ವಿನತೆ ಶರ್ಮ
ಕೊಳದೊಳಗಿನ ನೆರಳು
ದಿಟ್ಟಿಸಿ ನಿಂತ ನೀರೆ
ಅವಳದಲ್ಲ ಆ ಭ್ರಮೆ
ಕನ್ನಡಿಯಲ್ಲಿದ್ದ ಸತ್ಯಕ್ಕೆ
ಅವರ ಅನಿವರತ ಹುಡುಕಾಟ.
ಅವರಿಗೂ ಇತ್ತು ಗುರಿ
ಬೀಜ ಬಿತ್ತುವ ಪರಿ
ಕೇಳಲಿಲ್ಲ ಭೂಮಿಯ.
ಚೌಕಟ್ಟುನಿಯಮಗಳ
ಬಂಧಿತ ಮೈ ಮನಸ್ಸು.
ಕೊಳದ ನೆರಳ ಹುಡುಗಿಯ
ನಗು ಅವರ ಮರೀಚಿಕೆ
ಹೊನ್ನ ಜಿಂಕೆಯೇರಿ ಓಡುತ್ತಾ
ನಕ್ಕ ದೇವಿಯರಿಗೆ ಬಾರೆಂಬ ಬಿನ್ನಹ
ತುಳಿದ ತಮ್ಮದೇ ಅರ್ಧಕ್ಕೆ
ಪರಂಪರೆಯ ಕುಡಿಕೆಯಲ್ಲಿ
ಬಚ್ಚಿಟ್ಟಿರುವ ಅರ್ಥಕ್ಕೆ
ಪರಿಪರಿಯ ಹುಡುಕಾಟ.
ವಿಧಿವಿಧಾನದಲ್ಲಿ ಅರಳುವ
ಪುರುಷೋತ್ತಮರು
ಹುಟ್ಟಿಸುವ ರಕ್ತಸಿಕ್ತ
ದೇವಿಯರ ಕೊಂಕು
ಮರುಕಳಿಸುವ ದಶಮಿಗಳಲ್ಲಿನ
ನಿಜ-ಭ್ರಮೆ ಜೀಕುವಿಕೆ.





0 Comments