ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಗಲಿಕೆ

ಮುರಳಿ ಹತ್ವಾರ್

ವಾರಕ್ಕೆ ಎರಡು ಸಂಜೆ
ಕೈ ಹಿಡಿದು, ಪಕ್ಕದಲಿ ಕೂತು
ಕುಶಲ ಕೇಳುತ್ತ, ಸುಕ್ಕುಗಟ್ಟಿದ
ಮುಖದಲಿ ನಗೆಯ ಮೂಡಿಸುತ್ತಿದ್ದವ,
ಕಿಟಕಿಯಾಚೆಯ ಅಂಗಳದಲಿ;
ಸುರಿವ ಮಳೆಯಲಿ ನಿಂತು
ಕೈ ಬೀಸುತ್ತಿರುವುದು ಯಾಕೆಂದು
ಆಕೆಗೆ ತಿಳಿಯಲಿಲ್ಲ.

ಮಳೆ ಬಂದು ನಿಂತ ಮೇಲೆ
ಆಗಸವೆಲ್ಲ ನೀಲಿಯಾಗಿ,
ಹಸಿರಾದ ಹುಲ್ಲಿನ ಅಂಗಳದ
ಬದಿಯ ಹೂಗಳ ಪಕ್ಕ
ನಗುನಗುತ ನಿಂತು
ಕೈ ಬೀಸಲೂ ಅವನು
ಬರಲಿಲ್ಲ ಯಾಕೆ ಎಂದು
ಆಕೆಗೆ ತಿಳಿಯಲಿಲ್ಲ

ಕೂಡಿಟ್ಟ ನೆನಪುಗಳ
ಮಡಕೆ ಒಡೆದು ಚೂರಾದರೂ
ಮನದ ಅಡಿಯ ನಗುವಿನಲಿ
ಅರಳುತ್ತಿದ್ದ ಆ ಅಮ್ಮನ ಸುಕ್ಕುಗಳಿಗೆ,
ಆ ಕೇರ್-ಹೋಮಿನ ಅಂಗಳಕೆ
ಆ ಮಗ ಮತ್ತೆಂದೂ ಬರಲಾರ
ಎನ್ನುವ ವ್ಯಥೆ, ಬಹುಶಃ
ತಿಳಿಯುವುದೇ ಇಲ್ಲ.

‍ಲೇಖಕರು Avadhi

1 January, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading