ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನನಗೆ ಸಿಕ್ಕವರೆಲ್ಲರೂ ಕಳೆದುಕೊಂಡವರೇ ಆಗಿದ್ದರು…'

– ಪಿ ಮಂಜುನಾಥ

ನನ್ನ ಮನೆಯ
ದೀಪವೆಂದರೆ
ಕತ್ತಲೆಯ ತುರುಬಿಗೆ
ಮುಡಿಸಿದ
ಮಲ್ಲಿಗೆ ಹೂವಿನ ದಂಡೆ…!
*
ಕೂಡು ಸಂತೆಯಲ್ಲಿ
ಕಳೆದು ಹೋದ ನನಗೆ
ಸಿಕ್ಕವರೆಲ್ಲರೂ
ಕಳೆದುಕೊಂಡವರೇ ಆಗಿದ್ದರು…!
*

ನನ್ನನ್ನು
‘Half ‘ ಎಂದು
ಕರೆದವರ ಮನಸ್ಸುಗಳೆಂದೂ
Full ಆಗಲೇ ಇಲ್ಲ…!
*
ಹರಕಲು ಬೂಟುಗಳ
ಹೊಲೆದಷ್ಟೂ
ಪಾದಗಳನು
ಮುಚ್ಚಲು ಯತ್ನಿಸಿದವು;
ಅವನ್ನು ಕಂಡ ವಿಕ್ಷಿಪ್ತರು
ನನ್ನನ್ನು ಅಳೆದಳೆದು
ಪಾದಗಳನು ಬೆತ್ತಲಾಗಿಸಿದರು.
*
ನಂಬಿದ ಅಂಬಿಗ
ಕೈಕೊಟ್ಟ:
ಹರಾಮಿ
ಮನಸ್ಸು ಕಾಲನ ತೆಕ್ಕೆಯಲ್ಲೂ
ಭರವಸೆಯ ರೆಕ್ಕೆಗಳ
ಕನಸು ಕಾಣತೊಡಗಿತು…!
 

‍ಲೇಖಕರು G

2 July, 2014

4 Comments

  1. vijaykanth patil

    kavithe musth adavappa manjanna…

  2. smitha Amrithraj

    chennaagide kavite-smitha

  3. mmshaik

    too good..!

  4. manjunath.p

    Thank u vijaykantanna and all..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading