ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ಮೂರ್ಖತನದ ಪರಮಾವದಿ..

ಸರ್ವಋತು ಜಲಪಾತ,

ಆತ್ಮಘಾತುಕ ಯೋಜನೆ

ಪ್ರಸನ್ನ 

ಕರ್ನಾಟಕ ಸರಕಾರವು ಜೋಗದಲ್ಲಿ ಆರಂಭಿಸಲು ಹೊರಟಿರುವ ಸರ್ವಋತು ಜಲಪಾತ ಯೋಜನೆಯು ಆತ್ಮಘಾತುಕವಾದದ್ದಾಗಿದೆ.

jog-fallsಗುಡ್ಡಕ್ಕೆ ಕಲ್ಲು ಹೊರುವವರು ಎಂದು ಮೂರ್ಖರನ್ನು ಕನ್ನಡದ ಗಾದೆ ಮಾತು ಅಣಕಿಸುತ್ತಿತ್ತು. ಅದನ್ನೇ ಕೊಂಚ ತಿದ್ದಿ ಅನುಷ್ಠಾನಗೊಳಿಸಲು ಹೊರಟಿರುವ ರಾಜ್ಯ ಸರಕಾರವು, ಜೋಗದ ಗುಂಡಿಯ ನೀರನ್ನು ಪಂಪ್ ಮಾಡಿ, ಪುನಃ ಗುಡ್ಡಕ್ಕೆ ಹತ್ತಿಸಿ, ಜಲಪಾತದಲ್ಲಿ ಹರಿಬಿಡ ಹೊರಟಿದೆ.

ಇದು ಮೂರ್ಖತನದ ಪರಮಾವದಿಯಲ್ಲದೆ ಬೇರೇನೂ ಅಲ್ಲ. ಪ್ರವಾಸೋದ್ಯಮದ ಹೆಸರಿನಲ್ಲಿ, ನೀರು ನದಿ ಕಣಿವೆ ಕಾಡುಗಳನ್ನು ಅದರ ಪಾಡಿಗೆ ಹರಿಬಿಡದೆ, ಲಾಭಬಡುಕ ಉದ್ಯಮಿಗಳ ಮರ್ಜಿಗೆ ಒಪ್ಪಿಸ ಹೊರಟಿರುವ ಕರ್ನಾಟಕ ಸರಕಾರದ ನಡೆಯು ಖಂಡನಾರ್ಹವಾಗಿದೆ.

ಸರ್ವಋತು ಜಲಪಾತ ಯೋಜನೆಗೆ ಖಾಸಗಿಯವರೇ ಸಂಪೂರ್ಣವಾಗಿ ಬಂಡವಾಳ ಹಾಕಲಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿರುವ ರಾಜ್ಯಸರಕಾರವನ್ನು ಪ್ರಜೆಗಳು ಪ್ರಶ್ನೆ ಮಾಡಬಯಸುತ್ತಾರೆ, ಖಾಸಗಿ ಬಂಡವಾಳವೆಂಬುದು ಎಂದಿನಿಂದ ಜನಪರವೂ ಜೀವಪರವೂ ನಿಸರ್ಗಪರವೂ ಆಯಿತು.

‍ಲೇಖಕರು Admin

29 September, 2016

ನಿಮಗೆ ಇವೂ ಇಷ್ಟವಾಗಬಹುದು…

4 Comments

  1. Suma

    Certainly, anything NATURAL is beautiful but not one which is made to look natural.

  2. Anonymous

    ಅಲ್ಲಿ ಅನೈಸರ್ಗಿಕ ಬೆಳವಣಿಗೆಗಳಿಂದ ತೊಂದರೆ ಆದರೆ, ಉಡುಪಿಯಲ್ಲಿ ಖಾಸಗಿ “ಸರ್ಕಾರಿ” ಆಸ್ಪತ್ರೆಯಲ್ಲಿ ಚಿಕಿತ್ಸೆ ಫ್ರೀ ಇದೆ!

  3. Anonymous

    ಪ್ರಸನ್ನ ಅವರ ಅಭಿಪ್ರಾಯವನ್ನು ನಾನೂ ಅನುಮೋದಿಸುತ್ತೇನೆ. ಇದೆ ಹಣವನ್ನು ಪ್ರವಾಸಿ ತಾಣಗಳ ಮೂಲ ಸೌಕ ರ್ಯ ಅಭಿವೃದ್ಧಿಗೆ ಬಳಸಿದರೆ ಉತ್ತಮವಲ್ಲವೇ? ಈ ನಿಟ್ಟಿನಲ್ಲಿ ನೆರೆಯ ರಾಜ್ಯ ಕೇರಳವನ್ನು ನೋಡಿ ನಾವು ಕಲಿಯುವುದು ಸಾಕಷ್ಟಿದೆ.

  4. R. Shivakumaraswamy kurki

    ಪ್ರಕೃತಿ ಸೌಂದರ್ಯ ಸಹಜವಾಗಿರಲು ಬಿಡಿ. ಹಾಳು ರಾಜಕೀಯ, ಕೇಡು ಉದ್ಯಮ ಜೋಗದ ಗುಂಡಿಯ ಗುಂಡಿಗೆಗೆ ಗುಂಡು ಹಾಕದಿರಲಿ. ಈ ಪಾಪಕೃತ್ಯಕ್ಕೆ ಈ ನೀಚರು ಮುಂದಾಗದಂತೆ ಎಲ್ಲರೂ ಸಿಡಿದೇಳಬೇಕಿದೆ …ಆರ್.ಶಿವಕುಮಾರಸ್ವಾಮಿ ಕುರ್ಕಿ ಮೊ.೮೯೭೦೯೪೮೨೨೧.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading