ಈ ಸಾಲಿನ ಪ್ರತಿಷ್ಠಿತ ‘ಶ್ರೀವಿಜಯ ಸಾಹಿತ್ಯ ಪ್ರಶಸ್ತಿ‘ಗೆ ಯುವ ಕವಯತ್ರಿ ಜ ನಾ ತೇಜಶ್ರೀ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರತೀ ವರ್ಷ 40 ವರ್ಷದೊಳಗಿನ ಯುವ ಲೇಖಕರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡುತ್ತದೆ. 2013 ನೆ ಸಾಲಿನ ಪ್ರಶಸ್ತಿಗೆ ಜ ನಾ ತೇಜಶ್ರೀ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಪ್ರಶಸ್ತಿ ಫ್ಹಲಕ ಹಾಗೂ 1,11,111 ರೂ ನಗದನ್ನು ಒಳಗೊಂಡಿದೆ.
ತೇಜಶ್ರೀ ಅವರ ಸಮಗ್ರ ಸಾಹಿತ್ಯವನ್ನು ಪರಿಗಣಿಸಿ ಒಮ್ಮತದಿಂದ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಜ ನಾ ತೇಜಶ್ರೀ ಅವರು ಐದು ಕವನ ಸಂಕಲನಗಳನ್ನು ಹೊರ ತಂದಿದ್ದಾರೆ. ಲಯ, ತಿಳಿಗೊಳ, ಕತ್ತಲೆಯ ಬೆಳಗು, ಉಸ್ರುಬುಂಡೆ ಹಾಗೂ ನೀಳ್ಗಾವ್ಯ ‘ಅವನರಿವಲ್ಲಿ’ ಇವರ ಕವನ ಸಂಕಲನಗಳು.
‘ತೇಜಶ್ರೀ ಕವನಗಳಲ್ಲಿ ಭಾಷೆ ಬೆದರಿ, ಬೆವರಿ, ಮಿಂಚಿ, ಮಳೆಗರೆದು ಸುಖದ ಅನುಭಾವವನ್ನೂ, ಸಾವಿನ ಅನುಭವವನ್ನೂ, ಮರುಹುಟ್ಟಿನ ವಿಸ್ಮಯವನ್ನೂ ಕೊಡುತ್ತ ಕಾವ್ಯವಾಗುತ್ತದೆ’ ಎಂದು ಯು ಆರ್ ಅನಂತಮೂರ್ತಿ ಬಣ್ಣಿಸುತ್ತಾರೆ.
ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ನಲ್ಲಿ ಎಂ ಎ ಹಾಗೂ ಭಾಷಾಂತರದಲ್ಲಿ ಡಿಪ್ಲೊಮೋ ಪಡೆದ ತೇಜಶ್ರೀ ನೆರೂದಾ ಹಾಗೂ ಅಲಿ ಸರ್ದಾರ್ ಜಾಫ್ರಿ ಅವರ ಕವಿತೆಗಳನ್ನು ‘ಕಡಲ ತಡಿಯ ಗುಡಾರ’ ಹಾಗೂ ‘ಬೆತ್ತಲೆ ಫಕೀರ’ ಸಂಕಲನಗಳ ಮೂಲಕ ಕನ್ನಡಕ್ಕೆ ತಂದಿದ್ದಾರೆ. ಇದಲ್ಲದೆ ನೀನಾಸಂಗಾಗಿ ‘ವೋಲೆ ಶೋಯಿಂಕಾನ ಸಾವು’ ಹಾಗೂ ‘ರಾಜನ ಕುದುರೆಸವಾರ’ ನಾಟಕಗಳನ್ನುಅನುವಾದಿಸಿದ್ದಾರೆ. ‘ಚೀನೀ ತತ್ವಶಾಸ್ತ್ರದ ಕಥೆ’ ಹಾಗೂ ‘ಭಾರತೀಯ ರಾಷ್ಟ್ರೀಯ ಚಳವಳಿ’ ಇತರ ಅನುವಾದಗಳು.
ಕವಿ ರವೀಂದ್ರರನ್ನು ಕುರಿತು ‘ದೇಶಕಾಲ’ಕ್ಕೆ ವಿಶೇಷ ಸಂಚಿಕೆಯನ್ನು ರೂಪಿಸಿಕೊಟ್ಟದ್ದೂ ಅಲ್ಲದೆ, ಅವರ ಕವನಗಳನ್ನು ಸಂಪಾದಿಸಿದ್ದಾರೆ.






ಖುಷಿಯಾಯ್ತು ತೇಜಶ್ರೀ. ಅಭಿನಂದನೆಗಳು.
nimma kathe kavitegalannu allalli odi istapatta sahasra abhimaanigala paiki naanoo obba tejasri avare, nimage nammellara hardika abhinandanegalu
kumvee
ಜ .ನಾ .ತೇಜಶ್ರೀ ರವರಿಗೆ ಶುಭಾಶಯಗಳು .
‘ಕವಯಿತ್ರಿ’-ಎಂಬ ಕಾಗುಣಿತ ಸರಿಯಾದದ್ದು ಅಂತ ಅನಿಸುತ್ತೆ .ಕವಯತ್ರಿ ,ಕವಿಯಿತ್ರಿ ,ಕವಿಯತ್ರಿ ಇತ್ಯಾದಿ ಪ್ರಯೋಗಗಳು ಅಲ್ಲಲ್ಲಿ ಕಂಡುಬರುತ್ತವೆ .
ಎಲ್ಲವೂ ಸರಿಯೆ ? ಯಾವುದನ್ನು ಒಪ್ಪಿಕೊಳ್ಳೋಣ ? – ತಿಳಿದವರು ದಯವಿಟ್ಟು ತಿಳಿಸಬೇಕು .
ತೇಜಶ್ರೀ ಯವರಿಗೆ ಅಭಿನಂದನೆ, ನಿನ್ನ ಬರಹದ ಚೈತನ್ಯ ಇಮ್ಮಡಿಯಾಗಲಿ. ಖುಷಿಯಾಯ್ತು
ಅಭಿನಂದನೆಗಳು ಮೇಡಂ.
ಅಭಿನಂದನೆಗಳು ತೇಜಶ್ರೀ
ತುಂಬಾ ಖುಶಿಯಾಯ್ತು….
ತೇಜಶ್ರೀ ಮೇಡಂ… ಹೃತ್ಪೂರ್ವಕ ಅಭಿನಂದನೆಗಳು 🙂
ಅಭಿನಂದನೆ ತೇಜಶ್ರೀ.
ಅಭಿನಂದನೆಗಳು ಮೇಡಂ.
Tejashriyavarige abhinandanegalu
hrudayapurvaka abhinandanegalu…nimma avanarivalli pustike ninne tane odi mugiside avadhi adarabagge abhipraya kuda kalisalu baredittukondiddene…nimma kaavyavannu barahavannu adamyavaagi istapaduttene..nimma saahitya krushi nirantaravaagirali…
D.Ravivarma.. hosapete
ನಿನ್ನ ಬರಹದ ಚೈತನ್ಯ ಇಮ್ಮಡಿಯಾಗಲಿ. ಖುಷಿಯಾಯ್ತು
ಅಭಿನಂದನೆಗಳು ತೇಜಶ್ರೀ
ತೇಜಶ್ರೀ ಅವರಿಗೆ,
ಅಭಿನಂದನೆಗಳು..!
ಬಹಳ ಖುಷಿಯಾಯ್ತು.
ಕಂಗ್ರಾಟ್ಸ್. ಎಷ್ಟು ಖುಷಿಯ ವಿಷಯ!!
ಅಭಿನಂದನೆಗಳು
ನೀವು ಬೆಳಿದ ನಂತರ ನಿಮ್ಮನ್ನು ಹಿಂಬಾಲಿಸುವ ಚಿಕ್ಕ ಯುವ ಕವಿಗಳಿಗೆ ಬೆಳಿಸಿ
Congratulations to Tejashree
Congrats Madam.. ಸಾಧನೆ ಹೀಗೆ ಮುಂದುವರೆಯಲಿ 🙂
abhinandanegalu Tajashriyavarige 🙂
– Prasa DV
ತೇಜಶ್ರೀ ಅಭಿನಂದನೆಗಳು.ತಮ್ಮ ಸಾಹಿತ್ಯ ಸಾವಿರವಾಗಲಿ,ಪ್ರಶಸ್ತಿ-ಪುರಸ್ಕಾರಗಳು ಇಮ್ಮಡಿಯಾಗಲಿ.
ಅಭಿನಂದನೆಗಳು ಅಕ್ಕಾವ್ರೆ:-)
ABHINANDANEGALU. Nimma Melina nireekshegalu hecchuttive. Olleya,Gattisahityada nirekshaneyallirutteve.
abhinandanegalu
ಶ್ರೀಮತಿ ಜ.ನಾ.ತೇಜಶ್ರೀ ಡಾ.ರವಿಶಂಕರ್ ಅವರಿಗೆ ಸಂದ ಗೌರವ ಹಾಸನ ಜಿಲ್ಲೆಗೆ ಹೆಮ್ಮೆ ತರುವ ಸಂಗತಿ. ಪುಕ್ಕಟೆ ಪ್ರಚಾರದ ಬೆನ್ನು ಹತ್ತದೆ, ನಾಡಿನ ತುಂಬೆಲ್ಲಾ ನನಗೆ ಸಾಹಿತಿಗಳು ಪರಿಚಯವಿದ್ದಾರೆ ಎಂದು ಕೊಚ್ಚಿಕೊಳ್ಳದೆ, ತಾವಾಯಿತು, ತಮ್ಮ ಬರವಣಿಗೆಯಾಯಿತು ಎನ್ನುವ ಸಾಹಿತ್ಯ ಕಾಯಕದಲ್ಲಿ ತೊಡಗಿರುವ ಜ.ನಾ.ತೇಜಶ್ರೀ ಅವರಿಗೆ ಇಂತಹ ಪುರಸ್ಕಾರಗಳು ಹೆಚ್ಚಾಗಲಿ ಎಂದು ಶುಭ ಕೋರುತ್ತೇನೆ.
ಮೇಡಂ ನಿಮ್ಮ ಕವಿತೆಗಳ ಅಭಿಮಾನಿ ನಾನು. ನಿಮಗೆ ಅಭಿನಂದನೆಗಳು.
best wishes & Congratulations.Let your work continue
RAGHU RAM G.N
K.R.PURAM
BANGALORE
ಅಭಿನಂದನೆಗಳು
Congrats!
Abhinandanaani 🙂
ತುಂಬ ಸಂತೋಷವಾಯಿತು. ತೇಜು ಅಕ್ಕ! ಹಾರ್ದಿಕ ಅಭಿನಂದನೆಗಳು
ನಿಮ್ಮೆಲ್ಲರ ಪ್ರೀತಿಗೆ ಕೃತಜ್ಞತೆಗಳು…ಜ.ನಾ.ತೇಜಶ್ರೀ
Nimma baravanigege U.R.Ananthamurthy gurugala abiprayave innondu prashasthi ,allave akka? Shubavagali……
congrats madam..
Abhinandanegalu Tejashree
congats madam udayakumar habbu
Congratulations:)
ಅಭಿನಂದನೆ ತೇಜಶ್ರೀ… ನಿಮ್ಮ ಬರಹದ ಸೊಗಡು ಮತ್ತಷ್ಟೂ ಹೆಚ್ಚಲಿ….
ja na tejashree Abhinandanegalu, nimma kavanagalannu odidene tumba chennagede hagu kavyadalli gattitana ede
suBhashayagalu
abhinandanegalu madam
Thanks to everyone. Tejashree
abhinandhanegaLu Thejashree
ಪ್ರತಿಷ್ಟಿತ ಪ್ರಶಸ್ತಿಗೆ ಭಾಜನರಾದ ನಿಮಗೆ ನಮ್ಮ ಕುಟುಂಬ ವರ್ಗದ ಪರವಾಗಿ ಅಭಿನಂದನೆಗಳು.
Abhinandanegalu.
ನಿಮ್ಮ ಕವಿತೆಗಳ ಧ್ಯಾನಕ್ಕೆ ಮತ್ತು ಅದ್ಬುತ ಸಾಧನೆಗೆ ಸಂದ ಗೌರವ ಇದಾಗಿದೆ. ಅಭಿನಂದನೆಗಳು ಮೇಡಂ.
Thank you…
congratulations 🙂 🙂
congrats madam