ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕನ್ನಗೀ, ನಿನ್ನಂತೆ ನಾನಾಗಲ್ಲ ಬಿಡು’ – ರಶ್ಮಿ ಕಾಸರಗೋಡು


3

ರಶ್ಮಿ ಕಾಸರಗೋಡು

1
ಕನ್ನಗೀ…
ನಿನ್ನಂತೆ ನಾನಾಗಲ್ಲ ಬಿಡು
ನಿನ್ನ ಬಿಟ್ಟು ಪರ ಹೆಣ್ಣ ಜತೆ
ಮೈ ಮರೆತು ಆಡಿದ ಗಂಡನ
ಕ್ಷಮಿಸಲಾರೆ
ದೇಹವನೆ ಮಾರಿ ಬಂದವನಾತ
ಹೊಟ್ಟೆ ಹಸಿವೆಂದಾಗ
ತೊಟ್ಟ ಕಾಲಂದುಗೆಯನು ಕೊಟ್ಟು
ಮಾರಿ ರೊಕ್ಕ ತಾ ಎಂದೆ
ಹೊಟ್ಟೆ ಹಸಿವಾದಾಗಲಷ್ಟೇ
ನಾನು ನೆನಪಾದೆನೇ?
ಕೇಳಬಹುದಿತ್ತು ನೀನು
2
ನಿನ್ನ ಯೌವನದ ದೇಹ
ಹಸಿವ ನುಂಗಿ ಕುಳಿತಾಗ
ಸೆರಗ ಜಾರ ಬಿಡಲಿಲ್ಲ
ಗಂಡನಾದವನು ಆಗ ಎಲ್ಲಿದ್ದನೋ?
ಎಲ್ಲಿ ಮಾಧವಿ
ನಿನ್ನ ದಾಹ ನೀಗಿಸಿದಾಕೆ?
ಕೊರಳ ಪಟ್ಟಿ ಹಿಡಿದು
ಕೇಳಬಹುದಾಗಿತ್ತು
ಕನ್ನಗೀ…
ನೀನು ನನ್ನಂತೆ ಆಗಲ್ಲ ಬಿಡು
ನನ್ನ ಪತಿ ಕದ್ದಿಲ್ಲ
ಎಂದು ಪಾಂಡ್ಯ ರಾಜನ ಮುಂದೆ
ಕಣ್ಣೀರಿಟ್ಟು ಹೇಳುವಾಗ
ಕಾಲಂದುಗೆಯನ್ನೆಸೆದು ಸತ್ಯ ದರ್ಶನ ಮಾಡಿದೆ
ನಿನ್ನ ಅವಮಾನದ ಸಿಟ್ಟು
ಕಿಡಿಯಾಗಿ ಮಧುರೆಯನು ಸುಟ್ಟಾಗ
ಕನ್ನಗೀ..
ನೀನು ದೇವಿಯಾದೆ
ಸತ್ಯದಲಿ ಗೆದ್ದ ಸತಿಯಾದೆ
ಇತಿಹಾಸದ ಪುಟ ಸೇರಿ
ಪೂಜೆಯ ಕಲ್ಲಾಗಿ ಉಳಿದು ಹೋದೆ
 

‍ಲೇಖಕರು G

10 August, 2015

2 Comments

  1. ಅಕ್ಕಿಮಂಗಲ ಮಂಜುನಾಥ

    ಪದ್ಯ, ಇಷ್ಟವಾಯ್ತು.

  2. mmshaik

    innuu kaviteyannu gattiyaagi iLisabahudittu..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading