ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನಕ-ಕೃಷ್ಣ

ಸವಿತಾ ನಾಗಭೂಷಣ

kanakadasaಕನಕ ಕುರಿ ಕಾಯುತ್ತಿದ್ದ
ಕೃಷ್ಣ ದನ ಮೇಯಿಸುತ್ತಿದ್ದ
ಪರಿಚಯವಾಯಿತು ಹೆಚ್ಚೇನಿಲ್ಲ….

ಕನಕ ರೊಟ್ಟಿ ಒಯ್ಯುತ್ತಿದ್ದ
ಕೃಷ್ಣ ಬೆಣ್ಣೆ ಹಚ್ಚುತ್ತಿದ್ದ
ಹಂಚಿಕೊಂಡು ಉಂಡರು ಹೆಚ್ಚೇನಿಲ್ಲ…

ಕನಕನಿಗೆ ಹಾಡು ಕಟ್ಟುವ ಹುಚ್ಚು
ಕೃಷ್ಣನಿಗೆ ಕೊಳಲು ಅಚ್ಚುಮೆಚ್ಚು
ಗೆಳೆತನ ಕುದುರಿತು ಹೆಚ್ಚೇನಿಲ್ಲ….

ಕನಕ ‘ಬ್ಯಾ’ ಬ್ಯಾ’ ಎಂದೂ
ಕೃಷ್ಣ ‘ಅಂಬಾ’ ಎಂದೂ
‘ಕಿರ್ ಕಿರ್’ ‘ ‘ ಮುರ್ ಮುರ್ ‘ ಕೂಗು ಹಾಕಿ
ಕೂಡಿ-ಆಡಿ ನಲಿದರು ಹೆಚ್ಚೇನಿಲ್ಲ..

ಕೃಷ್ಣ ಮಹಾತುಂಟ, ತುಡುಗ
ತರಲೆ, ಜಗಳಗಂಟ
ಕನಕ ಅವನ ಭಂಟ,ನೆಂಟ,ಸರ್ವಸ್ವ….
ಇಬ್ಬರೂ ಬದುಕಿ ಬಾಳಿದರು ಹೆಚ್ಚೇನಿಲ್ಲ….

ಕುಲದ ನೆಲೆಯಿಲ್ಲ…ಕಾಲದ ಹಂಗಿಲ್ಲ….
ಕನಕ ಮಣ್ಣಾದ ಕೃಷ್ಣ ಕಲ್ಲಾದ….
ಇದೊಂದು ಕಲ್ಲು ಮಣ್ಣಿನ. ಕತೆ ಹೆಚ್ಚೇನಿಲ್ಲ….

‍ಲೇಖಕರು Admin

17 November, 2016

3 Comments

  1. Krishna

    ನಿಜವಾಗಿ ಹೆಚ್ಚು ಏನೇನೆಲ್ಲ!!! … ಅದ್ಭುತವಾದ ಆ’ಕೃತಿ’ ಇದು…ವಾಹ್ ಮೇಡಂ…ನಿಮಗೊಂದು ನಲ್ಮೆಯ ಸಲಾಮು…

  2. Anonymous

    Krishna kanaka sakya

  3. Santhosh Mugoor

    ಅವನು ಕರೆದ,ಇವನು ತಿರುಗಿದ…
    ಕಲ್ಲು ಉರುಳಿತು,ಹೃದಯ ಅರಳಿತು
    ಕನಕ ಕೃಷ್ಣರ ಕಂಗಳ ಆ ನೋಟಕೆ..
    ಕಲ್ಲು ಮಣ್ಣಾಗಿದ್ದು, ಮಣ್ಣು ಹೊನ್ನಾಗಿದ್ದು ಹೆಚ್ಛೇನಿಲ್ಲ!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading