ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಕೋಟಿ ದೇವರುಗಳನ್ನು ಅವನು ತಬ್ಬಿಕೊಳ್ಳಬೇಕು…!!

ನಿರ್ಣಯ..
ಸವಿತಾ ನಾಗಭೂಷಣ

ಅವನ ಅಜ್ಜ ಸಿಡಿಮದ್ದಿನ
ಕಾರ್ಖಾನೆಯನ್ನೇನೂ ಇಟ್ಟಿಲ್ಲ !

ಅವನ ಅಪ್ಪ ಬಡವ- ಸ್ವಾಭಿಮಾನಿ
ಗುಲಾಬಿ ಮಾರುತ್ತಾನೆ !

ಅವನ ಕಾಕಾ ಅತ್ತರಿನ
ಅಂಗಡಿ ಇಟ್ಟಿರುವನು….

ಕುಸುರಿ ಕೆಲಸದಲ್ಲಿ ಅವನ
ತಾಯಿಯದು ಪಳಗಿದ ಕೈ…

ಅವನ ತಂಗಿ ಜಾಣೆ ಧೀರೆ
ನನ್ನ ಸಹಪಾಠಿ….

ಅವನು ಸರಳ ಸಜ್ಜನ….
ಸೀದಾ-ಸಾದ…

ಎಷ್ಟು ವಿಚಿತ್ರ ಈ ಜಗತ್ತು !
ಕೆಲವರು ರಕ್ತ ಹರಿಸಲು ಆತುರರಾಗಿದ್ದಾರೆ
ಹಲವರು ರಕ್ತ ಬೆರೆಸಲು ಕಾತುರರಾಗಿದ್ದಾರೆ

ನಾವೋ…ಪರಸ್ಪರ ಅರಿಯಲು,ಪಡೆಯಲು
ಹಂಬಲಿಸುತ್ತಿದ್ದೇವೆ….

ಅಯ್ಯೋ…..
ಎಲ್ಲಕ್ಕಿಂತ ಮೊದಲು ಅವನ ಒಬ್ಬನೇ
ಅಲ್ಲಾಹುವಿನನ್ನು ನಾನು ಒಪ್ಪಿಕೊಳ್ಳಬೇಕು !
ನನ್ನ ಕೋಟಿ ದೇವರುಗಳನ್ನು
ಅವನು ತಬ್ಬಿಕೊಳ್ಳಬೇಕು…!!

ಎಷ್ಟು ಕಷ್ಟ ಸೂರ್ಯ ಸ್ಪಷ್ಟ
ಪ್ರಕೃತಿ ಹರಸಬೇಕು….

(ಹಳೆಯ ಪುಸ್ತಕ ಕೊಡವಿ ಇಡುತ್ತಿದ್ದೆ… ಇದು
ಇವತ್ತೇ ಸಿಗಬೇಕೇ??)

 

‍ಲೇಖಕರು avadhi

14 February, 2018

2 Comments

  1. Anasuya M R

    ನೆನಪಿನಲ್ಲಿ ಉಳಿಯುವ ಉತ್ತಮ ಕವನ

  2. Kusumapatel

    ಮನ ಮುಟ್ಟುವ ಕವಿತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading