ಗಾಯಕ ಮತ್ತು ಹೋರಾಟಗಾರರಾದ ನಾದ ಮಣಿನಾಲ್ಕೂರು ತಮ್ಮ ಕಾವ್ಯ ಸಂಚಾರಕ್ಕೆ ಹೆಸರುವಾಸಿ. ತಂಬೂರಿ ಹಿಡಿದು ಇಡೀ ರಾಜ್ಯಆಡಿನಂತ ಹಾಡುತ್ತಾ ಇವರು ನಡೆದುಬಿಟ್ಟಾಗ ಎಲ್ಲರೂ ಅಚ್ಚರಿಗಣ್ಣುಗಳಿಂದ ನೋಡಿದರು.
ಸಂತ ಮತ್ತು ಸೂಫಿ ಹಾಡುಗಳಿಗೆ ದನಿಯಾಗುವ ಇವರು ಈ ಬಾರಿ ಹೊಟೇಲ್ ಒಂದರ ಮೆನುಕಾರ್ಡಿನ ತಿಂಡಿ ತಿನಿಸುಗಳಿಗೆ ದನಿಯಾಗಿ ಹೊಸ ಪ್ರಯೋಗ ಮಾಡಿದ್ದಾರೆ. ಅದೇನೆಂದರೆ ಮೆನುಕಾರ್ಡಿನಲ್ಲಿರುವ ಒಂದೊಂದು ತಿಂಡಿ ತಿನಿಸುಗಳ ಹೆಸರುಗಳಿಗೆ ಕವಿತೆಗಳ ರೂಪ ನೀಡಿ ಹಾಡಿದ್ದಾರೆ.
ಅವರ ಈ ಪ್ರಯೋಗದ ಹಿನ್ನೆಲೆ ‘ಅವಧಿ’ಯು ಫಟಾ ಫಟ್ ಸಂದರ್ಶನ ನಡೆಸಿತು.
ಮೆನುಕಾರ್ಡನ್ನು ಕವಿತೆಯಂತೆ ಓದಿದ್ದು ನಶೆಯಲ್ಲಿನೇನಾ ?
ನಶೆಯಲ್ಲಿ ಅಲ್ಲಾ. ನಿಶೆಯಲ್ಲಿ.
ಅಲೆಮಾರಿಗೆ ಬಾರಿನಲ್ಲೇನು ಕೆಲಸ ?
ಅಲ್ಲಿ ತುಂಬಾ ಅಲೆಮಾರಿಗಳಿರ್ತಾರೆ. ಅವರನ್ನ ಭೇಟಿ ಆಗೋದು.
ಮೀನು ತಿನ್ನೋದು, ಮೆನು ಓದೋದು. ನಿಮಗೆ ಯಾವುದು ಸುಲಭ ?
ಮೀನು ತಿನ್ನೋದು.
ಮೆನುಕಾರ್ಡನ್ನು ಕವಿತೆಯಾಗಿಸಲು, ಕವಿತೆಗಳಿಗೇನು ಕೊರತೆ ಇತ್ತೇನು ?
ಕವಿತೆಗಳಿಗೆ ಕೊರತೆ ಅಂತಲ್ಲ. ಮೆನುಕಾರ್ಡನ್ನು ಕವಿತೆಯ ಹಾಗೆ ಕಾಣಬಹುದು ಅಂತಾ.
ಬಾರಲ್ಲಿ ಕವಿತೆಯ ಕಾರುಬಾರು ನಡೆಸಿದ್ದು ಇದು ಮೊದಲೇನಾ ?
ಬಹುಶಃ ಹೌದು.
0 ಪ್ರತಿಕ್ರಿಯೆಗಳು