ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮನಿಲ್ಲದ ಈ ದಿನ…

ಅಮ್ಮ ಹಚ್ಚಿದ ಬೆಂಕಿ

–  ಬಿ ಎಂ ಬಶೀರ್

ಗುಜರಿ ಅಂಗಡಿ


ಅಮ್ಮನ ಕೈಯಲ್ಲಿ ನಾಕು
ಪುರುಳೆಗಳಿದ್ದರೆ ಸಾಕು
ಒಲೆಯಲ್ಲಿ ಬೆಂಕಿ ಧಗ್ಗೆನ್ನುತ್ತದೆ….
ಅದ ನೋಡಿ ನಾನು
ಒಲೆಗೆ ಬೆಂಕಿ ಹಚ್ಚೋದು
ಬಲು ಸುಲಭ ಎಂದು ಕೊಂಡಿದ್ದೆ….
 
ಒಂದಿಷ್ಟು ಒಣ ಕಡ್ಡಿಗಳ
ಸೇರಿಸಿ ಸೀಮೆ ಎಣ್ಣೆ ಸುರಿದರೆ
ಬೆಂಕಿ ಭುಗ್ಗ್ ಎಂದು
ಅಷ್ಟೇ ಬೇಗ ತಣ್ಣಗಾಗುತ್ತಿತ್ತು…
ಆಮೇಲೆ ಮೈ, ಕೈ ಮಸಿ…
ಕಣ್ಣಲ್ಲಿ ನೀರು…ಹೊಗೆ ಧಗೆ
ಒಲೆಗೆ ಬೆಂಕಿ ಹಚ್ಹ್ಚುದೆಂದರೆ
 
ಅಮ್ಮ ಬಂದು ನನ್ನ ಪಕ್ಕಕ್ಕೆ ಸರಿಸಿ
ಹೊಸದೇ ಬೂದಿ ಕೆದಕಿ..
ಹನಿ ಸೀಮೆ ಎಣ್ಣೆ ಸುರಿದು
ನಾಲ್ಕು ಕಡ್ಡಿಯ ಜೋಡಿಸಿ
ಊದುಗೊಳವೆಯ ಕೊಳಲಿನಂತೆ
ನುಡಿಸಿ, ಹೊಗೆಯ ಹಾವಿನಂತೆ
ಆಡಿಸಿ ಬೆಂಕಿ ಅರಳಿಸುವ ಪರಿ
ಅಮ್ಮನಿಗಷ್ಟೇ ಸಿದ್ದಿಸಿದ ಸಿದ್ಧಿ
 
ಅಮ್ಮನಿಲ್ಲದ ಈ ದಿನ…
ಇದ್ದ ಎಲ್ಲ ಟೊಮೇಟೊ…ತೆಂಗಿನ ತುರಿ..
ಉಪ್ಪು, ಹುಳಿ, ಖಾರ ಸುರಿದರೂ..
ಸಾರಿಗೆ ಅಮ್ಮನ ಪರಿಮಳವಿಲ್ಲ,
ರುಚಿಯಿಲ್ಲ….!
 
ಅಮ್ಮನಂತೆ ಒಲೆಯ ಬೂದಿಯನ್ನು ಬಗೆಯಲು
ಕಡ್ಡಿಗೆ ಕಡ್ಡಿ ಜೋಡಿಸಿ ಒಲೆಯನ್ನು ಬೆಳಗಲು
ನಮಗೆ ಗೊತ್ತಿರಲಿಲ್ಲ….
 
ಅಮ್ಮ ಹಚ್ಚಿದ ಬೆಂಕಿ
ನನ್ನ ಎದೆಯ ಒಲೆಯಲ್ಲಿ ಧಗಿಸುತ್ತಿದೆ
ಕಣ್ಣ ಕೊಡದಲ್ಲಿ ನೀರು
ಕುದಿಯುತ್ತಿದೆ
 
 
 

‍ಲೇಖಕರು avadhi

1 March, 2013

5 Comments

  1. savitri

    ನನಗೆ ಈ ಕವನ ಬಹಳ ಇಷ್ಟವಾಗಿದೆ ಸರ್.

  2. VEDA

    Oh sundara kavana tumba ishta aythu.

  3. bharathi bv

    Mechchide ….pratheee saalannoo ..

  4. ಶಿವಶಂಕರ್ ಎಸ್.ಜಿ

    koneya sallugalu kela kaala manassinalli uliyuthhave
    chennagide

  5. ಬಿಎಂ ಹನೀಫ್

    ಪ್ರಿಯ ಬಶೀರ್
    ಒಂದೇ ನಿಮಿಷ.. ಎಷ್ಟು ಸಶಕ್ತ ಕವಿತೆ ಓದಿದೆ..! ನನ್ನ ಉಮ್ಮನ ನೆನಪಾಯಿತು..
    ಹನೀಫ್ ಬಿ.ಎಂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading