ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಗಾಢ ನಿದ್ದೆ, ಮತ್ತೊಂದು ಚೀತ್ಕಾರ ಕೇಳುವವರೆಗೆ..’ – ಅನಿತಾ ನರೇಶ್ ಮಂಚಿ

 

ಅನಿತಾ ನರೇಶ್ ಮಂಚಿ

ಹೌದಂತೇ..

ಅಲ್ಲೆಲ್ಲೋ ಅತ್ಯಾಚಾರವಾಯಿತಂತೇ ..

ಹೌದೇ.. ಕೇಳಿದವು ಕೊರಳುಗಳು

ಸೇರಿದ ಸ್ವರಗಳಲ್ಲೂ ಏರಿಳಿತ

ಸುತ್ತ ಗಾಭರಿಯ ಕಣ್ಣೋಟ

ಬಿತ್ತರಿಸಿದವು ಹಸಿ ಬಿಸಿ ವಾರ್ತೆಗಳಂತೆ

ನೋಡು ಟಿವಿಯಲ್ಲೂ ಅದೇ ಸುದ್ಧಿ

ಹೇಳಲಿಲ್ಲವೇ ನಾನಾಗಲೇ ..

ಕೈ ಸೆರಗಿಗೆ ಒರೆಸುತ್ತಾ ಕೂತ

ತಾಯ ಎದೆಯೊಳಗೆ ಭೂಕಂಪ

ನಡುಗು ಕಾಲಿನ ಮಂದಿ ಕಿವಿ ತೆರೆದರು

ಮಗಳ ಹೆಜ್ಜೆ ಸಪ್ಪಳಕ್ಕೆ

ಒಮ್ಮೆ ಒಳ ಬಂದರೆ ಸಾಕೆಂಬ ಹರಕೆ

ಮನೆಯ ಸುತ್ತೆಲ್ಲ ಬೇಲಿ

ಒಳಗೆ ದೃಷ್ಟಿ ಹಾಯಿಸದಂತೆ

ನೆಟ್ಟ ಪಾಪಸುಕಳ್ಳಿಯ ಮುಳ್ಳಿನ

ನಡುವೆ ಸಿಲುಕಿದ ಹರಿದ ಸೆರಗು

ಯಾರದೋ ಮನೆಯಲ್ಲಿ ನಂದಿದ ದೀಪ

ಜಾಮೀನಿನ ಮೊತ್ತಕ್ಕೂ ಮಾನ ಪ್ರಾಣದ ತಾಳೆ

ವಸ್ತ್ರಾಪಹಾರಕ್ಕಿಷ್ಟು, ಸತ್ತರಿಷ್ಟು, ಸವರಿದರಿಷ್ಟು..

ಜಾತಿ, ಪಾರ್ಟಿಯ ಗೋಸುಂಬೆ ನಗೆ

ಎಳೆದಾಡಿದ ರಾಕ್ಷಸನಿಗೆ ಬುಲೆಟ್ ಪ್ರೂಫ್ ಕವಚ

ನಾಲ್ಕು ದಿನದ ಗುಸು ಗುಸು ಸದ್ದಡಗಿದಾಗ

ಗಾಢ ನಿದ್ದೆ,ಮತ್ತೊಂದು ಚೀತ್ಕಾರ ಕೇಳುವವರೆಗೆ..

‍ಲೇಖಕರು G

28 December, 2012

14 Comments

  1. Gopaal Wajapeyi

    ”ನೆಟ್ಟ ಪಾಪಾಸುಕಳ್ಳಿಯ ಮುಳ್ಳಿನ
    ನಡುವೆ ಸಿಲುಕಿದ ಹರಿದ ಸೆರಗು…”
    -ಘಟನೆಯನ್ನು ಕಣ್ಣೆದುರು ತಂದು ನಿಲ್ಲಿಸುವಂಥ ಮಾತು…

  2. Santhosh

    Reflection of the Reality!!

  3. Shama Nandibetta

    ಗಾಢ ನಿದ್ದೆ,ಮತ್ತೊಂದು ಚೀತ್ಕಾರ ಕೇಳುವವರೆಗೆ..

  4. Ashoka Bhagamandala

    ಅನಿತಾ ತುಂಬಾ ಚೆನ್ನಾಗಿದೆ ಕವನ…ಇನ್ನೊಂದು ಚೀತ್ಕಾರ ಕೇಳದಿರಲಿ ಎಂದು ಸದಾ ಪ್ರಾರ್ಥಿಸುತ್ತೇನೆ.

  5. C.V.Gopalakrishna

    A protest in your own way,may it awaken all to avoid the screaming
    atmosphere.

  6. drmuralee mohan

    chennagide……yesterday suicide of nurse jesintha, today rape, tomorrow india pak match n sachin retirement…..life goes on and on…..cycle repeats

  7. shanthi k.a.

    koneya saalugalu…satyasya satya..

  8. usha rai

    ಜನರ ಮೃಗೀಯ ಮನಸು ಸರಿಯಾಗುವ ತನಕ
    ಕೇಳುತ್ತಲೇ ಇರುತ್ತದೆ ಚೀತ್ಕಾರ.
    ಚೀತ್ಕಾರ ಕೇಳಿದಾಗಲೊಮ್ಮೆ ಗಾಬರಿ
    ಮತ್ತೆ ಮರೆವು.
    ಇನ್ನೊಂದು ಚೀತ್ಕಾರ ಕೇಳುವವರೆಗೆ…
    ಅದೇ ಪುನರಾವರ್ತನೆ,ಮರೆವು, ಇನ್ನೊಂದು ಚೀತ್ಕಾರ

    ’ನಾಲ್ಕು ದಿನದ ಗುಸು ಗುಸು ಸದ್ದಡಗಿದಾಗ
    ಗಾಢ ನಿದ್ದೆ,ಮತ್ತೊಂದು ಚೀತ್ಕಾರ ಕೇಳುವವರೆಗೆ.”ಸರಿಯಾಗಿ ಹೇಳಿದ್ದೀರಿ ಅನಿತ

  9. Pushparaj Chauta

    ಮರೆತುಬಿಡುತ್ತೇವೆ ‘ಮಾನ’ವೀಯತೆಯನ್ನು…!

  10. ಮಂಜುನಾಥ ಕೊಳ್ಳೇಗಾಲ

    “ನೆಟ್ಟ ಪಾಪಸುಕಳ್ಳಿಯ ಮುಳ್ಳಿನ
    ನಡುವೆ ಸಿಲುಕಿದ ಹರಿದ ಸೆರಗು
    ಯಾರದೋ ಮನೆಯಲ್ಲಿ ನಂದಿದ ದೀಪ
    ಜಾಮೀನಿನ ಮೊತ್ತಕ್ಕೂ ಮಾನ ಪ್ರಾಣದ ತಾಳೆ
    ವಸ್ತ್ರಾಪಹಾರಕ್ಕಿಷ್ಟು, ಸತ್ತರಿಷ್ಟು, ಸವರಿದರಿಷ್ಟು..”

    ಅದೆಷ್ಟು ನಾಜೂಕಾಗಿ ಮುಟ್ಟುವಂತೆ ಪ್ರತಿಮೆಗಳನ್ನು ಬಳಸಿಕೊಳ್ತೀರಿ ನೀವು… ಸೊಗಸಾದ ಕವನ

  11. bharathi bv

    Ani kone erdu saalu idee ghatane bagge helatte …

  12. Anuradha.rao

    ಸರಿಯಾಗಿ ಹೇಳಿದ್ದೀರ ..ಹೌದಂತೇ..ಅನ್ನೋ ಮಾತು ಅಲ್ಲಿ ,ಇಲ್ಲಿ ಕೇಳಿ ಬರುತ್ತಲೇ ಇರುತ್ತದೆ …ಚರ್ಚೆಗಳು ನಡೆಯುತ್ತಲೇ ಇರುತ್ತವೆ ..ನ್ಯಾಯಾಂಗ ವ್ಯವಸ್ಥೆ ಅಪರಾಧಿಗಳಿಗೆ ಶಿಕ್ಷೆ ಕೊಟ್ಟಾಗ ಸ್ವಲ್ಪವಾದರೂ awareness ಬರಬಹುದು .

  13. Sowmya

    True……

  14. usha

    Mattondu cheetkar keladirali… Innodu jeeva tulitadalli nalugadirali..
    Bhagavanta.. kaapadu nannee sunder dhareyannu…

    Anita, you have written well.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading