ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎರಡು ಗಜ಼ಲ್‍ಗಳು

ತಿರುಪತಿ ಭಂಗಿ

ಮನಸು ಹದಗೆಡಸಿ ಹಾಗೆ ಹೋಗಿಬಿಟ್ಟೆ ದೇವತೆಯೇ
ಇಟ್ಟ ಕನಸು ಬೆಂಕಿಗೆ ಹಾಕಿ ಎದ್ದುಬಿಟ್ಟೆ ದೇವತೆಯೇ.
 
ಸಿಹಿ ಮಾತಿನ ಪಾಯಸ ಅನುದಿನವೂ ಬಿಡದೆ ಸುರಿದು
ಮೌನ ಹಕ್ಕಿ ಗೋಣು ಸಹಜ ಮುರಿದುಬಿಟ್ಟೆ ದೇವತೆಯೇ.
 
ಪ್ರೇಮದ ಹೂ ಬುಟ್ಟಿಯಲಿ ನವಿರಾದ ಹಾವುಗಳ ಬಚ್ಚಿಟ್ಟು
ಮೋಜಿನ ಆಟವ ಆಡಿ ಸುಸ್ತುಮಾಡಿಬಿಟ್ಟೆ ದೇವತೆಯೇ.
 
ಒಲವಿನ ಅರಮನೆಯ ಬಾಗಿಲಿಗೆ ಕಾರಿಯ ಮುಳ್ಳು ಜಡಿದು
ಬದುಕಿನ ನೂರಾರು ಆಸೆಗಳ ಕೊಂದುಬಿಟ್ಟೆ ದೇವತೆಯೇ.
2

ಎದೆಯಿಂದ ಎದ್ದು ಹೋಗುವಾಗ ಏನೂ ಹೇಳಲಿಲ್ಲ ಏಕೆ
ಒಲುಮೆಯ ದೀಪ ಆರಿಸಿ ಸದ್ದಿಲ್ಲದೆ ಸುಮ್ಮನಾದದ್ದು ಏಕೆ
 
ಚಿಗರುವ ಮುನ್ನವೇ ಮಿಡಿ ಹೂಗನಸುಗಳ ಕತ್ತು ಹಿಚುಕಿ
ನಟ್ಟ ನಡುದಾರಿಯಲಿ ಕೈಬಿಟ್ಟು ಸದ್ದಿಲ್ಲದೆ ನಡದದ್ದು ಏಕೆ
 
ಗುಟ್ಟಾಗಿ ಬಚ್ಚಿಟ್ಟ ಪ್ರೇಮೋತ್ಸವದ ಸುವರ್ಣ ದೀರ್ಘ ಹೊತ್ತಿಗೆ
ಯಾರಿಗೂ ಹೇಳದೆ ಕೇಳದೆ ಸದ್ದಿಲ್ಲದೆ ಸುಟ್ಟುಹಾಕಿದ್ದು ಏಕೆ
 
ನಿನ್ನ ಮೇಲಿರುವ ಹಿಡಿಯಷ್ಟು ನಂಬಿಗೆಗೆ ನಂಜು ಬೆರಸಿ
ಒಲವ ಹತ್ತೆಗೈದು ನೀನೇ ಶಾಶ್ವತ ಮರೆಯಾದದ್ದು ಏಕೆ
 

‍ಲೇಖಕರು G

13 March, 2015

6 Comments

  1. Anonymous

    ಚೆನ್ನಾಗಿವೆ, ಎರಡೂ ಗಜಲ್ ಗಳು.

  2. mallikarjun talwar

    NINNA MELIRUVA HIDIYASTU NAMBIGEGE NANJU BERESI wah! nicle lines tirupati ji…… hige barita iri

  3. mahesh kalal

    sogasagive

  4. P.Manjunath

    nice…

  5. mmshaik

    tumbaa hidisidavu..

    • ತಿರುಪತಿ ಭಂಗಿ

      Dhanyavadagalu MMshaik avare

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading