ಎಚ್ ಕೆ ಶರತ್
ಅನುದಿನದ ಸಾವು
ಕರಗುತ್ತಿದ್ದೇನೆ ಮೆಲ್ಲಗೆ,
ನಾನೇ ಸೃಷ್ಟಿಸಿಕೊಂಡ ಆಲಯದೊಳಗೆ.
ಅಪ್ಪಣೆ ಇಲ್ಲದೇ ಯಾರಿಗೂ ಪ್ರವೇಶವಿಲ್ಲ
ಒಳ ಬಂದವರು ಇನ್ನೂ ಇಲ್ಲೇ ಇದ್ದಾರೆ
ಮತ್ಯಾರಿಗೂ ಅವಕಾಶವಿಲ್ಲ
ಆಲಯವೂ ಕರಗುತ್ತದೆ.
ಆಗ ಬದುಕು ಬಯಲಲಿ ಬಿದ್ದುಕೊಂಡಿರುತ್ತದೆ…
ಬಸವನ ಹುಳುವಿನಂತೆ,
ಪ್ರತಿರೋಧದೊಂದಿಗೆ ಮುನಿಸಿಕೊಂಡು…
ಸಾವಿಗೆ ಮರುಳಾಗಿ!






Superb
your kavana super