ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿಂತಿಸೊಮ್ಮೆ ಮನವೇ…

ವಸುಂಧರಾ ಕದಲೂರು

ಹೊಟ್ಟೆ ತುಂಬಿದ ಮೇಲೆ
ಹೊಲದ ದಾರಿಯ ಮರೆತೆ
ಪೀಠ ಏರಿದ ಮೇಲೆ
ಕಲಿತ ಪಾಠವ ಮರೆತೆ

ಹತ್ತಿ ಕುಳಿತ ಬಂಡಿಯನು
ಮತ್ತೆ ಜೋರು ಓಡಿಸಿದೆ
ಬಂಧು, ನೇಹ-ಬಳಗವನು
ಬಿಟ್ಟು ಮುಂದೆ ಹೋದೆ

ಅಗಣಿತ ಆಸೆ ಗಣಿಯಾದ ಮನ
ನೀ ಹೊಂದಿ; ಬಗೆದಷ್ಟು ತಣಿಯದ
ಬಯಕೆಯ ಮರುಭೂಮಿಯಾದೆ.
ಬರಿಯ ಮರಳಿಗೇ ಮರುಳಾಗಿ
ನೀನು ಮರೀಚಿಕೆಯಾಗಿ ಹೋದೆ.

ಅಳವಿರದ ಆಲೋಚನೆಯಲಿ,
ಆಳ ಅಗಲ ಮೀರಿದ ಚಿಂತನೆಗಳಲಿ,
ಪ್ರಳಯ ಸ್ವರೂಪಿನಿ ಮನವ ನೀ
ಮಿತಿಯಿರದೆ ಬಳಸಿದೆ ನೀನು
ಅನ್ಯಾಯ ವಾಹಿನಿಯಾದೆ.

ಎಂದಿಗಾದರೂ ಈ ನೆಲಕ್ಕಾಗುವ
ಜಲವಾಗಲಿಲ್ಲ; ತುತ್ತಿಗಾಗುವ
ಅನ್ನವಾಗಲಿಲ್ಲ; ಪ್ರಾಣಕ್ಕೊದಗುವ
ವಾಯುವಾಗಲಿಲ್ಲ; ಇದ್ದೂ ನೀ
ಇಲ್ಲದಂತಾದೆ, ಎಲ್ಲಿಯೂ ಸಲ್ಲದಾದೆ.

ಒಮ್ಮೆ ನಿಂತು ಆಲೋಚಿಸು; ಅತ್ತಿತ್ತ
ತಿರುಗಿ ನೋಡದೆ ನೀ ಸಾಗಿರುವುದು
ಎತ್ತ ಕಡೆಗೆ ! ಯಮನೂರಿನ ಆ
ದಾರಿ ಇನ್ನೀಗ ಬಹಳ ದೂರವಿಲ್ಲ.

‍ಲೇಖಕರು Avadhi

28 December, 2020

1 Comment

  1. Smitha Amrithraj.

    ಚಿಂತನೆಗೆ ನೂಕುವ ಕವಿತೆ.olledide ವಸುಂಧರಾ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading