ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವರು ಕಿವಿ ಕಳೆದುಕೊಂಡಿದ್ದಾನೆ..

 

ಎನ್.ಶಂಕರ ಕೆಂಚನೂರ

 

ಮದ್ದು ಗುಂಡುಗಳ
ಕಿವಿಗಡಚಿಕ್ಕುವ ಸದ್ದು
ದೇವರನ್ನು ಕಿವುಡಾಗಿಸಿದೆ

ವ್ಯರ್ಥ ಪ್ರಾರ್ಥಿಸದಿರಿ
ಇಲ್ಲಿಂದ
ನಿಮ್ಮ ನಿತ್ಯದ ಪ್ರಾರ್ಥನೆಯ ಸದ್ದು
ದೇವರಿಗೆ ತಲುಪಲಾರದು

ಅದಕ್ಕೆಂದೇ ಪ್ರಾರ್ಥಿಸುವವರನ್ನು
ಕಿವಿಯಿಲ್ಲದ ದೇವರು
ತನ್ನಲ್ಲಿಗೇ ಕರೆಸಿಕೊಳ್ಳಲಿದ್ದಾನೆ

ಅಲ್ಲಿ ಹೋಗಿ
ಮತ್ತೆ ಇಲ್ಲಿನ ಕುರಿತು ದೂರು ಹೇಳದಿರಿ
ದೇವರು ಕಿವಿ ಕಳೆದುಕೊಂಡಿದ್ದಾನೆ

‍ಲೇಖಕರು Avadhi GK

7 March, 2018

2 Comments

  1. ಕೈದಾಳ್ ಕೃಷ್ಣಮೂರ್ತಿ

    nice

  2. nutana doshetty

    Nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading