ಅಖಿಲೇಶ್ ಚಿಕ್ಕದೇವನೂರು
ಭೀಷ್ಮ, ದ್ರೋಣ,
ಶಲ್ಯ, ಕರ್ಣ,
ದುರ್ಯೋಧನ, ದುಶ್ಯಾಸನ,
ಹನ್ನೊಂದು ಅಕ್ಷೋಹಿಣಿ ಸೈನ್ಯ
ಇಷ್ಟೆಲ್ಲಾ ಇದ್ದೂ ಕೌರವರು ಸತ್ತರೇ?
ನಿಮಗೆಲ್ಲೋ ಭ್ರಾಂತು..
ಗೆಲುವಿನ ಹುಚ್ಚು ಪಾಂಡವರನ್ನು
ಕೆಲ ದಿನಗಳಷ್ಟೇ ಬದುಕಿಸಿತು.

ಆದರೆ, ಸೋಲಿನ ಕಿಚ್ಚು ಕೌರವರನ್ನು ಇನ್ನೂ ಬದುಕಿಸಿದೆ
ಸೋಲು-ಅಸೂಯೆಯ ಕಿಚ್ಚಿನಿಂದಲೇ ಹುಟ್ಟಿದವರು
ಒಂದು ಯುದ್ಧದ ಸೋಲಿನಿಂದ ಸಾಯುವರೇ?
ಅಯ್ಯೋ ಮುಗ್ದರೇ..
ಸತ್ತಿಲ್ಲ ನನ್ನ ಮಕ್ಕಳು, ಸೋತಿರುವರಷ್ಟೇ!
ಒಮ್ಮೆ ಗೆದ್ದು ಜಗವ ಮರೆತರಷ್ಟೇ ಸಾವು,
ಸೋತು ಅವಮಾನಿತರಾದಾಗಲಲ್ಲ!






0 Comments