-ಡಿ ಎನ್ ಗುರುಪ್ರಸಾದ್
ಅಮಾವಾಸ್ಯೆಗೊಂದ್ ಸಾರ್ತಿ, ಪೌರ್ಣಮಿಗೊಂದ್ ಸಾರ್ತಿ...
ನೆನ್ನೆ ಆಳ್ವಾಸ್ ‘ನುಡಿಸಿರಿ’ಯ ಪುಸ್ತಕ ಮೇಳದಲ್ಲಿ ಭಾಗವಹಿಸಲು ಹೊರಟಾಗ ಎಷ್ಟು ಉತ್ಸಾಹ ಇತ್ತೋ, ಅದರ ದುಪ್ಪಟ್ಟು ನಿರಾಸೆ ಇಂದು. ಹಿನ್ನಲೆಯನ್ನು ಸಂಕ್ಷಿಪ್ತವಾಗಿ ತಿಳಿಸಿಬಿಡುತ್ತೇನೆ. ೨೦೦೦/- ರೂಗಳ ಡಿಡಿ ಯನ್ನು ಕಳುಹಿಸಿ ಆಲ್ವಾಸ್ ನುಡಿಸಿರಿಯ ಪುಸ್ತಕ ಮೇಳಕ್ಕೆ ಮಳಿಗೆಯನ್ನು ಕಾದಿರಿಸಿದ್ದೆ. ಇಂದಿನವರೆಗೂ ರಶೀದಿ ನನಗೆ ದೊರೆತಿಲ್ಲ. ಅದು ಅಷ್ಟು ಪ್ರಮುಖ ಅಲ್ಲ ಬಿಡಿ. ಇಲ್ಲಿಗೆ ಬರುವುದಕ್ಕೆ ಮೊದಲು ಯಾವಾಗ ಕರೆ ಮಾಡಿದರೂ ಒಂದು ಮಾತು ಆಡಿದ ಕ್ಷಣ ಕರೆಯನ್ನು ಸ್ಥಗಿತಗೊಳಿಸುತ್ತಿದ್ದರು.
ಹೀಗಿರುತ್ತಿತ್ತು ಸಂಭಾಷಣೆ,
ನಾನು: ಸಾರ್, ನಾನು ಆಕೃತಿಯಿಂದ ಕರೆ ಮಾಡುತ್ತಿದ್ದೇನೆ, ಡಿ.ಡಿ ಕಳುಹಿಸಿದ್ದೆ, ಇನ್ನೂ ಪ್ರತಿಕ್ರಿಯೆ ಬಂದಿಲ್ಲ.
ಕರೆ ಸ್ವೀಕರಿಸಿದವರು: ಸರಿ, ಅಂದು ಬನ್ನಿ.
ನಾನು: ಸಾರ್, ಅಲ್ಲಿನ ವ್ಯವಸ್ಥೆ ಏನು?
ಫೋನ್ ಕಟ್!
ಸರಿ ಇದಕ್ಕೆಲ್ಲಾ ಹೆಚ್ಚಿನ ಪ್ರಾಮುಖ್ಯತೆ ಕೊಡಬಾರದೆಂದು ನಾನು ಉತ್ಸಾಹದಿಂದ ನೆನ್ನೆ ಬಸ್ ಹತ್ತಿ, ಪುಸ್ತಕಗಳನ್ನು ಸುಗಮ ಟ್ರಾನ್ಸ್ಪೋರ್ಟ್ ನಲ್ಲಿ ಸಾಗಿಸಿ ಬಂದಿಳಿದೆ. ನಮ್ಮಲ್ಲಿ ೩೨ ಕಾರ್ಟನ್ ಬಾಕ್ಸನ ಪುಸ್ತಕಗಳು. ಎಲ್ಲವೂ ಸುಮಾರು ೪೦ ಕೆ ಜಿ ತೂಗುತ್ತವೆ ಎಂದು ಅಂದಾಜಿಸಬಹುದು.

ಇಂದು ಬೆಳಗ್ಗೆ ಅಲ್ಲಿಗೆ ಹೋದಾಗ ದೊಡ್ಡ ಶಾಕ್ ಕಾದಿತ್ತು.
