ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಎಷ್ಟೋ ಕಂಬಳಿ ಹುಳುಗಳು ಚಿಟ್ಟೆಗಳಾಗುವುದೇ ಇಲ್ಲ..’ – ದಿವ್ಯಾ ಆಂಜನಪ್ಪ

“ಹುಳು”

ದಿವ್ಯಾ ಆಂಜನಪ್ಪ

ಎಷ್ಟೊ ಬಾರಿ
ನಾನೊಂದು ಹುಳುವಾಗಿಯೇ
ಕಾಣುತ್ತೇನೆ
ಕಣ್ಮರೆಯಲಿ ಕೊರೆಯುತ್ತಾ..
ಮುಳ್ಳುಗಳಲ್ಲೇ ಚುಚ್ಚುತ್ತಾ..
ತನಗೆ ತಾ
ಕಂಬಳಿ ಹುಳುವಾಗಿ!

ರಾತ್ರಿ ಕಣ್ಮುಚ್ಚಿದಾಗ
ಬರೀ ಚಿಟ್ಟೆಯದೇ ಕನಸು
ಹಾರಲಾರೆನೆನಿಸಿ ಕನಸಲೂ ಅಳುವೆ
ಎಷ್ಟೋ ಕಂಬಳಿ ಹುಳುಗಳು
ಚಿಟ್ಟೆಗಳಾಗುವುದೇ ಇಲ್ಲ ನಡುವಲೇ ಅಳಿದು
 
ಕಂಬಳಿ ಹುಳುವೆಂದರೆ
ಭಾರಿ ಬೆಚ್ಚುತ್ತದ್ದೆ ಚಿಕ್ಕವಳಿದ್ದಾಗ
ಆದರೆ ಚಿಟ್ಟೆಯನು ಅಷ್ಟೇ ನಾಜೂಕಾಗಿ ಹಿಡಿಯುತ್ತಲಿದ್ದೆ
ಬೆರಳಗಳಲಿ ಬಣ್ಣ ಹತ್ತಿಸಿಕೊಂಡು
ಕೆನ್ನೆ ಹಣೆಗೆ ಹಚ್ಚಿ ಮೆರೆದಿದ್ದೆ
 
ಕನಸು ಕಳೆದುಕೊಂಡ ಆ ರೆಕ್ಕೆ ನವೆದ ಚಿಟ್ಟೆಗಳು
ಇನ್ನೂ ಹಾರುತ್ತಲಿವೆ ಎನ್ನ ಮನದ ಬಾಂದಳದಲ್ಲಿ
ಅರೆ ಬರೆಯ ಚಿತ್ರಗಳಾಗಿ ಹಸಿ ಹಸಿಯ ಚಂದ್ರಮಗಳಾಗಿ
 
ಕಾಂತಿಯಿದ್ದು ಕಾಣುವಷ್ಟು ಬೆಳಕಿಲ್ಲ
ಇರುಳುಗುರುಡೆಂದರೆ ಇದುವೇ ಏನೋ
ಕಾಡುವುದು ಸಾಲು ಸಾಲು ಚಿಟ್ಟೆಗಳು
ರೆಕ್ಕೆ ಇಲ್ಲದೆ ಹಾರಿ…!!
 

‍ಲೇಖಕರು G

4 April, 2015

3 Comments

  1. bidaloti ranganath

    ಕವಿತೆಯಲ್ಲಿ ಬಾಲ್ಯದ ಭಾವನೆಗಳು ಕಾಡುತಿವೆ

  2. ದಿವ್ಯ ಆಂಜನಪ್ಪ

    ಥ್ಯಾಂಕ್ಯೂ bidaloti ranganath ಸರ್, ರುಕ್ಮಿಣಿ 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading