ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆಗೆಟಿವ್ ಅಲ್ಲದ ಸ್ಟೋರಿ

ಪರಮೇಶ್ ಗುರುಸ್ವಾಮಿ ನಡೆದಾಡುವ ವಿಕಿಪೀಡಿಯ. ಅವರ ಬಳಿ ಕನ್ನಡ ನಾಡು ಕಂಡ ಅನೇಕ ಮಹತ್ವದ ಘಟನೆ, ವ್ಯಕ್ತಿ, ಸ್ಥಳದ ನೂರೆಂಟು ನೆನಪಿನ ತುಣುಕುಗಳಿವೆ. ಆಗೀಗ ಅದನ್ನು ‘ಅವಧಿ’ಯಲ್ಲಿ ಬಿಚ್ಚಿಡಲಿದ್ದಾರೆ 

paramesh guruswamy

ಪರಮೇಶ್ವರ ಗುರುಸ್ವಾಮಿ 

accident movieಶಂಕರ್ ನಾಗ್ ರವರ “ಆಕ್ಸಿಡೆಂಟ್” ಚಿತ್ರದಲ್ಲಿ ಅಪರಾಧವನ್ನು ಮಾಲೀಕರ ಮಗನ ಪರವಾಗಿ ತಾನು ಹೊತ್ತುಕೊಳ್ಳುವ ಡ್ರೈವರ್ ಪಾತ್ರವೊಂದು ಬರುತ್ತದೆ. ಆ ಚಿತ್ರ ನೋಡಿರುವವರು ಆ ಪಾತ್ರವನ್ನು ಮರೆಯಲು ಸಾಧ್ಯವಿಲ್ಲ. ಇವರೇ, ಶ್ರೀನಿವಾಸ ತಾವರಗೆರಿ.

ಬಿಜಾಪುರದಲ್ಲಿ ಹವ್ಯಾಸಿ ರಂಗ ಚಟುವಟಿಕೆಗಳನ್ನು ಸ್ಥಾಪಿಸಿದವರು.

ಪಾತ್ರ ಮಾಡಲು ಹೆಣ್ಣು ಮಕ್ಕಳು ಸಿಗುತ್ತಿಲ್ಲ ಎಂದಾದಾಗ ತಮ್ಮ ಪತ್ನಿಯವರಿಂದಲೇ ಪಾತ್ರ ಮಾಡಿಸಿದರು. ನನಗೆ ಅವರ ಹೆಸರು ನೆನಪಾಗುತ್ತಿಲ್ಲ. ಫಾಲ್ಕೆಯವರ ಬದುಕಿನ ಕುರಿತ “ಹರಿಶ್ಚಂದ್ರ ಚಿ ಫ್ಯಾಕ್ಟರಿ”ಯಲ್ಲಿ ಹೀಗೇ ಚಿತ್ರದಲ್ಲಿ ಪಾತ್ರ ಮಾಡು. ಎಂದು ಫಾಲ್ಕೆಯವರು ಹೇಳಿದಾಗ ಅವರ ಹೆಂಡತಿ, ತಾನು ಪಾತ್ರ ಮಾಡಿದರೆ ನಿಮಗೆಲ್ಲ ಊಟ ತಿಂಡಿ ಒದಗಿಸುವವರು ಯಾರು ಎಂದು ತಪ್ಪಿಸಿಕೊಳ್ಳುತ್ತಾರೆ. ಅದು, ಬಹಳ ಹಿಂದೆ, ಶತಮಾನದ ಹಿಂದೆ.

ಇದೂ ಬಹಳ ಹಿಂದೆಯೇ, ಅರ್ಧ ಶತಮಾನದಷ್ಟು ಹಿಂದೆ. ತಾವರಗಿರಿಯವರ ಪತ್ನಿಯವರು ಪಾತ್ರವನ್ನೂ ಮಾಡಿದರು ತಂಡಕ್ಕೆ ಊಟ ತಿಂಡಿಯನ್ನೂ ಸರಬರಾಜು ಮಾಡಿದರು. ಇವರ ಬಗ್ಗೆ ಇನ್ನೂ ಇದೆ. ಇವರ ಶ್ರೀಮತಿಯವರ ಮತ್ತು ಇವರ ಇನ್ನೊಂದಿಷ್ಟು ನೆಗೆಟೀವ್ ಗಳು ಸಿಕ್ಕಾಗ ಹೇಳುವೆ.

‍ಲೇಖಕರು Admin

5 May, 2016

1 Comment

  1. Anonymous

    ಪ್ರೊ. ಬಸವರಾಜ ಪುರಾಣಿಕ

    ಮರೆತು ಹೋಗದ ಮುನ್ನ ಶ್ರೀನಿವಾಸ ತಾವರಗಿರಿ ಪ್ರತಿಭೆಯ ಪರಿಚಯಿಸಿದ ಪರಮೇಶ್ವರ ಗುರುಸ್ವಾಮಿ ಅಭಿನಂದನಾರ್ಹರು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading