
ಟಿ ರಾಮಚಂದ್ರಪ್ಪ
ಕಸ ಎತ್ತುವವರ ವಿಶಿಷ್ಠ ಆಯುಧ ಪೂಜೆ
ದಾವಣಗೆರೆ../ ೯ ೧೦ ೧೬ /ಮಟ ಮಟ ಮಧ್ಯಾಹ್ನ..
ಎಂ.ಸಿ.ಸಿ ಬಿ ಬ್ಲಾಕ್ ನಲ್ಲಿ ಹೀಗೊಂದು ಗಮನ ಸೆಳೆಯುವ ದೃಶ್ಯ ಕಂಡೆ..
ಹತ್ತು ಹಲವು ವರ್ಷಗಳ ಹಳೆಯದಾದ ,ನಿತ್ಯ ಕಸ ಎತ್ತಲು ಉಪಯೋಗಿಸುವ ತಳ್ಳುವ ಬಂಡಿ
(ಗಂಟೆ ಬಂಡಿ ಅಂತೆ.. ತಳ್ಳಿದಾಗ ಗಂಟೆಯ ಶಬ್ಧ ಮನೆಯವರಿಗೆ ಗುರುತಂತೆ.. ಅಲ್ಲಿದ್ದ ಯಾವ ಬಂಡಿಗೂ ಗಂಟೆ ಇರಲಿಲ್ಲ!.. ಕೇಳಿದೆ.. ಕದ್ದೊಯ್ದಾರೆ ಅಂದ್ರು)
ಹರಕಲು ಪ್ಲಾಸ್ಟಿಕ್ ಬುಟ್ಟಿಗೆ ಬಣ್ಣ ಬಳಿಯುವ ಸಂಭ್ರಮದಲ್ಲಿದ್ದ ರು.. ರವಿ ಹಾಗೂ ಸ್ನೇಹಿತರು.. ಯಾಕೆಂದು ಕೇಳಿದೆ.. ಆಯುಧ ಪೂಜೆ ಸಾರ್ ಎಂದ್ರು..
ಬಣ್ಣದ ಖರ್ಚು ಯಾರದು ಎಂದೆ.. ಹಬ್ಬದ ಖುಷಿಗೆ ಎಲ್ಲಾ ಮನೆಯ ಅಮ್ಮಂದಿರು ಕೊಟ್ಟಿದ್ದು, ಅದರಲ್ಲೇ ನಿಭಾಯಿಸ್ತೀವಿ ಅಂದ್ರು..
ಪಾಲಿಕೆ ಕೊಡುವುದಿಲ್ಲವೇ ಎಂದೆ.. ಮೂರು ತಿಂಗಳ ಸಂಬಳ ಬಾಕಿ ಇದೆ, ಅದು ಕೊಟ್ರೆ ಸಾಕು.. ಬರಿತೀರಾ ಸಾರ್ ಅಂದ್ರು,.
ನಾ ಪತ್ರಕರ್ತ ಅಲ್ಲ.. ಪಾಲಿಕೆಯಲ್ಲಿ ಗೊತ್ತಿರೋರಿಗೆ ಹೇಳ್ತೀನಿ ಅಂತ ಮಾತು ಕೊಟ್ಟೆ..
ಇಂಥವರ ನಡುವೆಯೂ ನಾನೇಕೆ ಅಬ್ಬರದ ಹಬ್ಬ ಮಾಡಬೇಕಾ? ಅನಿಸ್ತು..







0 Comments