ಮಳೆಗಾಲದಲ್ಲಿ
ಪ್ರಜ್ಞಾ ಮತ್ತೀಹಳ್ಳಿ
ಬಿಡುವೇ ಸಿಗುತ್ತಿಲ್ಲ ಪದ್ಯ ಬರೆಯಲು
ಮುಂಗಾರಿನ ಹಂಗಾಮಲಿ
ಕೂಗಿಸಬೇಕು ನನ್ನ ಕುಕ್ಕರು
ಇನ್ನೂ ಒಂದಿಷ್ಟು ಸಲ
ಒಳಗೆ ಕಾವು ಕೂಡಿಸಿಕೊಳ್ಳುತ್ತಿರುವ ಸೂರ್ಯ
ಒದ್ದೆ ಬಟ್ಟೆ ನೀರು ಹೀರಿ ಹೀರಿ
ಛಳಿ ಹಿಡಿದು ಬಂದುಬಿಡುತ್ತಾನೆ
ಸೀದಾ ಅಡಿಗೆಮನೆ ಕಿಡಕಿಯಿಂದ
ನಡುರಾತ್ರಿಯ ಜಡಿಮಳೆಯಲ್ಲಿ
ನಿದ್ದೆಗೆಡಿಸುವ ಚಂದಿರ
ಹಿಂಡುಮೋಡದ ಕರಿ ಮೆತ್ತಿ
ಬಚ್ಚಲಿಗಿಳಿಯುತ್ತಾನೆ
ನೊರೆ ಶ್ಯಾಂಪೂ ಸ್ನಾನಕ್ಕೆ
ಹೊಟ್ಟು ಹೋಗಿಸುವುದೇ ಕಷ್ಟ
ಚುಕ್ಕು ತಟ್ಟದೇ ನಿದ್ದೆ ಮಾಡುವುದಿಲ್ಲ
ಚುಕ್ಕಿ ಮಕ್ಕಳು ಹೊಡಸಲೆದುರ
ಸೊಳ್ಳೆಪರದೆಯಲಿ ಬೆಚ್ಚಿ ಬೀಳುತ್ತವೆ
ಪದೇಪದೇ ಗುಡುಗು ಸಿಡಿಲ ಸದ್ದಿಗೆ
ಅಂಡಲೆದು ಥಂಡಿ ಹಿಡಿಸಿಕೊಂಡ
ಗಾಳಿ ನುಸುಳುತ್ತದೆ ತಣ್ಣಗೆ
ಎದೆಗೆ ವಿಕ್ಸ ಸವರಿಕೊಂಡು ಕಷಾಯ
ಗುಟುಕರಿಸಲು
ಇದೆಷ್ಟನೆಯ ಬರ್ತಡೆಯೋ
ಲೆಕ್ಕ ತಪ್ಪಿದೆ ಮುಂಗಾರಿಗೆ
ಅಯ್ಯೊ ವೇಳೆಯೇ ಸಿಗುತ್ತಿಲ್ಲ
ಮುಂಗಾರಿನ ಹಂಗಾಮಲಿ






ಇದೆಷ್ಟನೆಯ ಬರ್ತಡೆಯೋ
ಲೆಕ್ಕ ತಪ್ಪಿದೆ ಮುಂಗಾರಿಗೆ
ಆದರೂ ಪಾಯಸ ಮಾಡಬೇಕಂತೆ
ಅಯ್ಯೊ ವೇಳೆಯೇ ಸಿಗುತ್ತಿಲ್ಲ
ಮುಂಗಾರಿನ ಹಂಗಾಮಲಿ…very nice…tumbaa arthapurnavaada kavya….
ಪದ್ಯ ಬರೆಯಲು ಆಗುತ್ತಿಲ್ಲ ಎಂದುಕೊಂಡೇ ಬರೆದಿರಿ… ಚೆನ್ನಾಗಿದೆ
payasadate sihi..kavana
Tumbaa chennaagide kavite..
chennagide kavite madam
ಇಷ್ಟವಾಯ್ತು.
super madam
ಇದೆಷ್ಟನೆಯ ಬರ್ತಡೆಯೋ
ಲೆಕ್ಕ ತಪ್ಪಿದೆ ಮುಂಗಾರಿಗೆ
ಆದರೂ ಪಾಯಸ ಮಾಡಬೇಕಂತ
……ಸೊಗಸಾದ ರೂಪಕ
ತುಂಬಾ ಚೆನ್ನಾಗಿದೆ,
ತುಂಬಾಚೆನ್ನಾಗಿದೆ
cholo iddu padya… khushi aaatu.
ಕವಿತೆ ತುಂಬಾ ಚೆನ್ನಾಗಿದೆ