-ಎಚ್. ಆನಂದರಾಮ ಶಾಸ್ತ್ರೀ
’ವಿಚಕ್ಷಣಾ ಜಾಗೃತಿ ಸಪ್ತಾಹ’ದ ಅಂಗವಾಗಿ ’ಕೇಂದ್ರೀಯ ವಿಚಕ್ಷಣಾ ಆಯೋಗ’ವು ಡಿಎವಿಪಿ ಇಲಾಖೆಯ ಮೂಲಕ ಇದೇ ದಿನಾಂಕ ೨೫ರಂದು ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟಿಸಿರುವ ಅರ್ಧ ಪುಟದ ಜಾಹಿರಾತಿನಲ್ಲಿ ಕನ್ನಡದ ಕಗ್ಗೊಲೆ ಮಾಡಲಾಗಿದೆ! ಅಲ್ಲಿ ಮುದ್ರಿತವಾಗಿರುವ ಕೆಲವು ಕನ್ನಡ ಪದಗಳು ಇಂತಿವೆ
’ಬ್ರಷ್ಟಾಚಾರ, ಬೃಷ್ಟಾಚಾರ, ಆಂದೊಲನ, ಅಂದೊಲನ, ವಿಳಸ, ಗೊತ್ತುವಿಳಿ, ಜಾಗೃತೆ, ಜಾಗೃತಾ ಸಪ್ತಾಹ, ಜಾಗೃತ ಸಪ್ತಾಯ, ಆಭಿವೃದ್ಧಿ, ಸ್ಪೂರ್ತಿ, ನಿರಕ್ಷಿಸುತ್ತದೆ, ಅವದಿ, ಹೊರಾಟ, ಆಗತ್ಯವಾಗಿದೆ, ಪ್ರಚೊದಿಸುವದರ, ಹೊರಾಡುವಂತೆ, ತಿಳುವಳಿಕೆ, ಫೊಸ್ಟರ್ಗಳು, ಉಪಯೊಗಿಸುವ, ಆಡಳಿತೆ, ಸಾರ್ಮಥ್ಯ, ಆವಕಾಶ, ಅಗತ್ಯತೆ, ಆಯೊಗ, ಸುತ್ರಗಳನ್ನು…….’
ಪೂರ್ಣ ಓದಿಗೆ : ಮೀಡಿಯಾ ಮೈಂಡ್





kannaDa vendare thaathsaara alla…
alli kannaDadavre illa…
Houde, Vinaymanoj helliddu oppuva mathu.
ಈ ಜಾಹೀರಾತುಗಳನ್ನು ಪ್ರಕಟಿಸುವ ಕನ್ನಡ ಪತ್ರಿಕೆಗಳವರು, ಜಾಹೀರಾತುಗಳಲ್ಲಿನ ಭಾಷೆಯ ಬಗ್ಗೆ ನಿಗಾವಹಿಸುವುದಿಲ್ಲ ಏಕೆ?
ಭಾಷೆ ಸರಿ ಇಲ್ಲದೇ ಇದ್ದಲ್ಲಿ ಜಾಹೀರಾತನ್ನೇ ತಿರಸ್ಕರಿಸುವ ಕೆಚ್ಚೆದೆ ತೋರಿಸಬೇಕು ತಾನೇ?
ಆದರೆ ಅವರು ಹಾಗೆ ಮಾಡಿಯಾರೇ?
ಇಲ್ಲ, ಏಕೆಂದರೆ ಮುಂದೆ ಸರಕಾರದ ಜಾಹೀರಾತುಗಳು ಬರುವುದೇ ನಿಂತು ಬಿಡಬಹುದು.
ಮೂಲತಃ ಹಿಂದೀ ಮತ್ತು ಆಂಗ್ಲ ಭಾಷೆಯಲ್ಲಿ ತಯಾರಾಗುವ ಜಾಹೀರಾತುಗಳು, ಅನ್ಯ ಭಾಷೆಗಳಿಗೆ ಅನುವಾದಿಸಲ್ಪಡುತ್ತವೆ.
ಈ ಅನುವಾದದ ಕಾರ್ಯಕ್ಕೆ “ಆಫ್ ಕೋರ್ಸ್ ಐ ಲವ್ ಕನ್ನಡ, ಪದಗಳು ಹೇಗಿದ್ದರೇನು? ನಮಗೆ ವಿಷಯ ಮುಖ್ಯ” ಅನ್ನುವ ಖನ್ನಡಿಗರು ನಿಯುಕ್ತಿಗೊಂಡಿರಬಹುದು.
ಕನ್ನಡದ ಕಗ್ಗೊಲೆಯಾಗದೇ ಇನ್ನೇನಾಗುತ್ತೆ ಹೇಳಿ.
🙂
Nijakkoo naachike tharuva vichaara..kannadigaru swabhimaana pradarshisi kannada naadu-nudi bagge kendrada nirlakshya prathibhatisadiddare namma maathru bhaashege apachaara esagidanthe..