ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಬ್ಬ ಸಾಕು ಉಳಿದೆಲ್ಲವನ್ನು ಹೊಲಸುಗೆಡಿಸಿ ಗಬ್ಬೆಬ್ಬಿಸಲು…

ಉದಯ ಇಟಗಿ ಅವರ ಬ್ಲಾಗ್ ಓದುತ್ತಿದ್ದಾಗ ಕಣ್ಣಿಗೆ ಬಿದ್ದ ಈ ಕವಿತೆ ಯಾಕೋ ಇವತ್ತಿನ ನಮ್ಮ ಬ್ಲಾಗ್ ಸ್ಥಿತಿಗೆ ಕನ್ನಡಿ ಹಿಡಿಯುತ್ತಿದೆ ಎನಿಸಿತು.

ಅದಕ್ಕಾಗಿ ಅದು ಇಲ್ಲಿದೆ

morton_leslie

ಇಂಗ್ಲಿಷ್ ಮೂಲ: ಐಸಾಕ್ ವ್ಯಾಟ್ಸ್
ಕನ್ನಡಕ್ಕೆ: ಉದಯ ಇಟಗಿ

ನನಗೆ ಆ ಕೊಳಕು ಜನರೆಂದರೆ ಇಷ್ಟವೇ ಇಲ್ಲ
ಬೆರೆಯಲಾರೆ ನಾ ಆ ನೀಚರೊಂದಿಗೆ ಅವರಂತೆ
ಮಾತು ಮಾತಿಗೂ ಆಣೆಯಿಡುತ್ತಾ ಶಪಿಸುತ್ತಾ
ಹೊಲಸು ಮಾತಾಡುತ್ತಾ ಕಾದಾಡುವವರ ಜೊತೆ

ನನ್ನ ಸಿಟ್ಟು ನೆತ್ತಿಗೇರಿ ನೆಮ್ಮದಿ ಕೆಡುವದರಿಂದ
ಕೇಳಲಾರೆ ನಾ ಅವರಾಡುವ ಹೊಲಸು ಮಾತುಗಳನ್ನು
ಹೊಲಸು ಮಾಡಿಕೊಳ್ಳಲಾರೆ ನನ್ನ ನಾಲಗೆಯನ್ನು
ಅವರಂತೆ ಹೊಲಸು ಹೊಲಸು ಮಾತಾಡಿ

ಮೂರ್ಖರ ಸಹವಾಸ ಮೂರ್ಖನನ್ನಾಗಿಸುವದರಿಂದ
ಮಾಡಲಾರೆ ಅಂಥವರ ಸಹವಾಸವನ್ನು
ಜಾಣರ ಸಹವಾಸ ಜಾಣನನ್ನಾಗಿ ಮಾಡುವದರಿಂದ
ಹುಡುಕಿ ಹೊರಡುವೆನು ಅಂಥವರ ಗುಂಪೊಂದನ್ನು

ಕಲಿಯುವರು ಒಬ್ಬನ ಗೇಲಿ ಮಾತುಗಳಿಂದ
ಹತ್ತು ಜನ ಹತ್ತು ಗೇಲಿ ಮಾತುಗಳನ್ನು
ಜಡ್ಡಾದ ಕುರಿಯೊಂದು ಇಡಿ ಮಂದೆಯನ್ನು ಕೆಡಿಸಿದಂತೆ
ಒಬ್ಬ ಸಾಕು ಉಳಿದೆಲ್ಲವನ್ನು ಹೊಲಸುಗೆಡಿಸಿ ಗಬ್ಬೆಬ್ಬಿಸಲು


‍ಲೇಖಕರು avadhi

27 August, 2009

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

2 Comments

  1. Agnihothri

    very nice

  2. mahendra kumar H M

    Good. intime

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading