
ಇವತ್ತು ಯಾಕೋ ಹೃದಯ ಕೊಂಚ ಭಾರವಾಯಿತು
ಜೀ ನಲ್ಲಿ ಡ್ರಾಮಾ ಜೂನಿಯರ್ಸ್ ನೋಡ್ತಿದ್ದೆ. ಮಹೇಂದ್ರ ಪ್ರಸಾದ್ ಎನ್ನುವ ಹುಡುಗ ಐದೋ ಆರನೆಯ ಕ್ಲಾಸ್ ನವನು
ಆತ ನಾಲ್ಕನೇ ಕ್ಲಾಸ್ ನಲ್ಲಿದ್ದಾಗ ತಂದೆ ಇಲ್ಲವಾದರು. ಅಮ್ಮ ಈಗ ಅವನನ್ನು ಅಡುಗೆ ಕೆಲಸ ಮಾಡಿಕೊಂಡು ಬೆಳಸುತ್ತಿದ್ದಾರೆ.
ಅವನ ಸಖತ್ ನಟನೆ ನೋಡಿ ಮಾರುಹೋದ ನಟಿ ಲಕ್ಷ್ಮಿ ವೇದಿಕೆಗೆ ಹೋಗಿ ಅವನನ್ನು ಕೇಳಿದರು ‘ನಿನಗೆ ಅಮ್ಮನಲ್ಲಿ ಏನು ಇಷ್ಟ’
ಆ ಹುಡುಗ ಒಂದು ಕ್ಷಣ ಲಕ್ಷ್ಮಿಯನ್ನು ಇದೆಂಥಾ ಪ್ರಶ್ನೆ ಎನ್ನುವಂತೆ ನೋಡಿ- ”ನನಗೆ ಅಮ್ಮನೇ ಇಷ್ಟ” ಎಂದ.
—
ನನಗೆ ಈ ಹಿಂದೆ ಓದಿದ ಸುನಂದಾ ಬೆಳಗಾಂವಕರ ಅವರ ‘ಕಜ್ಜಾಯ’ ಕೃತಿ ನೆನಪಾಯ್ತು.
ಅವರು ಹೇಳ್ತಾರೆ – ಅಮ್ಮ ಬಡಿಸೋ ಅಡುಗೆಯಲ್ಲಿ ಅಮ್ಮ ಅನ್ನೋದೇ ರುಚಿ.


ಅಮ್ಮನ ಕೈ ರುಚಿಯೆ ಹಾಗೆ.