೧) ಮಳಿಗೆಗಳನ್ನು ಅಲಾಟ್ ಮಾಡುವುದರಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಪುಸ್ತಕೋದ್ಯಮದಲ್ಲಿ ಹಿಂದಿನಿಂದ ಚಾಲ್ತಿಯಲ್ಲಿರುವ ಕೆಲವು ಪ್ರಮುಖ ಮಾರಾಟಗಾರರಿಗೆ ಮೊದಲು ೨ ನೇ ಮಹಡಿಯಲ್ಲಿ ಮಳಿಗೆ ಅಲಾಟ್ ಆಗಿ ನಂತರ ಕೆಳ ಮಹಡಿಗೆ ಸ್ಥಳಾಂತರಿಸಿರುವುದು ಮಳಿಗೆಗಳ ಕಾರ್ಯವನ್ನು ನಿರ್ವಹಿಸುತ್ತಿರುವ ಹರೀಶ್ ಎಂಬುವವರ ದಾಖಲೆಯೇ ತೋರಿಸಿತ್ತು! ನಮಗೂ ಕೆಳಗಿನ ಮಳಿಗೆಯ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಾಗ, ಅದು ಛೇರ್ಮನ್ ಅವರಿಂದ ಹೇಳಿಸಿದವರಿಗೆ ಮಾತ್ರ ಎಂಬ ಪ್ರಾಮಾಣಿಕ ಉತ್ತರ!
೨) ಹರೀಶ್ ಎಂಬುವವರಿಗೆ ಮತ್ತೆ ಮನವಿ ಮಾಡಿಕೊಂಡೆವು, ಸಾರ್ ನಮ್ಮಲ್ಲಿ ೩೨ ಕಾರ್ಟನ್ ಬಾಕ್ಸ್ ಗಳಿವೆ. ಎರಡನೇ ಮಹಡಿಗೆ ಕೊಂಡೊಯ್ಯಲು ಕಷ್ಟ. ಸಣ್ಣ ಸಣ್ಣ ಮಳಿಗೆಯವರಿಗೆ ಮೇಲೆ ಅಲಾಟ್ ಮಾಡಿ. ೨೦೦೦/ ರೂ ಪಾವತಿಸಿ ಪೂರ್ಣ ಕೋಣೆ ಕಾಯ್ದಿರಿಸಿದ್ದವರಿಗೆ ಕೆಳಗೆ ಕೊಡಿ ಎಂದು. (ಕೆಳಗಿನ ಕೆಲವು ಕೋಣೆಗಳಲ್ಲಿ ನಾಲ್ಕು ಪ್ರತ್ಯೇಕ ಪುಸ್ತಕ ಮಾರಾಟಗಾರರಿಗೆ ಒಂದೇ ಮಳಿಗೆಯಲ್ಲಿ ವ್ಯವಸ್ಥೆ ಮಾಡಿದ್ದಾರೆ). ಅದಕ್ಕೆ ಹರೀಶ್ ಅಂದದ್ದು. ನೀವೇನೂ ಚಿಂತಿಸಬೇಡಿ. ಲಿಫ್ಟ್ ಇದೆ. ನಿಮ್ಮ ಸಹಾಯಕ್ಕೆ ಕೆಲವು ಹುಡುಗರನ್ನೂ ಕಳುಹಿಸುತ್ತೇನೆ. ೨ ನೇ ಮಹಡಿಯ ನಿಮ್ಮ ಮಳಿಗೆಗೆ ಸಾಗಿಸುವುದಕ್ಕಾಗಲೀ, ಮತ್ತೆ ವಾಪಸ್ ಸಾಗಿಸುವುದಕ್ಕಾಗಲೀ ಯಾವುದೇ ತೊಂದರೆಯಿಲ್ಲ. ನೀವು ಅಲ್ಲಿ ಲಿಫ್ಟ್ ಸೆಕ್ಯುರಿಟಿಗೆ ೨೦/- ರೂ ಕೊಟ್ಟಿಬಿಡಿ ಎಂದರು. ಒಪ್ಪಿಕೊಂಡೆವು.
೩) ಸರಿ ಪುಸ್ತಕಗಳನ್ನು ಸುಗಮ ಟ್ರಾನ್ಸ್ ಪೋರ್ಟ್ ನಿಂದ ತರಲು ಹೋದಾಗ ಮತ್ತೊಂದು ದೊಡ್ಡ ಶಾಕ್ ಕಾದಿತ್ತು. ಅದರಲ್ಲಿ ನಾಲ್ಕು ಬಾಕ್ಸ್ ಗಳು ಒಡೆದು, ನೆನೆದು ಕೆಲ ಪುಸ್ತಕಗಳು ಹೊರಗೆ ಬಿದ್ದಿದ್ದವು. ಕೇಳಿದ್ದಕ್ಕೆ, ಪುಸ್ತಕದ ಡಬ್ಬಗಳು ಹಾಗೇ ಸಾರ್ ಅಂದ!
೪) ಪುಸ್ತಕಗಳನ್ನು ಸಾಗಿಸಿ ತಂದು, ಲಿಫ್ಟ್ ನಲ್ಲಿ ಹಾಕಲು ಹೋದಾಗ, ಸೆಕ್ಯುರಿಟಿ ನಿರಾಕರಿಸಿದ. ಕೊನೆಗೂ ಮನವೊಲಿಸಿ ಇನ್ನೇನು ಲಿಫ್ಟ್ ಮೇಲರಬೇಕು ಎನ್ನುವಷ್ಟರಲ್ಲಿ, ಎಲ್ಲಿಂದಲೋ ಶ್ರೀವತ್ಸನೋ, ಶ್ರೀವಾತ್ಸವನೋ ಎಂಬ ಹೆಸರಿನ ಮನುಶ್ಯ (ಇವರು ಆ ಕಟ್ಟಡದ ಮೇಲ್ವಿಚಾರಕರಂತೆ!) ಬಂದು ಇಲ್ಲಾ, ಸಾರ್ ಪುಸ್ತಕಗಳನ್ನು ಮೇಲೆ ಸಾಗಿಸುವುದಕ್ಕೆ ಲಿಫ್ಟ್ ಉಪಯೋಗಿಸುವ ಹಾಗಿಲ್ಲ ಎಂದ. ಕಳಕಳಿಯಿಂದ ಮನವಿ ಮಾಡಿ ನಮ್ಮ ತೊಂದರೆಯನ್ನು ಮನವರಿಗೆ ಮಾಡಲು ಎಷ್ಟೇ ಪ್ರಯತ್ನ ಪಟ್ಟರೂ, ಮಾತೇ ಆಡಲು ನಿರಾಕರಿಸಿ ನಡೆದೇಬಿಟ್ಟ.
೫) ಈಗ ಹರೀಶ್ ವರಿಗೆ ಕರೆ ಮಾಡಿ ಬೇಡಿಕೊಂಡರೆ, (ಇಷ್ಟರಲ್ಲಿ ಹರೀಶ್ ಅವರು ಮನೆಗೆ ಹೋಗಿಬಿಟ್ಟಿದ್ದರು) ಅವರಿಂದ ಒಂದೇ ವಾಕ್ಯದ ಉತ್ತರ. ನಿಮ್ಮ ೨೦೦೦/- ವಾಪಸ್ ಕೊಡ್ತೀವಿ, ನೀವು ವಾಪಸ್ ಹೋಗಿಬಿಡಿ! ಲಿಫ್ಟ್ ಆನ್ ಮಾಡೋ ಹಾಗಿಲ್ಲ ಎಂದು ಛೇರ್ಮನ್ ಹೇಳಿದ ಮೇಲೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂಬ ಉತ್ತರ!
೬) ಕೊನೆಗೆ ಅಲ್ಲಿಯ ಇಬ್ಬರು ವಿದ್ಯಾರ್ಥಿಗಳ ಸಹಾಯದೊಂದಿಗೆ, ೩೨ ಬಾಕ್ಸ್ ಗಳನ್ನೂ ಮೇಲೆ ಸಾಗಿಸಿದ್ದಾಯಿತು!
ನನಗೆ ಕೊನೆಗೆ ಉಳಿದ ಪ್ರಶ್ನೆ ಒಂದೇ! ನಿಮ್ಮಲ್ಲಿ ಪಾರದರ್ಶಕತೆ ಇಲ್ಲ. ಎರಡನೇ ಮಹಡಿಯಲ್ಲಿ ಪುಸ್ತಕ ಮೇಳಕ್ಕೆ ಕೊಠಡಿ ಕೊಟ್ಟಿದ್ದೀರಿ! ಅಲ್ಲಿಗೆ ಪುಸ್ತಕಗಳ ಡಬ್ಬಗಳನ್ನು ಸಾಗಿಸಲು ಲಿಫ್ಟ್ ನ ಸೌಕರ್ಯವನ್ನು ನಿರಾಕರಿಸಿದ್ದೀರಿ! ಲಿಫ್ಟ್ ಬರೀ ಛೇರ್ಮನ್ ಸಾಹೇಬರಿಗೆ ಮಾತ್ರವೇ?






doorada betta nunnage
very sad 🙁
ಈ ಬರಹವನ್ನು ಶ್ರೀಯುತ ಮೋಹನ ಆಳ್ವರಿಗೇ …ಮೈಲ್ ಮಾಡಿ…
ಮುಂದಿನ ವರ್ಷದಿಂದಲಾದರೂ….ನಿಮಗಲ್ಲದಿದ್ದರೂ….
ಅಲ್ಲಿಗೆ ಬರುವ ಪ್ರಕಾಶಕರಿಗೆ(ಪುಸ್ತಕ ವ್ಯಾಪಾರಿಗಳಿಗೆ) ಏನಾದರೂ ಪ್ರಯೋಜನವಾದೀತು.
ಮತ್ತು ನಿಮ್ಮ ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳದಂತವರಲ್ಲ ಮೋಹನ ಆಳ್ವರು
ಅಂತ ನಾನು ಅಂದು ಕೊಳ್ಳುತ್ತೇನೆ.
ನಾನು ಮೊದಲಿನಿಂದಲೂ ಗಮನಿಸಿರುವ ಹಾಗೆ ಆಳ್ವಾಸ್ ನುಡಿಸಿರಿಯಲ್ಲಿ ಕನ್ನಡಕ್ಕೆ, ಸಾಹಿತ್ಯಕ್ಕೆ ನೀಡುವ ಪ್ರಾಧಾನ್ಯತೆ ಅಷ್ಟಕಷ್ಟೇ. ಆಳ್ವಾಸ್ ನುಡಿಸಿರಿ ಮುಖ್ಯವಾಗಿ ಮೋಹನ್ ಆಳ್ವರ ಸಂಘಟನಾ ಚತುರತೆ(?), ಅವರ ಸಂಸ್ಥೆಯ ದೊಡ್ಡಸ್ತಿಕೆ, ಭವ್ಯ ಸ್ಟೇಜ್, ದುಬಾರಿ ನೆನಪಿನ ಕಾಣಿಕೆ, ಮಾಧ್ಯಮಗಳಲ್ಲಿ ಅತೀ ಎನ್ನಿಸುವಷ್ಟು ಪ್ರಚಾರ – ಇಷ್ಟಕ್ಕೇ ಸೀಮಿತ. ಇವೆಲ್ಲದರಿಂದ ಕನ್ನಡ ಸಾಹಿತ್ಯವಂತೂ ಉದ್ಧಾರವಾಗುವುದಿಲ್ಲ. ಕಸಾಪದ ಸಾಹಿತ್ಯ ಸಮ್ಮೇಳನ ಎಷ್ಟೇ ಗೊಂದಲಗಳಿಂದೂ ಕೂಡಿದ್ದರೂ, ಅಲ್ಲಿ ಛೇರ್ಮನ್ ಕಡೆಯಿಂದ ಹೇಳಿಸಿ ಅನ್ನುವ ಚಮಚಾಗಳು ಸಿಗುವುದಿಲ್ಲ. ಮೋಹನ್ ಆಳ್ವರೇ, ಗುರುಪ್ರಸಾದ ಅವರಿಗೆ ಉತ್ತರಿಸುವುದು ನಿಮ್ಮ ಕರ್ತವ್ಯ. ಜೊತೆಗೆ, ನಿಮ್ಮ ನುಡಿಸಿರಿಯಲ್ಲಿ ಸಿರಿಯನ್ನು ಕಡಿಮೆ ಮಾಡಿ, ನುಡಿಯನ್ನು ಹೆಚ್ಚು ಮಾಡಬೇಕೆಂದು ಕಳಕಳಿಯ ಪ್ರಾರ್ಥನೆ.
Alli higoo unteeee
Nijakkoo idu besarada sangati. Publishersge neravagalu prathyeka nirvahana samiti rachisidare munde intha kahi prasanga avoid maadabahudu Mohan alva avare…!
very bad
ಪುಸ್ತಕ ಉದ್ಯಮಕ್ಕಿಳಿದಿರುವ ಗುರುಪ್ರಸಾದ್ ಅಂತಹ ಯುವಕರಿಗೆ ಈ ರೀತಿ ಘಟನೆಗಳು ಉತ್ಸಾಹಕ್ಕೆ ಧಕ್ಕೆ ಮಾಡುತ್ತವೆ. ಆಳ್ವಾಸ್ ನುಡಿಸಿರಿಯಲ್ಲಿ ಪುಸ್ತಕ ಮಳಿಗೆಗಳ ವ್ಯವಸ್ಥೆ ಈ ರೀತಿ ಇರುತ್ತದೆ ಎಂದರೆ ಇಷ್ಟು ವರ್ಷ ನುಡಿಸಿರಿ ಹೀಗೆ ಹಾಗೆ ಎಂದು ಹೊಗಳಿದ್ದರ ಬಗ್ಗೆ ಸಂಶಯವಾಗುತ್ತದೆ. ಸಂಬಂಧಿಸಿದವರು ಈ ಚೇರ್ಮನ್, ಚಮಚಾಗಿರಿಗಳಿಗೆ ಕೊನೆ ಹಾಡಬೇಕು. ಸರಿಯಾಗಿ ಅನುಕೂಲಗಳನ್ನು ಮಾಡಿಕೊಡಬೇಕು.
Saujanya illada nudisiri yaava purushaarthakkaagi ? iduu ondu naya vanchane ashte
thumba bejaraythu odi… modale kannada da kelasa maaduva jana kadime… haage enadru madabeku andukondavarigoo heege thondare kottare, amele yaaru mundhe barthare??
ಮೊನ್ನೆ ( ಬುಧವಾರ, ೨೭ ಅಕ್ಟೋಬರ್ ೨೦೧೦ ) ಆಲ್ವಾಸ್ ನುಡಿಸಿರಿಯ ಪುಸ್ತಕ ಮೇಳದಲ್ಲಿ ಭಾಗವಹಿಸಲು ಹೊರಟಾಗ ಎಷ್ಟು ಉತ್ಸಾಹ ,
ನಿನ್ನೆ (ಗುರುವಾರ,೨೮ ಅಕ್ಟೋಬರ್ ೨೦೧೦) ಅದರ ದುಪ್ಪಟ್ಟು ನಿರಾಸೆ,
ಇಂದು ( ಶುಕ್ರವಾರ ೨೯ ಅಕ್ಟೋಬರ್ ೨೦೧೦), ನುಡಿಸಿರಿ ಕಾರ್ಯಕ್ರಮ ಪ್ರಾರಂಭ, ನಾಡಿದ್ದು ರವಿವಾರ ( ೩೧ ಅಕ್ಟೋಬರ್ ……೨೦೧೦) ನುಡಿಸಿರಿ ಕಾರ್ಯಕ್ರಮ ಮುಕ್ತಾಯ
………………….
ಮುಂದೆ ( ಸೋಮವಾರ, ೦೧ ನವೆಂಬರ್ ೨೦೧೦) ‘ಲಿಫ್ಟ್’ ವಿಷಯ ಮರೆತು ಹೋಗುವ ಸಂಭವ ,
ಯಾಕೆಂದರೆ “ನುಡಿಸಿರಿ” ಕಾರ್ಯಕ್ರಮಕ್ಕೆ ಬರುವ ಹೆಚ್ಚಿನ ಕನ್ನಡಾಭಿಮಾನಿಗಳು ಕನ್ನಡ -ಪುಸ್ತಕ ಪ್ರೇಮಿಗಳು.
-ಪ.ರಾಮಚಂದ್ರ,
ರಾಸ್ ಲಫ್ಫಾನ್ , ಕತಾರ್
obba bejavabdari karyakartana varthanege nudisiriynnu, alvara kelasavannu haguravagi matadbedi novagutte. idannu alvara gamanakke tanni. nimma sankata artha agutte. 500kku adhika karyakarthara dudimeyalli obbibbaru tappu madidare idii sammelakke higennabahude? ei hindina varshagalalli higadaddilla. kannadada kelasa maduva kaigalige kesarerachadiri please