ದಸರಾ ಅಂದ್ರೆ ಎಲ್ಲರಿಗೂ ಇಷ್ಟ
ಕೃಪೆ : ವಿಜಯಕರ್ನಾಟಕ
ದಸರಾ ಅಂದ್ರೆ ಎಲ್ಲರಿಗೂ ಇಷ್ಟ. ಮೈಸೂರು ದಸರಾ ಅಂದ್ರಂತೂ ಇಷ್ಟವೋ ಇಷ್ಟ. ವರ್ಷಕ್ಕೊಮ್ಮೆ ಬರುವ ದಸರಾಕ್ರಾಜಕಾರಣಿಗಳು ಕಾದು ಕುಳಿತಿರುತ್ತಾರೆ. ಹಳೆಯ ಮೈಸೂರು ಭಾಗದ ರಾಜಕಾರಣಿಗಳಿಗೆ, ಅಧಿಕಾರ ಹಿಡಿದಿರುವ ಸಕರ್ಾರಕ್ಕೆ, ಸಚಿವರಿಗೆ, ಅಧಿಕಾರಿ ವರ್ಗಕ್ಕೆ ಮೈಸೂರು ದಸರಾ ಅಂದ್ರೆ ರೋಮಾಂಚನವಾಗುತ್ತದೆ. ಮೈಸೂರು ನಗರಕ್ಕೆ ಸಂಭ್ರಮವೋ ಸಂಭ್ರಮ. ಹೋಟೆಲಿನವರು, ಲಾಡ್ಜಿನವರು, ಆಟೋ, ಟ್ಯಾಕ್ಸಿ ಚಾಲಕರಂತೂ ತಮ್ಮ ನಾಲ್ಕಾರು ತಿಂಗಳ ದುಡಿಮೆಯನ್ನು ಹತ್ತು ಹನ್ನೆರಡು ದಿನಗಳಲ್ಲಿ ಕಮಾಯಿಸಿಕೊಳ್ಳಲು ಕಾತುರರಾಗಿರುತ್ತಾರೆ. ಮೈಸೂರು ಟಾಂಗಾಗಳಿಗೆ ಹೊಸ ರೂಪ, ಹೊಸ ಹುಮ್ಮಸ್ಸು ಬಂದುಬಿಡುತ್ತದೆ. ವಾಣಿಜ್ಯ ಕ್ಷೇತ್ರದ ಜನರಿಗಂತೂ ದಸರಾ ಅಂದ್ರೆ ಭರ್ಜರಿ ವ್ಯಾಪಾರ. ಸರಕು ಸಣ್ಣದಿರಲಿ, ದೊಡ್ಡದಿರಲಿ ಮಾರಾಟ ಮಾರಾಟವೇ. ಭರ್ಜರಿ ಮಾರಾಟ. ಪ್ರವಾಸಿ ಉದ್ಯಮವಂತೂ ಅತ್ಯುತ್ಸಾಹದಿಂದಲೇ ಗರಿಬಿಚ್ಚುತ್ತದೆ.
ರಾಜಕಾರಣಿಗಳ ಸಂಭ್ರಮಕ್ಕೆ ಕಾರಣ ಸ್ಪಷ್ಟ. ಸಕರ್ಾರ ಯಾವ ಪಕ್ಷದ್ದೇ ಇರಲಿ, ದಸರಾ ಜೇಬುಗಳನ್ನು ತುಂಬಿ ತುಳುಕುವಂತೆ ಮಾಡುತ್ತದೆ. ರಾಜಕಾರಣಿಗಳು, ಅವರನ್ನು ಆಶ್ರಯಿಸಿದ ಮರಿ ರಾಜಕಾರಣಿಗಳು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಪರೋಪ ಜೀವಿಗಳು, ಕಲೆ, ಸಂಸ್ಕೃತಿಯ ಹೆಸರಿನಲ್ಲಿ ಮೆರೆಯುವವರು ಹೀಗೆ ಎಲ್ಲರ ಕಿಸೆಯನ್ನೂ ಈ ದಸರಾ ತುಂಬಿಸುತ್ತದೆ. ತುಂಬಿಸಲೇ ಬೇಕು. ಇಲ್ಲವಾದರೆ ಅದೆಂಥ ದಸರಾ.
ರಾಜ್ಯದಲ್ಲಿ ಬರ ಇರಲಿ, ಬೆಲೆ ಏರಿಕೆಯ ಸಂಕಷ್ಟದಲ್ಲಿ ಸಾಮಾನ್ಯ ಜನತೆ ಬೇಯುತ್ತಿರಲಿ, ದಸರಾಕ್ಕೆ ನಿಗದಿ ಪಡಿಸಿದ ಹಣವನ್ನು ಸಕರ್ಾರ ನೀಡುತ್ತಲೇ ಇರುತ್ತದೆ. ಹತ್ತು ಕೋಟಿಯೋ, ಹದಿನೈದು ಕೋಟಿಯೋ ಅಥವಾ ಹಲವು ಬಾಬತ್ತುಗಳಲ್ಲಿ ಮಂಜೂರಾಗುವ ಬೇರೆ ಬೇರೆ ರೂಪದ ಹಣವೊ. ಹೀಗೆ ಕೋಟಿಗಳು ಚೆಲ್ಲಾಡುತ್ತವೆ. ಪರಿಸ್ಥಿತಿ ಯಾವುದೇ ಇರಲಿ, ಹೇಗೆಯೇ ಇರಲಿ ದಸರಾ ಅದ್ಧೂರಿಯಿಂದ ನಡೆಯಲೇಬೇಕು. ದಸರಾ ಬೇಡ ಎನ್ನುವವರನ್ನು, ‘ನಮ್ಮ ಅನ್ನಕ್ಕೆ ಕಲ್ಲುಹಾಕುವವರು’, ‘ಜನ ವಿರೋಧಿಗಳು’, ‘ಸಂಸ್ಕೃತಿಯ ಬಗ್ಗೆ ಕಾಳಜಿ ಇಲ್ಲದವರು’ ಎಂದು ಟೀಕಿಸಲಾಗುತ್ತದೆ.
ರಾಜ್ಯ ಬರಗಾಲ ಎದುರಿಸುತ್ತಿದೆ, ಜನ ನೀರಿಗಾಗಿ ಹೋರಾಟ ಮಾಡುತ್ತಿದ್ದಾರೆ, ಅನೇಕ ಸಮಸ್ಯೆಗಳಲ್ಲಿ ತತ್ತರಿಸುತ್ತಿದ್ದಾರೆ, ತೀವ್ರ ತರದ ಸಂಕಷ್ಟದಲ್ಲಿದ್ದಾರೆ ಇಂಥ ಯಾವುದೇ ಸನ್ನಿವೇಶವಿದ್ದರೂ, ದಸರಾ ನಿಲ್ಲುವುದಿಲ್ಲ. ಅತಿವೃಷ್ಟಿಯಾದಾಗ, ಅನಾವೃಷಿಯಾದಾಗ, ಕಾಲರಾ, ಪ್ಲೇಗು ಮೈಸೂರಿನಲ್ಲಿ ಬಹಳ ತೀವ್ರ ಸ್ವರೂಪದಲ್ಲಿದ್ದಾಗ ಎಂತೆಂಥ ಸಂದರ್ಭದಲ್ಲಿಯೂ ಮೈಸೂರು ದಸರಾ ಅದ್ಧೂರಿಯಿಂದಲೇ ನಡೆದಿದೆ. ಸಕರ್ಾರವಂತೂ ತನ್ನ ಬತ್ತಳಿಕೆಯಲ್ಲಿದ್ದ ಅಸ್ತ್ರವನ್ನು ಬಿಡುತ್ತ, ದಸರಾ ಆಚರಣೆಯನ್ನು ಸಮಥರ್ಿಸಿಕೊಳ್ಳುತ್ತಲೇ ಇರುತ್ತದೆ.
ಮಳೆ, ಬೆಳೆ ಸರಿಯಾಗಿ ನಡೆದು, ಜನ ಸಂತೃಪ್ತಿಯಲ್ಲಿ, ಸಂಭ್ರಮದಲ್ಲಿದ್ದಾಗ ದಸರಾವನ್ನು ಮೈಸೂರು ರಾಜರು ಅದ್ಧೂರಿಯಿಂದಲೇ ಆಚರಿಸುತ್ತಿದ್ದರು. ಇಡೀ ರಾಜ್ಯದ ಜನತೆಯ ಸಂಭ್ರಮವನ್ನು ದಸರಾ ಪ್ರತಿಬಿಂಬಿಸುತ್ತಿತ್ತು. ಕಲೆ, ಸಾಹಿತ್ಯ, ಸಂಗೀತ, ಕುಸ್ತಿ, ಇತ್ಯಾದಿ ಎಲ್ಲದಕ್ಕೂ ಪ್ರೋತ್ಸಾಹ ಸಿಕ್ಕುವಂತೆ ರಾಜರು ಅವುಗಳ ಪ್ರದರ್ಶನವನ್ನು ಏರ್ಪಡಿಸುತ್ತ, ಆಯಾ ಕ್ಷೇತ್ರದ ಪ್ರತಿಭಾವಂತರನ್ನು ಪ್ರೋತ್ಸಾಹಿಸುತ್ತಿದ್ದರು. ವಸ್ತು ಪ್ರದರ್ಶನವೆಂಬುದು ವಿಶೇಷವಾಗಿ ಕೃಷಿ ಕ್ಷೇತ್ರದ ಸಾಧನೆಯನ್ನು ಪ್ರದಶರ್ಿಸುವುದರ ಜೊತೆಗೆ ಈ ಕ್ಷೇತ್ರದ ಹೊಸ ಹೊಸ ಆವಿಷ್ಕಾರಗಳನ್ನು ರಾಜ್ಯದ ಜನತೆಗೆ ಮುಟ್ಟಿಸುವ ವೇದಿಕೆಯೂ ಆಗಿರುತ್ತಿತ್ತು. ವಸ್ತು ಪ್ರದರ್ಶನದಲ್ಲಿ ಶೈಕ್ಷಣಿಕ ಅಂಶಗಳೂ ಪ್ರಧಾನವಾಗಿ ಇರುತ್ತಿದ್ದ ಕಾರಣ, ರಾಜ್ಯದ ರೈತರಿಗೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತಿತ್ತು. ಇವೆಲ್ಲವನ್ನೂ ಬಹಳ ಅಚ್ಚುಕಟ್ಟಾಗಿ, ಶಿಸ್ತುಬದ್ಧವಾಗಿ ವ್ಯವಸ್ಥೆಗೊಳಿಸುವ ಪರಿಣತರೂ ಇರುತ್ತಿದ್ದರು; ಶ್ರದ್ಧೆಯಿಂದ ಅನುಷ್ಠಾನಗೊಳಿಸುವ ಅಧಿಕಾರಿಗಳೂ ಇರುತ್ತಿದ್ದರು. ಒಂಭತ್ತು ದಿನಗಳ ದಸರಾ ಎಂದರೆ ಅದೊಂದು ಮರೆಯದ ಅನುಭವವಾಗಿರುತ್ತಿತ್ತು. ದೇಶದ ನಾನಾಭಾಗಗಳ ಸಂಗೀತಗಾರರು, ಕಲಾವಿದರು, ವಿಶೇಷ ಮನ್ನಣೆಯನ್ನು ಪಡೆದು ಮೈಸೂರಿಗೆ ಬಂದು ತಮ್ಮ ಪ್ರತಿಭೆಯನ್ನು ಪ್ರದಶರ್ಿಸುತ್ತಿದ್ದರು; ಸ್ಥಳೀಯ ಪ್ರತಿಭೆಗಳಿಗೂ ಇದು ಸೂಕ್ತ ವೇದಿಕೆಯನ್ನು ಒದಗಿಸುತ್ತಿತ್ತು. ರಸಿಕರಿಗಂತೂ ಇದೊಂದು ವಿಶೇಷ ಸಂದರ್ಭವಾಗಿಯೂ ಇರುತ್ತಿತ್ತು. ಅರಸರ ಆಹ್ವಾನ ಪಡೆದ ಹಲವು ವಿದೇಶೀ ಗಣ್ಯರೂ ಮೈಸೂರು ದಸರಾ ವೀಕ್ಷಿಸುತ್ತಿದ್ದರು.
ಈಗೇನಾಗಿದೆ? ಪ್ರತಿಯೊಂದಕ್ಕೂ ದಸರಾ ಉಪ ಸಮಿತಿಗಳೇನೋ ಇರುತ್ತವೆ. ಆದರೆ ಆ ಸಮಿತಿಗಳಲ್ಲಿರುವವರೆಲ್ಲ ರಾಜಕಾರಣಿಗಳು, ಅವರ ಹಿಂಬಾಲಕರು, ಮರಿಪುಢಾರಿಗಳು. ಹೆಸರಿಗೆ ಒಬ್ಬರೋ, ಇಬ್ಬರೋ ಪರಿಣತರು. ಅವರ ಧ್ವನಿಗಂತೂ ಬೆಲೆಯೇ ಇರುವುದಿಲ್ಲ. ಪ್ರತಿಯೊಂದು ಉಪ ಸಮಿತಿಯಲ್ಲಿಯೂ ಹಣವನ್ನು ಉಢಾಯಿಸಿ ಜೇಬುಗಳನ್ನು ಭತರ್ಿಮಾಡಿಕೊಳ್ಳುವುದು ಹೇಗೆಂಬುದರ ಚಿಂತನೆಯೇ ಪ್ರಧಾನವಾಗಿ ನಡೆದಿರುತ್ತದೆ. ಈ ಕಾರಣಕ್ಕಾಗಿಯೇ ಇಂಥ ಸಮಿತಿಗಳಲ್ಲಿ ಜಾಗಗಿಟ್ಟಿಸಿಕೊಳ್ಳಲು ಬಿರುಸಿನ ರಾಜಕೀಯ ನಡೆಯುತ್ತದೆ. ಕಲೆ, ಸಂಸ್ಕೃತಿಗಳ ಬಗ್ಗೆ ನಿಜವಾದ ಕಾಳಜಿ ಮತ್ತು ಅರ್ಹತೆ ಇರುವವರಿಗೆ ಜಾಗ ಸಿಕ್ಕುವುದು ತೀರ ಅಪರೂಪ. ಅಪವಾದವೆನ್ನುವಂತೆ ಒಂದಿಬ್ಬರಿಗೆ ಸಿಕ್ಕಿದರೂ ಅವರು ರಾಜಕಾರಣಿಗಳ ಕೈಗೊಂಬೆಗಳಾಗಿಯೇ ಇರಬೇಕಾಗುತ್ತದೆ. ಇದಕ್ಕೆ ಯಾವ ಪಕ್ಷವೂ ಹೊರತಲ್ಲ. ಒಂದೊಂದು ಪಕ್ಷದ ಸಕರ್ಾರವಿದ್ದಾಗಲೂ, ಆಯಾ ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ. ಎಲ್ಲ ಪಕ್ಷಗಳೂ ಇದನ್ನೊಂದು ಅವಕಾಶವೆಂದು ನಂಬಿರುವ ಕಾರಣ, ಹಣ ಉಢಾಯಿಸುವುದನ್ನು ಅಪರಾಧವೆಂದಾಗಲಿ, ಜನತೆಗೆ ಎಸಗುವ ದ್ರೋಹವೆಂದಾಗಲಿ ತಿಳಿಯುವುದಿಲ್ಲ.
ರಸ್ತೆಗಳ ರಿಪೇರಿ, ವಸ್ತು ಪ್ರದರ್ಶನ ಮಳಿಗೆಗಳ ಹರಾಜು, ಜಂಬೂ ಸವಾರಿಯ ತಯಾರಿ ಇತ್ಯಾದಿ ಹಲವು ಮಾರ್ಗಗಳು ಹಣ ದೋಚುವವರಿಗೆ ಮುಕ್ತವಾಗಿರುತ್ತವೆ. ಪ್ರತಿವರ್ಷ ಮೈಸೂರಿನ ರಸ್ತೆಗಳು ರಿಪೇರಿಯಾಗುತ್ತಿರುವುದು ನಿಜವಾಗಿದ್ದರೆ, ಇಂಥ ರಸ್ತೆಗಳು ಇಡೀ ರಾಷ್ಟ್ರದಲ್ಲಿ ಎಲ್ಲಿಯೂ ನೋಡುವುದಕ್ಕೂ ಸಿಕ್ಕುತ್ತಿರಲಿಲ್ಲ. ಮೈಸೂರಿನ ಜನತೆಯಂತೂ ಅತ್ಯಂತ ನೆಮ್ಮದಿಯಿಂದ ಈ ರಸ್ತೆಗಳಲ್ಲಿ ತಮ್ಮ ವಾಹನಗಳನ್ನು ಓಡಿಸಬೇಕಾಗಿತ್ತು. ಆದರೆ ಎಲ್ಲ ಊರುಗಳಲ್ಲಿರುವಂತೆಯೇ ಇಲ್ಲಿಯೂ ರಸ್ತೆಗಳೆಂದರೆ ಹೆಜ್ಜೆಹೆಜ್ಜೆಗೆ ಗುಂಡಿಗಳೇ. ಹಾಗಾದರೆ ರಸ್ತೆಗೆಂದು ಪ್ರತಿವರ್ಷ ಮಂಜೂರಾಗುವ ಹಣ ಎಲ್ಲಿಗೆ ಹೋಗುತ್ತದೆ? ರಾಜಕಾರಣಿಗಳನ್ನು, ಮರಿಪುಢಾರಿಗಳನ್ನು, ಸ್ಥಳೀಯ ಕಂಟ್ರಾಕ್ಟರುಗಳನ್ನು ಕೇಳಿದರೆ ಈ ಪ್ರಶ್ನೆಗೆ ಸಮರ್ಪಕ ಉತ್ತರ ಸಿಕ್ಕಬಹುದು. ಅಥವಾ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೇಳುವುದು ಹೆಚ್ಚು ಸಮಂಜಸವಾಗಬಹುದೇನೋ!
ಇನ್ನು ಕಲಾವಿದರ ಸ್ಥಿತಿಯನ್ನು ನೋಡಿ. ಜಾನಪದ ಕಲಾವಿದರಂತೂ ಪ್ರತಿವರ್ಷ ಎಲ್ಲಿಯೋ ತಿಂದು, ಎಲ್ಲಿಯೂ ಮಲಗಿ, ಸಕರ್ಾರವನ್ನು ಬೈಯುತ್ತ ತಮ್ಮ ಊರಿಗಳಿಗೆ ಮರಳುವ ಸ್ಥಿತಿ ಸ್ವಲ್ಪವೂ ಬದಲಾಗಿಲ್ಲ. ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಖ್ಯಾತಿಯ ಒಬ್ಬರೊ, ಇಬ್ಬರೊ ಕಲಾವಿದರಿಗೆ ‘ರಾಜ ಮನ್ನಣೆ’ ಸಿಕ್ಕುವುದು ನಿಜವಾದರೂ, ಅವರಿರುವ ವೇದಿಕೆಗಳಲ್ಲಿ ಮೆರೆಯುವವರು ರಾಜಕಾರಣಿಗಳೇ. ದಸರಾ ಕವಿಗೋಷ್ಠಿಯಲ್ಲಂತೂ ಕವಿಗಳಿಗಾಗಿ ಹುಡುಕಾಟ ನಡೆಸಬೇಕು.
ಸನ್ಮಾನಕ್ಕೆಂದು ಬಳಸುವ ಶಾಲುಗಳು, ಹಾರಗಳು, ಹಣ್ಣು ಇತ್ಯಾದಿ ನೂರಾರು ವಸ್ತುಗಳು, ಅವುಗಳ ಗುಣಮಟ್ಟ, ಸುಳ್ಳು ಬಿಲ್ಲುಗಳಲ್ಲಿ ಅವುಗಳಿಗೆ ನಮೂದಾಗಿರುವ ಹಣ, ಟ್ಯಾಕ್ಸಿ ಬಿಲ್ಲುಗಳು, ವಸತಿ ಗೃಹಗಳ ಬಿಲ್ಲುಗಳು! ಕೇಳುವವರು ಯಾರು?
ದಸರಾವನ್ನು ಉದ್ಘಾಟಿಸಲು ರಾಷ್ಟ್ರೀಯ ಖ್ಯಾತಿಯ ಬರಹಗಾರರನ್ನೊ, ಕಲಾವಿದರನ್ನೊ ಆಹ್ವಾನಿಸಿ ಆ ಗೌರವವನ್ನು ಅವರಿಗೆ ಕೊಡುವ ಪರಿಪಾಠವೊಂದು ಕೆಲವು ವರ್ಷಗಳ ಹಿಂದೆ ಆರಂಭವಾಯಿತು. ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಅನಂತಮೂತರ್ಿ, ಕನ್ನಡದ ಮಹಾನ್ ಕಲಾವಿದ ಡಾ. ರಾಜಕುಮಾರ್ ಹೀಗೆ ಕೆಲವರಿಗೆ ನಿಜ ಗೌರವವನ್ನು ಸಲ್ಲಿಸಲಾಯಿತು. ಆದರೆ ನಿಧಾನಕ್ಕೆ ಈ ಜಾಗವನ್ನು ಮಠಾಧಿಪತಿಗಳು ತುಂಬಿಬಿಟ್ಟರು. ಆಳುವ ಪಕ್ಷ ತನಗೆ ಬೇಕಾದ ಸ್ವಾಮಿಯೊಬ್ಬರಿಗೆ ಈ ಮನ್ನಣೆಯನ್ನು ನೀಡುವ, ಜಾತ್ಯತೀತವಾಗಬೇಕಾದ ದಸರಾಕ್ಕೆ ಮತಧರ್ಮಗಳ ನಂಟನ್ನು ಲೇಪಿಸುವ ಪದ್ಧತಿಯನ್ನು ಜಾರಿಗೆ ತಂದುಬಿಟ್ಟಿತು. ಇಂಥ ರಾಜಕಾರಣವನ್ನು ಯಾರೂ ಪ್ರಶ್ನಿಸುವುದಿಲ್ಲ. ಆಳುವ ಪಕ್ಷ, ವಿರೋಧ ಪಕ್ಷ ಎಲ್ಲವೂ ಈ ವಿಚಾರದಲ್ಲಿ ಒಂದೇ. ಭ್ರಷ್ಟಾಚಾರವನ್ನಂತೂ ಜನ ಒಪ್ಪಿಕೊಂಡುಬಿಟ್ಟಿದ್ದಾರೆ. ಹಾಗೆಯೇ ಮಠಪತಿಗಳನ್ನೂ.



ನೀವು ಕೊನೆಯ ಪ್ಯಾರದಲ್ಲಿ ಹೇಳಿರೋದು ನೋಡಿದರೆ ಮಠಧಿಪತಿಗಳು ಅಂದರೆ ಕೇವಲ ಒಂದು ಜಾತಿಗೆ ಅಂತ ಸೀಮಿತ ಮಾಡಿದ ಹಾಗೆ ಕಾಣುತ್ತೆ, ಆದರೆ ಅದು ನಿಜವಾಗಿಯೂ ಅಷ್ಟೊಂದು ಸರಿಯಾದ ಹೇಳಿಕೆ ಅಂತ ಅನ್ಸೋಲ್ಲ. ಸಿದ್ದಗಂಗಾ ಮಠ , ಪೇಜಾವರರು ದಲಿತರಿಗಾಗಿ ಹೋರಾಟ ಮಾಡುತ್ತಿರುವುದು , ಇವು ಆ ಶ್ರೀಗಳು ಕೇವಲ ತಮ್ಮ ಮಠ/ಜಾತಿ ಬಗ್ಗೆ ಅಷ್ಟೇ ಕಳಕಳಿ ಇಟ್ಟಿದ್ದಾರೆ ಅಂತ ಹೇಳಿದರೆ ತಪ್ಪಾಗುತ್ತೆ ಅನ್ನೋದು ನನ್ನ ಅನಿಸಿಕೆ. ಸಂದರ್ಭ ಬಂದಾಗ ಅವರು ತಮ್ಮ ಮಠ/ಜಾತಿ/ಆಚರಣೆ ಬಗ್ಗೆ ಸಮರ್ಥನೆ ಮಾಡುವುದು ಸಹಜವೂ ಹೌದು , ಒಂದು ಅರ್ಥದಲ್ಲಿ ಕರ್ತವ್ಯವು ಹೌದು. ಅದನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಮಿತಿಯಲ್ಲಿ ಮಾಡುತ್ತಾರೆ , ಮಾಡಲೇಬೇಕು. ಆದರೆ ಇದು ಒಂದೇ ಕಾರಣ ಇಟ್ಟುಕೊಂಡು ಅವರು ಕೇವಲ ಒಂದು ಧರ್ಮ/ಜಾತಿ/ಮಠಕ್ಕೆ ಸೀಮಿತ ಆಗಿದ್ದರೆ ಅಂತ ಹೇಳೋದು ತಪ್ಪು ಅನ್ನೋದು ನನ್ನ ಅನಿಸಿಕೆ.