ಗಜಲ್
ಸುರೇಶ ಎಲ್ ರಾಜಮಾನೆ
ಜಗತ್ತು ನೂಕಿಬಿಟ್ಟಿದೆ ಸಂಸಾರದ ಸಾಗರದಲ್ಲಿ ಭೂಮಿಯಲಿ ಬಿತ್ತಿದಂತೆ,
ಬೀಜ ಸಹಜ ಮುಳುಗಿ ಮೃದುವಾಗಿ ಮೊಳಕೆಯೊಡೆಯಲೇಬೇಕು|
ಅಲೆಗಳೆಲ್ಲ ಬದುಕಲು ಒದ್ದಾಡುತ್ತಿವೆ ದಡದಲ್ಲಿ ನೋಡುಗರ ಕಣ್ಣಿಗೆ
ಹಬ್ಬವನ್ನುಂಟು ಮಾಡಿ ಹಣ ಕೊಟ್ಟಾದರೂ ನೋಡಿ ಆನಂದಿಸಲೇಬೇಕು|
ಅವರವರ ಕಷ್ಟ ಅವರವರಿಗೆ ಗೊತ್ತಾಗುವುದು ಹಾಗಂತ,
ಸುಮ್ಮನಿದ್ದರೇ ಒಂದಿಲ್ಲೊಂದು ದಿನ ನಾವು ಅನುಭವಿಸಲೇಬೇಕು|
ಎಲ್ಲರೂ ಬಲ್ಲವರಾದರೂ ಎಡವುವವರು ಇರುವಾಗ ನಡೆಯುವವರು
ನಡೆಯುವಾಗ ನಡೆದದ್ದನ್ನೆಲ್ಲ ಇಡಿ-ಇಡಿಯಾಗಿ ನೆನಸಿಕೊಳ್ಳಲೇಬೇಕು|

ಕಷ್ಟವನ್ನು ಸಹಿಸಿಕೊಂಡು ನಷ್ಟವ ಅನುಭವಿಸುವಾಗ ಪಟ್ಟ
ಪ್ರಯತ್ನಗಳ ಮೇಲೊಮ್ಮೆ ವಿಫಲತೆಗೆ ಉತ್ತರವಾಗಿ ಕಣ್ಣು ಹಾಯಿಸಲೇಬೇಕು|
ಕಲಿತ ಪಾಠಕೆ ಪ್ರಶ್ನೆ ಪ್ರಶ್ನೆಗೊಂದು ಉತ್ತರ ಹುಡುಕಲು ತತ್ತರಿಸುವಾಗ
ಸೂತ್ರ ಹಚ್ಚಿ ಉತ್ರ ಬಿಡಿಸೋವಾಗ ಪಾತ್ರಗಳಬಗ್ಗೆ ಚಿತ್ರಿಸಲೇಬೇಕು|
ಕಳೆದ ಕ್ಷಣಗಳ ದುಡಿದ ದಿನಗಳ ಮೇಲೆ ನೆನಪೊಂದು ನಿದ್ರಿಸುವಾಗ
ಕನಸೊಂದು ಮೊಳೆತು ಒಳಿತು-ಕೆಡಕುಗಳನರಿತು ಎಚ್ಚರವಾಗಿರಲೇಬೇಕು|
ಸುರಿದ ಹನಿಗಳಿಗೆ ಕಾರಣವ ಕೇಳುವಾಗ ಕಣ್ಣೊರೆಸಿದವರ ಕೈ
ಒರೆಸಿದ ರೀತಿ ಸಂತೈಸಿದ ಸಂಗತಿಯನ್ನೊಮ್ಮೆ ನೆನಸಿಕೊಳ್ಳಲೇಬೇಕು|
ತಿಂದು ಉಂಡ ಭಂಡ ಜಗಕೆ ದಂಡ ಜಗಮೊಂಡ ಎಂದುಚ್ಚರಿಸುವವರ ಮದ್ಯೆ
ಶುಧ್ಧ ನೀರಿನ ಹಾಗೆ ನಟಿಸಿದರೇ ಬೆಲೆ ಕಟ್ಟಿ ಬೀಸಾಕಿದವರನ್ನು ಮೆಚ್ಚಲೇಬೇಕು|
ನುರಿತ ನಾಗರಿಕರ ನಾಡಿನಲಿ ತುರ್ತಾಗಿ ತಪ್ಪೆಸಗಿದರೇ ತಪ್ಪದೇ
ತುಪ್ಪವನ್ನು ಕೈಚೆಲ್ಲಿ ಕಪ್ಪು ಬಣ್ಣದ ಕೈ ಹಿಡಿದು ಸೊತ್ತನ್ನೆಲ್ಲ ಕಿತ್ತೆಸೆಯಲೇಬೇಕು|
ಅಳಿದು ಹೋಗುವ ಬಾಳೀನಲಿ ಹೊಳೆದು ನಿಲ್ಲುವ ನಗೆಯಾಗಲು
ಬಗೆದು ನಿಲ್ಲಬೇಕು ನೋವಿನ ಹೊಗೆಯನ್ನು ಸಾಯಿಸಿ ಬದುಕಲೇಬೇಕು||






ಚೆನ್ನಾಗಿದೆ.
ತುಂಬಾ ಧನ್ಯವಾದಗಳು ಸರ್
Nice dosth…..
Nicen ‘n sir. Artha garbitaagive saalugalu.