ಸಿದ್ಧಲಿಂಗ ಪಟ್ಟಣಶೆಟ್ಟಿ ಸಾಹಿತ್ಯ ಪುರಸ್ಕಾರಕ್ಕೆ
ಕವನ ಸಂಕಲನಗಳ ಆಹ್ವಾನ

ಖ್ಯಾತ ಕವಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಸಾಹಿತ್ಯ ಕ್ಷೇತ್ರದ ಅನುಪಮ ಸೇವೆಯನ್ನು ಗೌರವಿಸಿ, ಗದುಗಿನ ಸಾಹಿತ್ಯ ಪ್ರಕಾಶನ ಸಂಸ್ಥೆಯಾದ ಸಾಂಗತ್ಯ ಪ್ರಕಾಶನವು ‘ಸಿದ್ಧಲಿಂಗ ಪಟ್ಟಣಶೆಟ್ಟಿ ಸಾಹಿತ್ಯ ಪುರಸ್ಕಾರ’ವನ್ನು 2005 ರಿಂದ 2009 ರ ವರೆಗೆ ಐದು ವರ್ಷಗಳ ಕಾಲಾವಧಿಯಲ್ಲಿ ಪ್ರಕಟಗೊಂಡ ಸ್ವತಂತ್ರ ಕವನ ಸಂಕಲನಗಳಿಗೆ ನೀಡಲು ನಿರ್ಧರಿಸಿದೆ.
ಈ ಪುರಸ್ಕಾರವು ಹತ್ತು ಸಾವಿರ ರೂಪಾಯಿಗಳ ನಗದು, ಸಮ್ಮಾನ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಪುರಸ್ಕೃತರನ್ನು ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಹುಟ್ಟುಹಬ್ಬವಾದ 26ನೆಯ ಮೇ 2010ರಂದು ಪ್ರದಾನ ಮಾಡಿ ಗೌರವಿಸಲಾಗುವುದು.
2005 ರಿಂದ 2009 ರವರೆಗಿನ ಕಾಲಾವಧಿಯಲ್ಲಿ ಪ್ರಕಟಗೊಂಡ ಸ್ವತಂತ್ರ ಕವನ ಸಂಕಲನಗಳ ನಾಲ್ಕು ಪ್ರತಿಗಳನ್ನು ಪ್ರೊ.ಸಿದ್ದು ಯಾಪಲಪರವಿ, ಸಾಂಗತ್ಯ ಪ್ರಕಾಶನ, #123, 7ನೆಯ ಕ್ರಾಸ್, ಶಿವಾನಂದ ನಗರ, ಕಳಸಾಪೂರ ರಸ್ತೆ, ಗದಗ 582103 ದೂರವಾಣಿ – 9448358040 ಈ ವಿಳಾಸಕ್ಕೆ 25 ಫೆಬ್ರುವರಿ,2010 ರೊಳಗಾಗಿ ತಲುಪಿಸಬೇಕು. ಪುರಸ್ಕಾರಕ್ಕಾಗಿ ಕವಿಗಳು, ಪ್ರಕಾಶಕರು ಹಾಗೂ ಕಾವ್ಯಾಸಕ್ತರು ಕವನ ಸಂಕಲನಗಳನ್ನು ಕಳುಹಿಸಬಹುದು.
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





it is good decosion
ITS A GREAT DEED, FOR THE GREAT PERSONALITIES
LIKE DR.PATTANASHETTY. KEEP IT UP GOOD WORK