
ಮಹಿಪಾಲರೆಡ್ಡಿ ಮುನ್ನೂರ್
ಪ್ರತಿಷ್ಠಿತ ಅಮ್ಮ ಪ್ರಶಸ್ತಿ ಪ್ರದಾನ ಸೇಡಂನಲ್ಲಿ ಜರುಗಿತು. ಪತ್ರಕರ್ತ, ಕನ್ನಡ ಸಾಹಿತ್ಯ ಪರಿಷತ್ತಿನ ಕಲ್ಬುರ್ಗಿ ಘಟಕದ ಅಧ್ಯಕ್ಷರಾಗಿದ್ದ ಮಹಿಪಾಲ ರೆಡ್ಡಿ ಮುನ್ನೂರ್ ಅವರು ತಮ್ಮ ತಾಯಿಯ ನೆನಪಿನಲ್ಲಿ ಈ ಪ್ರಶಸ್ತಿ ಸ್ಥಾಪಿಸಿದ್ದಾರೆ.
ಈ ಸಾಲಿನ ಪ್ರಶಸ್ತಿಯನ್ನು ರಜನಿ ನರಹಳ್ಳಿ, ಜಯಶ್ರೀ ಕಾಸರವಳ್ಳಿ, ಶಶಿಕಲಾ ವೀರಯ್ಯಸ್ವಾಮಿ, ಎಸ್ ಎಮ್ ಹಿರೇಮಠ, ಮಹಾಂತಪ್ಪ ನಂದೂರ ಅವರಿಗೆ ನೀಡಲಾಯಿತು.
ಅಮ್ಮ ಗೌರವ ಪುರಸ್ಕಾರವನ್ನು ವಿ ಜಿ ಅಂದಾನಿ, ಪಲ್ಲವ ವೆಂಕಟೇಶ್, ಇಂದಿರಾ ಮಾನ್ವಿಕರ್, ಅಪ್ಪಾರಾವ್ ಅಕ್ಕೋಣೆ, ಬಸವಲಿಂಗಮ್ಮ ಪಾಟೀಲ್ ಸೇಡಂ ಅವರಿಗೆ ನೀಡಿ ಗೌರವಿಸಲಾಯಿತು. ಸಚಿವರಾದ ಸತೀಶ್ ಜಾರಕಿಹೊಳಿ ಪ್ರಶಸ್ತಿ ಪ್ರದಾನ ಮಾಡಿದರು














0 Comments