
ಶ್ವೇತಾ ಎಂ
ಶಾಂತ ಕಡಲ ಮನದಿ
ಕ್ರೋಧಾಗ್ನಿಯು ಹತ್ತಿ ಉರಿಯುತಿಹುದು ಇದೇಕೊ
ಧ್ವೇಷ ಅಸೂಯೆಗಳ ಮಧ್ಯ ಕರಗುವುದೇಕೊ
ಬಣ್ಣಿಸಲಾಗದ, ವರ್ಣಿಸಲಾಗದ ರೌದ್ರತೆ ಏಕೋ
ತಣಿಯಲಿ ಆ ಕ್ರೋಧ ಧ್ವೇಷ ಅಸೂಯೆಗಳನ್ನು
ಮೂಡಲಿ ಸ್ನೇಹ ಪ್ರೀತಿ ಸಹೃದಯ ಮನೋಭಾವವನ್ನು
ಮನದಿ ಸದಾ ಬೆಳಗಲಿ ಪ್ರಸನ್ನತೆ ಹಣತೆಯು
ಕಣ್ಮನ ತಣಿಸಲಿ ಶಾಂತ ರೂಪವು
ನೂರು ಕಾಲ ಪ್ರಜ್ವಲಿಸಲಿ ಆ ಹಣತೆಯು
ಶಾಶ್ವತವಾಗಲೀ ಈ ಪ್ರಶಾಂತತೆಯು





0 Comments