
ಗಾಯತ್ರೀ ರಾಘವೇಂದ್ರ ಶಿರಸಿ
ನೆನಪುಗಳ ಹೊದಿಕೆ
ಎಳೆದುಕೊಂಡಷ್ಟೂ
ವಿಷಾದದ ಧಗೆ

ಕನವರಿಸಿದಷ್ಟೂ
ಜಟಿಲವಾಗುವ
ನೂಲೆಳೆಯ ಬಂಧ
ಅನುಭವಿಸಿದಷ್ಟೂ
ಆಪ್ತವಾಗುವ
ಗಾಢ ಕತ್ತಲು
ಬರೆದಷ್ಟೂ ಹಗುರಾಗದ
ನೋವು ತುಂಬಿದ
ಮೌನ ಭಾವ
ಹಾಡಿದಷ್ಟೂ ಮುಗಿಯಲಾಗದ
ಎದೆಯಾಲಾಪದ
ವಿರಹ ಗೀತೆ
ಬಯಸಿದರೆ ಸಿಗದ
ಸಿಕ್ಕಿಯೂ ದಕ್ಕದ
ಒಲವು ..ನೀನು





Very nice: ))
ಉತ್ತಮ ಕವಿತೆ
Super