ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೀಪವು ನಿನ್ನದೆ, ಗಾಳಿಯು ನಿನ್ನದೆ…

ಸತೀಶ ಪಾಟೀಲ್, ಕೊಟ್ಟೂರು

2036702805_8a845a730e

ಅದೊಂದು ಕತ್ತಲ ಸಾಮ್ರಾಜ್ಯ…. ಆ ರಾಜ್ಯದ ತುಂಬಾ ಎಲ್ಲೆಲ್ಲೂ ಕತ್ತಲು… ಅಲ್ಲಿ ಕತ್ತಲ ದೊರೆಯದೇ ದಬರ್ಾರ್….

ಅದೆಲ್ಲಿತ್ತೊ ಏನೊ.. ಒಂದು ಪುಟ್ಟ ಕಿರಣ… ಅತೀ ಚಿಕ್ಕ ಕಿರಣ ಈ ಕತ್ತಲ ಸಾಮ್ರಾಜ್ಯಕ್ಕೆ ಎಂಟ್ರಿ ಆಯ್ತು….

ಅಷ್ಟೇ….. !

ಕತ್ತಲ ಸಾಮ್ರಾಜ್ಯದ ಚಿತ್ರಣವೇ ಬದಲಾಯಿತು…

ಕಿರಣ ಎಲ್ಲೆಲ್ಲಿ ಹೊಗುತ್ತೊ.. ಅಲ್ಲೆಲ್ಲಾ ಬೆಳಕು ಬೀರಲಾರಂಭಿಸಿತು….

ಕತ್ತಲ ದೊರೆಗೆ ಮೊದಲ ಬಾರಿಗೆ ದಿಗಿಲಾಯಿತು… ತನ್ನ ರಾಜ್ಯದಲ್ಲಿ ಬೆಳಕು ಬೀರುತ್ತಿರುವ ಬಗ್ಗೆ ಅಸಮಧಾನ ಉಂಟಾಯಿತು…

ಅಷ್ಟರಲ್ಲಾಗಲೇ ಕಿರಣದ ಶಕ್ತಿ ಬೆಳೆಯುತ್ತಾ ಬಂದಿತ್ತು…. ಈ ಕಿರಣವೂ ತುಂಬಾ ಕಿಲಾಡಿ…

ಒಂದು ದಿನ ಕತ್ತಲ ರಾಜನನ್ನು ನೋಡಲು ಅರಮನೆಗೇ ತೆರಳಿತು…

ಇದುವರೆಗೂ ಕಿರಣ ತಿರುಗಾಡಿದ ಸ್ಥಳವೆಲ್ಲಾ ಬೆಳಕಾಗಿತ್ತು…

ಅರಮನೆಯಲ್ಲೂ ಬೆಳಕು ಮೂಡಿಸುವ ಆಸೆ ಆ ಕಿರಣದ್ದು……

ಕಿರಣ ಅರಮನೆಗೆ ಬರುವ ಸುದ್ದಿ ತಿಳಿದ ಕತ್ತಲ ರಾಜ, ಗೊತ್ತಾಗದಂತೆ ಅಡಗಿಕೊಂಡ…

ಕಿಲಾಡಿ ಕಿರಣ ಅದನ್ನು ಪತ್ತೆ ಹಚ್ಚಿತು… ಈಗ ಕಿರಣನಿಗೆ ಹೆದರಿದ ಕತ್ತಲ ರಾಜ ಓಡಲಾರಂಭಿಸಿದ….

ಕಿರಣ, ರಾಜನನ್ನು ಹಿಂಬಾಲಿಸಲಾರಂಭಿಸಿತು… ಕಿರಣ ಹಿಂಬಾಲಿಸಿದ ಸ್ಥಳವೆಲ್ಲಾ ಬೆಳಕಾಯಿತು…

ಮತ್ತು ಓಡಿದಂತೆ ಅದರ ಶಕ್ತಿ ಹೆಚ್ಚಾಗುತ್ತಾ ಬಂತು…. ಕತ್ತಲ ದೊರೆ ಓಡಿದಂತೆಲ್ಲಾ ಸುಸ್ತಾಗತೊಡಗಿದ…

ದೊರೆ ಮರವೇರಿದ.. ಕಿರಣ ಅಲ್ಲಿಗೂ ಬಂತು… ಗುಹೆ ಸೇರಿದ, ಅಲ್ಲಿಯೂ ಕಿರಣ ಹಾಜರ್…

ಹಾಗೆ ಓಡುತ್ತಾ ಓಡುತ್ತಾ ಕತ್ತಲ ರಾಜ ಸೋಲುವ ಸ್ಥಿತಿ ತಲುಪಿದ…

ಇನ್ನೇನು ಕತ್ತಲು ಸಂಪೂರ್ಣ ಪರಾಜಯ ಹೊಂದಬೇಕು ಅನ್ನುವಷ್ಟರಲ್ಲಿ…

ಅಲ್ಲೊಬ್ಬ ಮನುಷ್ಯ ನಿದ್ದೆಯಿಂದ ಆಕಳಿಸುತ್ತಿದ್ದ ಅಷ್ಟೇ….

ಕತ್ತಲ ದೊರೆ ಮನುಷ್ಯನ ಬಾಯಲ್ಲಿ ಹೋದ….

ಇನ್ನೇನು ಕಿರಣವೂ ಮನುಷ್ಯನ ಬಾಯಲ್ಲಿ ಎಂಟ್ರಿ ಆಗಬೇಕು ಅನ್ನುವಷ್ಟರಲ್ಲಿ

ಆ ವ್ಯಕ್ತಿ ಬಾಯಿ ಮುಚ್ಚಿದ…

ಕತ್ತಲ ದೊರೆ ಮನುಷ್ಯನ ಬಾಯಿ ಮೂಲಕ ಹಾದು ಹೃದಯ ಸೇರಿದ…

ಮನುಷ್ಯನ ಹೃದಯ ಪ್ರವೇಶಿಸುವುದು ತಿಳಿಯದೇ ಕಿರಣ ಅಲ್ಲೇ ಸುತ್ತಲಾರಂಭಿಸಿತು…..

ಕತ್ತಲು ನಮ್ಮ ಹೃದಯ ಪ್ರವೇಶಿಸಿ ಸಾವಿರಾರು ವರ್ಷಗಳಾಗಿವೆ….

ಇನ್ನು ನಮ್ಮೊಳಗಿನ ಅಂಧಕಾರ ಹೊಗಿಲ್ಲ… ಜಗತ್ತಿನ ಎಲ್ಲರ ಹೃದಯದೊಳಗೆ ಜ್ನಾನದ

ಜ್ಯೋತಿ ಹಚ್ಚುತ್ತೇನೆಂದ ಸ್ವಾಮೀಜಿಗಳು, ಧರ್ಮಗುರುಗಳು, ತತ್ವಜ್ನಾನಿಗಳು ಸೋತು ಹೋಗಿದ್ದಾರೆ….

ಜಗತ್ತನ್ನು ತಿಳಿಗೊಳಿಸುತ್ತೇವೆ ಎಂದು ಹೇಳುವ ಇವರು, ಅದನ್ನು ಇನ್ನಷ್ಟು ಕಲಕುತ್ತಿದ್ದಾರೆ…

ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ ಮನುಷ್ಯ, ಮನುಷ್ಯರನ್ನೇ ಬೇಟೆಯಾಡುತ್ತಿದ್ದಾನೆ…..

ಹೆಚ್ಚೇನು ಹೇಳಲಾರೆ….

ನಾವು ನಮ್ಮೊಳಗೆ ಹಣತೆ ಹಚ್ಚೋಣ….

ಆ ಬೆಳಕಿನಡಿಯಲ್ಲಿ ಜಾತಿ-ಮತ, ಬಡವ-ಶ್ರೀಮಂತ ಯಾವುದೇ ಬೇಧವಿಲ್ಲದ

ಜಗತ್ತನ್ನು ನಿರ್ಮಿಸೋಣ…..

ಆ ಮೂಲಕ ನಮ್ಮೊಳಗಿನ ಕತ್ತಲು ಓಡಿಸೋಣ….

ಈ ದೀಪಾವಳಿ ಅಂತಹದ್ದೊಂದು ಅವಕಾಶಕ್ಕೆ ಕಾರಣವಾಗಲಿ….

ನಿಮಗೆ, ನಿಮ್ಮ, ಬಂಧುಗಳಿಗೆ, ಗೆಳೆಯ-ಗೆಳತಿಯರಿಗೆ

ದೀಪಾವಳಿ ಹಬ್ಬದ ಶುಭಾಶಯಗಳು……

ದೀಪವು ನಿನ್ನದೆ, ಗಾಳಿಯು ನಿನ್ನದೆ…

ಆರದಿರಲಿ ಬೆಳಕು…

ಹಡಗು ನಿನ್ನದೆ, ಕಡಲು ನಿನ್ನದೆ…

ಮುಳುಗದಿರಲಿ ಬದುಕು…

(ಓಶೋ ರಜನೀಶ್ ಬರಹದಿಂದ ಕದ್ದ ಕತೆ)

‍ಲೇಖಕರು avadhi

21 October, 2009

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

3 Comments

  1. shwetha

    very nice story . . .thank you

  2. Asha

    It’s a Beautiful thought. Thank u.

  3. Sandhya

    awesome ! kaddiddu saarthaka 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading