
ಸಂಧ್ಯಾರಾಣಿ
ಯಾರಲ್ಲಿ, ಹಿಡಿದು ತನ್ನಿ ಕೊಳಲನ್ನು
ನಿಲ್ಲಿಸಿ ಕಟಕಟೆಯಲ್ಲಿ
ಬೊಗಸೆಗೆ ಬಿದ್ದ, ಖಾಲಿ ಉಸಿರ ಎದೆಗೆ ಬಿತ್ತಿ
ಮೊಳಕೆಯೊಡಿಸಿ, ಒಡಲ ಅಸುವುಣ್ಣಿಸಿ
ಕಣ್ಣು, ಕೈ ಬೆರಳು ಮೂಡಿಸಿ, ರಾಗಗಳ ಹೆತ್ತು ಕೊಡುವ
ಉದ್ಧಟತನ ಕೊಳಲಿಗೆ ಕಲಿಸಿದ್ದ್ಯಾರು?

ಲಿಪಿಯೇ ಇಲ್ಲದ ಕಣ್ಣುಗಳ ಭಾಷೆ
ಮಾತುಗಳ ಪೇಟೆಯಲಿ ನಡೆಯದ ನಾಣ್ಯ
ಹೆತ್ತ ರಾಗಗಳ ಎತ್ತಿ ಹಿಡಿದೆ ನಿನ್ನೆದಿರು,
ನನ್ನ ತುಟಿಯಲ್ಲಿದ್ದದ್ದು ಖಾಲಿ ಉಸಿರು
ಹೇಳು ಈ ಹಾಡು ಯಾರದೆಂದರೆ ಏನೆನ್ನಲಿ
ನಾನು ಶಕುಂತಲೆಯ ಊರವಳು.
ಮೌನದಲ್ಲಿ ಪಡೆದವನನ್ನು ಮಾತಿನಲ್ಲಿ ಕಳೆದುಕೊಂಡವಳು
ಯಾರಲ್ಲಿ, ಕರೆತನ್ನಿ ಕೊಳಲನ್ನು ಕಟಕಟೆಗೆ..
ಒಂದು, ಒಂದು ಕೂಡಿದರೆ ಎರಡೇ ಆಗಬೇಕು
ಬೆಳಕನ್ನು ಪಡೆದು ಕಾಮನಬಿಲ್ಲನ್ನು ಹಡೆದ
ಕೊಳಲ ಕೊರಳಿಗೆ ಮೌನದ ಗಂಟೆ ಕಟ್ಟಬೇಕಿದೆ






thumbaa chennaagi moodi bandide ; lipiye illada kannugala bhashe -maatugala peteyali nadeyada naanya ! ! – Good !!
Narayan Raichur
Super… ಶಬ್ದಗಳೆ ಮೌನವಾಗಿ ನಾವೇ ಕಟಕಟೆಯಲಿ ನಿಂತ ಹಾಗೆ…!
ಚೆಂದದ ಕವಿತೆ……..
On of your best sandhya
Beautiful!
ಚೆನ್ನಾಗಿದೆ , ಪದ್ಯ.