ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆದ ಹೊಸ ಕವಿತೆ: ಕೆಎಸ್ ನ ಇನ್ನಿಲ್ಲ

371ಚಿತ್ರ: ಸೃಜನ್

ಮದುವೆಯೆಂದರೆ

ಕೆಲವರಿಗೆ ತಮಾಷೆ

ಹಲವರಿಗೆ ಮೋಕ್ಷ.

ಎಲ್ಲೋ ಒಂದಷ್ಟು ಮಂದಿಗೆ

ಭೂಗತ ಸ್ಥಿತಿ, ನೆಮ್ಮದಿ, ನಿರಹಂಕಾರ ಮತ್ತು

ಪುನರುಜ್ಜೀವನ.

ಕಿರುಬೆರಳಿಗೆ ಕಿರುಬೆರಳು

ಜೋಡಿಸಿ ಮುತ್ತಿಕ್ಕಿದಾಗ

ಮದುವೆ ಹೀಗಲ್ಲವೆ ಅಂದಳು ಆಕೆ.

ಬೆರಳಿಗೆ ಉಂಗುರ

ತೋಳಿಗೆ ವಂಕಿ, ಸೊಂಟಕ್ಕೆ ಡಾಬು

ಕತ್ತಿಗೊಂದು ಅರಿಶಿನದಾರ

ಅವನಿಗೋ ಜೋಡಿ ಜನಿವಾರ.

ಎಲ್ಲಾ ಸಜ್ಜನ ಪ್ರೀತಿಗೂ

ಮದುವೆ ಕೊನೆ ನಿಲ್ದಾಣ.

ಅಲ್ಲಿಂದಾಚೆ ಅವಳದು ಪ್ರತಿಯೊಂದಕ್ಕೂ

ಮಮಃ

ಅವನು ಮಾತ್ರ ನಿರ್ಮಮ!

ಪೂರ್ವಾಶ್ರಮದ ನೆನಪಿನಿಂದಾಚೆ

ಜಾರಿದರೆ

ಬಾಲ್ಯದ ತೊರೆ. ಅದರಲ್ಲಿ ಈಸಾಡಿದರೆ

ಎಂದೋ ಪ್ರೀತಿಸಿದ ಶೀನ, ಕಿಟ್ಟಿ, ಜನ್ನ, ಕೇಶವ

ಮತ್ತು ಹೆಸರೇ ನೆನಪಿಲ್ಲದ

ಆಳು ಹುಡುಗನ ಹರವಾದ ಎದೆತೋಳು.

ಷ್… ನಿಧಾನ

ಮಗಳು ಎದ್ದಾಳು.

ಮದುವೆಯೆಂದರೆ ಕಾಲು

ದಾರಿ.

ಈ ದಡದಿಂದ ಆ ದಡಕ್ಕೆ

ದುಗುಡಕ್ಕೆ ಬಿನ್ನಾಣಕ್ಕೆ

ಯಾರೋ ಇದ್ದಾರೆ ಎಂಬ ಭರವಸೆಗೆ.

ನಂಬಿಕೆ ಸುಳ್ಳಾಗುವ ವಿಷಾದಕ್ಕೆ.

ವಿಷಾದಯೋಗದ

ಅನಿವಾರ್ಯ ಸಂಭ್ರಮಕ್ಕೆ.

ಯಾರೋ ಈಸಾಡಿ ಹೋದ

ದೇಹದ ವ್ಯಾಮೋಹ ತೊರೆಯಬಲ್ಲ

ವಿರಾಗಕ್ಕೆ, ನಿರ್ಮೋಹಕ್ಕೆ.

ಎಲ್ಲಿಂದಲೋ ಬೀಸಿಬಂದ

ಬಿಸಿಗಾಳಿಗೆ ಕನ್ನಡಕ

ಮಂಜಾಗುತ್ತಿದೆ.

ಕಣ್ಣಿನ ಪೊರೆ ತೆಗೆಯಬಹುದು

ಕನ್ನಡಕದ್ದು?

ಕೆಎಸ್ ನರಸಿಂಹಸ್ವಾಮಿ

ಇನ್ನಿಲ್ಲ

‍ಲೇಖಕರು avadhi

5 August, 2009

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

3 Comments

  1. suresh kota

    ವಾವ್! ಇದು ಅದೇ ಹಳೆಯ ಜೋಗಿ!

  2. Rohit Ramachandraiah

    Jogi @ his best ….
    ಎರಡು ಮೂರು ದಿನಗಳ ಹಿಂದೆ ಪತ್ರಿಕೆಯಲ್ಲಿ, ಕೆ ಎಸ್ ನ ರ ಬಾಳಸಂಗಾತಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಸುದ್ದಿ ಕಣ್ಣಿಗೆ ಬಿದ್ದಿತ್ತು ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading