ವೈರಾಗ್ಯದ ಹಾಗೆ
ಬಂತು.
ಸಂಗ ಸಂಗಾತಿ ಅನಂಗರಂಗ
ಪಟ್ಟಾಂಗ ಮಾತುಕತೆ ಮುತ್ತು
ಮತ್ತು ಮತ್ತಷ್ಟು ಬೇಕು
ಎನ್ನಿಸುವ ಹೊತ್ತಿಗೆ ನಿಸ್ಸಂಗ
ಒಳಬಂದ ಹಾಗೆ ಬಂತು.
.
ಮರಣದ ಹಾಗೆ
ಬಂತು.
ಕಟ್ಟಿಸಿದ ಮನೆ ಹುಟ್ಟಿಸಿದ ಮಕ್ಕಳು
ತೊಟ್ಟಿಲು ಕಟ್ಟಿ ತೂಗಿ
ಗಟ್ಟಿಸಿದ ಜೋಗುಳ ಹಾಡುವಾಗ
ಪುತ್ರಶೋಕ ಎರಗಿದ
ಹಾಗೆ ಬಂತು.
.
ವಿಷಾದ ಪತ್ರದ ಹಾಗೆ
ಬಂತು.
ಜೀವನ ಹುರಿಗೊಳಿಸಿ ಭಾವಕ್ಕೆ
ಶಾಖ ಕೊಟ್ಟು
ಬೆಚ್ಚಗೆ ಮಾಡಿ ಬರೆದು ಕಳಿಸುವ
ಹೊತ್ತಿಗೆ ನಿರರ್ಥಕತೆ ಕಾಡುವ
ಹಾಗೆ ಬಂತು.
.
ಪ್ರೇಮದ ಹಾಗೆ
ಬಂತು.
ಕಂಡದ್ದು ಕಾಡಿದ್ದು
ಹನಿದದ್ದು ಹಂಬಲಿಸಿದ್ದು
ಎಲ್ಲ ಹರಳುಹರಳಾಗುವ ಕ್ಷಣ
ವಿರಹ ಅಪ್ಪಳಿಸುವ
ಹಾಗೆ ಬಂತು.
.
ನಡುವಯಸ್ಸಿನ ಹಾಗೆ
ಬಂತು.
ತುಂಬುಗೆನ್ನೆ, ಕಪ್ಪು ಕುರುಳು,
ಅಪ್ಪಲೆಂದೇ ಕಾದಿರುವ ದಪ್ಪ
ತೋಳು, ಎದೆಯೊಳಗೆ ಉರಿವಗ್ನಿ
ಕಣ್ಣಲ್ಲಿ ಮಂದಮಾರುತ
ತುಂಬಿದ ಯೌವನಕ್ಕೆ ಎರವಾಗುವ
ಬಿಳಿಕೂದಲ ಹಾಗೆ
ಬಂತು.
.
ಮಳೆ ಬಂತು.
ನಿರ್ಮೋಹಿ ಬೆಂಗಳೂರು
ನಿರ್ವಿಕಾರ ಮಳೆ.
ನಿರುಪಯುಕ್ತ ಧಾರೆ.
ಬೈಗಳು, ಅಸಹನೆ
ಒದ್ದೆ ಒದ್ದೆ ಮುಸ್ಸಂಜೆ
ಕಣ್ಣೀರು ತುಳುಕಿದ
ಹಾಗೆ ಬಂತು.







ಮಳೆ ಹಾಗೆಲ್ಲ ಬಂತೆ? ವೈರಾಗ್ಯದ ಹಾಗೆ, ಮರಣದ ಹಾಗೆ, ವಿರಹ ಅಪ್ಪಳಿಸಿದ ಹಾಗೆ…ಇದನ್ನೆಲ್ಲ ಓದಿದ ಮೇಲೂ ಮಳೆಯ ಮೇಲಿನ ಮೋಹ ಒಂದಿನಿತೂ ಕಡಿಮೆಯಾಗಿಲ್ಲ ನನಗೆ ಗಿರೀಶರವರೇ! but..liked your poem 🙂
aadare idu male bagge baredaddalla!-raju hegde
cha ide han!!
ಪಾಪ! ಬಡಪಾಯಿ ಮಳೆ ಮೇಲೆ ಇಷ್ಟೆಲ್ಲಾ ಅರೋಪಗಳೇ!!
adbhutha annodu bittu nannalli bere padagale illa jogi …