ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಕನ್ನಡಿಯೂ ಉಳಿದಿಲ್ಲ..!

ಬೆಂಕಿಗೆ ಆಹುತಿಯಾದವರ ಭಕ್ತಿಗೀತೆಗಳು

john suntikoppa
   ಕೊಂಕಣಿ ಮೂಲ: ಜೋ.ಸಿ.ಸಿದ್ದಕಟ್ಟೆ
     ಕನ್ನಡಕ್ಕೆ: ಜಾನ್ ಸುಂಟಿಕೊಪ್ಪ

ರಾತ್ರಿ
ಒಂದು ಭಯಂಕರ ಕನಸು ಬಿದ್ದಿರಬೇಕು
ಊರು ಕಕ್ಕಾಬಿಕ್ಕಿಯಾಗಿದೆ
ಬೆಳಗಿನ ಝಾವದಲ್ಲೇ!

hands stains
ಊರಲ್ಲವಿದು
ಸುಡುಗಾಡು!
ಇಲ್ಲಿಯ ಬೆಂಕಿಯೂ ಸ್ವಾರ್ಥಿಯೇ;
ಅದು ಹೂವನ್ನೂ
ಮಾಲಿಯನ್ನೂ ಬಿಡದೆ ನುಂಗುತ್ತದೆ-
ಕೊಳ್ಳಿಯಿಟ್ಟವರನ್ನು ಹೊರತು ಪಡಿಸಿ!

ಅವರ ಬಂದೂಕಿನ ತಪರಾಕಿಗೆ
ಪಾರಿವಾಳಗಳು ಹಾರಲೇ ಇಲ್ಲ,
ಅಸಲಿಗೆ ಪಾರಿವಾಳಗಳೇ ಇಲ್ಲವಲ್ಲಾ
ಎಲ್ಲಾ ಹದ್ದುಗಳಾಗಿವೆ,..ಹದ್ದುಗಳು!

ನಿನ್ನೆ ಜೀವಂತ ಸುಟ್ಟ
ಆ ಹಳ್ಳಿಯಲ್ಲಿ
ಇಂದು ಮುಂಜಾನೆ
ಎದುರುಬದುರಾದವರ ಮುಖ ವಿಕೃತ
ನೋಡಿಕೊಳ್ಳೋಣವೆಂದರೆ
ಒಂದು ಕನ್ನಡಿಯೂ
ಉಳಿದಿಲ್ಲ….!

ಜಾಗ್ರತೆ!?
ಬೂದಿ ಮುಚ್ಚಿದ ಮುಖಗಳನ್ನು
ವಿಕೃತ ಅನ್ನಬೇಡಿ,
ಆ ಬೂದಿ ಬಳಿದವರಾರು
ಎಂಬುದನ್ನು ಅರಿಯದ ಹೊರತು!

‍ಲೇಖಕರು Admin

27 February, 2016

2 Comments

  1. sangeetha raviraj

    ತುಂಬಾ ಚೆನ್ನಾಗಿದೆ ಜಾನ್ ಸರ್

    • Johns unticoppa

      Thank you madam

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading