ಅಸಾಮಿ ‘ಅಣ್ಣಾ ಒಂದು ಪಫ್ ಕೊಡ್ತಿರಾ…’ ಎಂದು ಗೋಗರೆಯತ್ತಾ ಕೇಳುವನು. ದೂರದಲ್ಲಿ ಒಬ್ಬನೇ ಹೊಗೆಯುಗುಳುತ್ತಾ ಇದ್ದ ಮಹಾಪುರುಷ -ನಂಗೊಬ್ಬ ಪಾರ್ಟ್ನರ್ ಸಿಕ್ದಾ ಎಂದು ಓಡೋಡಿ ಬಂದು, ಕೊನೆಗೆ ಸ್ನೇಹಿತನೇ ಆಗುತ್ತಾನೆ. ಇದೆಲ್ಲಾ ‘ಸೇಮ್ ಮೆಂಟಲಿಟಿ’ ಕೇಸು. ಜೀವನಸಂಗಾತಿಯನ್ನೂ ಆರಿಸಲು ಇಬ್ಬರಲ್ಲೂ ‘ಸೇಮ್ ಮೆಂಟಲಿಟಿ’ ಮ್ಯಾಚಿಂಗ್ ಆಗಬೇಕು. ಮ್ಯಾಚ್ ಆಗದೆ ಒಮ್ಮೊಮ್ಮೆ ಪುರೋಹಿತರ ಜಾತಕ ಭಾದಕ ಆಗುವುದು ಇಲ್ಲೆ, ಮುಂದೆ ಡೈವೋಸರ್್ ಏರುವುದೂ ಹೀಗೆಯೇ. ಈಗಿನ ಯುವಜನತೆ ತುಂಬಾ ಫಾಸ್ಟು ಬಿಡಿ. ನಮ್ಮದೆ ಹಿತ್ತಿಲಲ್ಲಿ ಮದ್ದು ಇದ್ದರೂ ತನಗೆ ಸರಿಹೊಂದುವ ಸಂಗಾತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹುಡಿಕಿ ಹಿಡಿಯುತ್ತಾರೆ. ಹೀಗೆ ಕಂಪ್ಯೂಟರ್ಯುಗದಲ್ಲಿ ನಾನು ‘ನಾವು’ಆಗಿ ಜಾಗತೀಕರಣಗೊಂಡಿದೆ!
ಸಿಂಪಲ್ಲಾದ ಎಕ್ಸ್ಪರಿಮೆಂಟು, ಒಂದು ಗಾಜಿನ ಲೋಟದಲ್ಲಿ ಅರ್ಧ ಭಾಗ ಶುಭ್ರ ನೀರು ತೆಗೆದುಕೊಳ್ಳಿ ಇನ್ನರ್ಧ ಭಾಗಕ್ಕೆ ಶುಭ್ರ ನೀರೆರೆಯಿರಿ. ಲೋಟ ತುಂಬಿದ ನೀರಲ್ಲೇನೂ ವ್ಯತ್ಯಾಸ ಅನ್ನಿಸದು. ಇವಾಗ ಅದೇ ಶುಭ್ರನೀರು ತುಂಬಿದ ಗಾಜಿನ ಲೋಟಕ್ಕೆ ಗೊಜ್ಜೆ ನೀರೆರೆಯಿರಿ ಬದಲಾವಣೆ ಗಮನಿಸಿ. ಶುಭ್ರನೀರು ಮತ್ತು ಗೊಜ್ಜೆನೀರು ಮಿಶ್ರಣವಾಗಿ ಡಯಲ್ಯೂಟಾದ ಹೊಸ ದ್ರಾವಣ ಸಿಗುತ್ತದೆ. ತಾತ್ಪರ್ಯವಿಷ್ಟೇ ‘ನಾನು’ ಎಂಬುವುದರಲ್ಲಿ ಇನ್ನೊಬ್ಬರ ನಾನು ಅಡಕವಾಗಿದೆ. ಅರಗಿಸಿಕೊಳ್ಳುವ ಮತ್ತು ಸೇರುವ ಗುಣ ನಮ್ಮಲ್ಲಿರಬೇಕು. ನಾವು ಎಲ್ಲಿ ಸೇರಬೇಕೋ… ಯಾರಿಗೆ ಸೇರಬೇಕೋ… ಅಲ್ಲಿಗೆ ಸೇರೋಣ.

‍ಲೇಖಕರು G

31 August, 2014

1 Comment

  1. Arunkumar Habbu

    I liked the presentation of the light essay of Akshay Kantabialu. It represents real mentality of a human being. It is true that inculcates in it we. It is the most thought provoking essay. Arunkumar Habbu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading