ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ದೃಷ್ಟಿಯ ಸೃಷ್ಟಿಯೇ ಅಪರೂಪ, ಇದೇ ಇರಬಹುದೇ….'

ರಮೇಶ್ ನೆಲ್ಲಿಸರ

ಮೇಲೇರುತಿಹ ಮನೆಗಳ ತಲೆಯಲ್ಲೊಂದೊಂದು
ಭಯಾನಕ ಬೆದರುಬೊಂಬೆ!
ಕಣ್ಗಳಗಲಿಸಿ,ಕಿವಿಗಳರಳಿಸಿ
ತಿರುವಿದ ದಪ್ಪ ಮೀಸೆ ,ಇಳಿಬಿಟ್ಟ ಜಿಹ್ವೆ
ತಲೆಯ ಮೇಲೆರಡು ಕೋಡು ಕಳಶವಿಟ್ಟಂತೆ

ಗಂಭೀರವದನ,ಗಂಟಿಕ್ಕಿದ ಹುಬ್ಬು
ನಗುವಿನ ಛಾಯೆ ಎಂದೋ ಮಬ್ಬು
ಮನೆಕಟ್ಟುವವರ ಗೋಳು ಗೊತ್ತಿರಬೇಕು ಕಲೆಕಾರನಿಗೆ;
ತನ್ನ ವೃತ್ತಿ ಮತ್ತೆ ಮಾಲಿಕರ ಮನೋವೃತ್ತಿ…!
 
ಕಣ್ಣಿಡುವವರ ಕೊಲ್ಲುವ ನೇರನೋಟ
ಸುಡಲೆಂದೇ ಪೋಣಿಸಿರುವ
ಉರಿಮೆಣಸು,ಗಜನಿಂಬೆ
ದೃಷ್ಟಿಯ ಸೃಷ್ಟಿಯೇ ಅಪರೂಪ
ಇದೇ ಇರಬಹುದೇ ಮನುಜನ ನಿಜರೂಪ….!?
 

‍ಲೇಖಕರು G

30 July, 2014

3 Comments

  1. Anonymous

    super

  2. Indiresh

    ಚೆನ್ನಾಗಿದೆ ಕವನ.

  3. mmshaik

    good one…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading