ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಎಲ್ಲೆಲ್ಲೂ ಹರಡುವ ಹೊಸ ಹುಲ್ಲಿನ ಪೊರಕೆಯ..’ – ಸ್ವರ್ಣ ಕವಿತೆ

ಒಂದು ಕವಿತೆ

ಸ್ವರ್ಣ ಎನ್ ಪಿ

ಹಾಗೇ ಕುಳಿತು ಯೋಚಿಸುತ್ತೇನೆ ನಾನು
ನನಗೇನು ಕೊಟ್ಟೆ ನೀನು ?
.
ಸರಿ ರಾತ್ರಿಯ ಸೀಳಿ ಬರುವ ಬೀದಿ ನಾಯಿಯ
ಬೆಚ್ಚಿ ಬೀಳಿಸುವ ಆಕ್ರಂದನ
ನನ್ನ ದನಿ ಪೆಟ್ಟಿಗೆ ಮೂಕವಾಗಿದೆ
.
ಗೋಡೆಯ ಸೀಮೆಂಟಿನ ತುದಿಯ ಮರಳ ಕಣಕೆ ಜೋತು
ಬಿದ್ದ ರೇಷ್ಮೆ ಸೀರೆಯ ಚುಂಗು
ನನ್ನ ಸ್ಪರ್ಶ ಸತ್ತಿದೆ
.
ಎಲ್ಲೆಲ್ಲೂ ಹರಡುವ ಹೊಸ ಹುಲ್ಲಿನ ಪೊರಕೆಯ
ನಯಸಾದ ಕಣಗಳು
ನನ್ನ ನೆನಪುಗಳು ಮರೆಯುತ್ತಿಲ್ಲ
.
ಇರುವ ಹುಡುಕುತ್ತಾ ಸೀಮೆಯಿಂದ ಸೀಮೆ ಅಲೆವ
ಅಲೆಮಾರಿ ಬಕ ಪಕ್ಷಿ
ನನ್ನ ಹಾರಾಟಕ್ಕೆ ಆಕಾಶವೇ ಎಲ್ಲೆ
ಐದಿಂದ್ರಿಯಗಳ ಕೊಂದ ದೋಷ ನನಗಿರಲಿ
ಇರುವ ಹರಿವ ವಿಶಾಲವಾಗಿಸಿದ ಕೀರ್ತಿ ನಿನಗಿರಲಿ
 

‍ಲೇಖಕರು G

9 January, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading