ಶಶಿ ಸರ್ ಹಾಗೂ ರಂಗ ಸರ್ ವಿಷಯಕ್ಕೆ ಬಂದ್ರೆ ಇಬ್ಬರಲ್ಲಿ ಯಾರು ಹೆಚ್ಚು- ಯಾರು ಕಡಿಮೆ ಎಂದು ಹೇಳುವುದಕ್ಕಿಂತ ಯಾರು ಯಾವ ರೀತಿಯಲ್ಲಿ ಆ ಚಾನೆಲ್ ಬೆಳವಣಿಗೆಗೆ ಆದ್ಯತೆ ಕೊಟ್ರು ಎನ್ನುವುದಷ್ಟೇ ಮುಖ್ಯವಾಗುತ್ತದೆ.
ಶಶಿ ಸರ್ ನ್ಯೂಸ್ ಎನ್ ವ್ಯೂಸ್ ಅನ್ನುವ ಕಾರ್ಯಕ್ರಮದ ಮೂಲಕ, ರಸವತ್ತಾದ ಚರ್ಚೆಯ ಮುಖಾಂತರ ನ್ಯೂಸ್ ಅಂದ್ರೆ-ಚರ್ಚೆ ಎಂದರೆ ಮೂಗು ಮುರಿತಾ ಇದ್ದ ಸಾಮಾನ್ಯರನ್ನು ಆಕರ್ಷಿಸಿದರು. ಆ ವಿಷಯದಲ್ಲಿ ಶಶಿ ಸರ್ ಸಾಧನೆಯ ಬಗ್ಗೆ ಗೌರವ ಸಲ್ಲಿಸ ಬೇಕಾದದ್ದೇ. ಅತಿಥಿಗಳ ಜೊತೆಯಲ್ಲಿ ಅವರು ಮಿಂಗಲ್ ಆಗುವ ರೀತಿಯು ಆಕರ್ಷವಾಗಿತ್ತು. ಮುಖ್ಯವಾಗಿ ಅವರೊಬ್ಬರೇ ಕಾರ್ಯಕ್ರಮ ನಡೆಸಿ ಕೊಡ್ತಾ ಇದ್ರು…
ಆದರೆ ರಂಗ ಸರ್ ವಿಷಯಕ್ಕೆ ಬಂದಾಗ ಅವರು ಅನೇಕರು ಹೇಳುವಂತೆ ತುಂಬಾ ಮಾತಾಡ ಬಹುದು,ಆದರೆ ನನ್ನ ಪ್ರಕಾರ ಅದು ಅವರ ಶೈಲಿ. ಮೌನವಾಗಿ ಪ್ರಿಂಟ್ ಮೀಡಿಯಾದಲ್ಲಿ ಬರೆದುಕೊಂಡು ಕೂತಿದ್ದವರು ಕ್ಯಾಮರ ಮುಂದೆ ಕೂತು ಢಂ ಢಮಾರ್ ಎಂದು ಗುಂಡು ಸಿಡಿಸಿದರೆ ನನ್ನ ವಯುಕ್ತಿಕ ಅಭಿಪ್ರಾಯದ ಪ್ರಕಾರ ಸಾಕಷ್ಟು ಜನರಿಗೆ ಸಹಿಸಲಿಕ್ಕೆ ಆಗಲಿಲ್ಲ.ಮತ್ತೊಂದು ಸಂಗತಿ ಕ್ಯಾಮರ ಮುಂದೆ ಕೂತರೆ ಎಂತಹವರಿಗೂ ಪುಳಕ ಆಗುತ್ತೆ ಕಣ್ರೀ, ರಂಗ ಸರ್ ಸಹ ಸ್ವಲ್ಪ ಎಂಜಾಯ್ ಮಾಡ್ಲಿ ಬಿಡಿ ![]()
ಪೂರ್ಣ ಓದಿಗೆ : ಮೀಡಿಯಾ ಮೈಂಡ್





0 Comments