ಬಾ ಕವಿತಾ ಲೇಖನಗಳು
ಅನು ಪಾವಂಜೆ ಕವಿತೆ: ಚಾದರ ಮತ್ತೆ ನಿದ್ದೆಗೆ
ಅನು ಪಾವಂಜೆ ರಾತ್ರಿಯ ಕನಸನ್ನೆಲ್ಲಾ ತನ್ನೊಳಗೆ ಸುರುಳಿಸುತ್ತಿ ಮಡಚಿಕೊ೦ಡ ಚಾದರ ಮತ್ತೆ ನಿದ್ದೆಗೆ ಜಾರುತಿತ್ತು….
ಶಾಂತಲಾ ಭಂಡಿ ಕವಿತೆ: ಟ್ರೇನಿನ ಹಾದಿ
ಶಾಂತಲಾ ಭಂಡಿ ನೆನಪು ಕನಸುಗಳ ನಡುವೆ ಟ್ರೇನಿಗೆ ಕೊಂಡಿದ್ದು ಓಪನ್ ಟಿಕೆಟ್ ಎಷ್ಟು ಹೊತ್ತಿಗೆ ಹೊರಡುವೆನೋ ಗೊತ್ತಿಲ್ಲ ಟಿಕೆಟ್ ಕೊಟ್ಟವನಿಗೂ ಗೊತ್ತಿಲ್ಲ ಹೊರಡುವ ಸಮಯ ನಿಗಧಿಯಾಗಬೇಕಷ್ಟೇ ಟ್ರೇನಿಗೂ ನನಗೂ ಬೆಳಗಿನ ಬಿಸಿಕಾಫಿ ಸಂಜೆತನಕ ಇರಬೇಕೆಂದರೆ… ಸುಮ್ಮನೆ ತಮಾಷೆ ಬೇಡ ಆರಿದ್ದು ಕಾಫಿಯಲ್ಲ […]
ಭೂಕಂಪನವಾಗದಿರಲಿ!
ಅರುಣ ಜೋಳದಕೂಡ್ಲಿಗಿ ದೇವರೆ ನಿನ್ನಲ್ಲಿ ನನ್ನದೊಂದು ಪುಟ್ಟ ಕೋರಿಕೆ ಗುಡಿಸಲು ಮಹಡಿ ಮನೆ ಕನಸು ಕಾಣುವಾಗ ಭೂಕಂಪನವಾಗದಿರಲಿ!
ಶಾಂತಲಾ ಭಂಡಿ ಕವಿತೆ: ನಡುಮನೆ
ಶಾಂತಲಾ ಭಂಡಿ ನೆನಪು ಕನಸುಗಳ ನಡುವೆ ಅಲ್ಲಿ ಹಬ್ಬಕ್ಕೆ ಬಾರದ ಹಿರಿಮಗಳಿಗೆ ಹೆಬ್ಬಾಗಿಲಲ್ಲಿ ಕಾಯುತ್ತಿದ್ದಾನೆ ಅಪ್ಪ ನಡುವಯಸ್ಸು ಜಾರುತ್ತಿದೆ ಯೋಚಿಸುತ್ತಿದ್ದಾನೆ ಕರೆಯಲು ಮರೆತೆನೋ ಹೇಗೆ? ಇಲ್ಲಿ ಅಳಿಯನಿಗೆ ಅಲ್ಲಲ್ಲಿ ಬಿಳಿಕೂದಲು ಮಗಳು ಹೇಳಿದ್ದಾಳೆ ಬುದ್ಧಿ ಮಾಗುತ್ತಿದೆ ಕಣೋ… ಅಂತ ನಡುಮನೆಯಲ್ಲಿ ನಿಂತು […]
ಚಲನ-ಚಿತ್ರ..
–ಶ್ರೀನಿಧಿ ಡಿ ಎಸ್ ತುಂತುರು ಹನಿಗಳು ಇಪ್ಪತ್ತಡಿಗೂ ಮೀರಿ ನಿಂತ ನಾಯಕನ ಕಟೌಟಿನಲ್ಲಿ ಮೂಗು ಕೊಂಚ ಊನ ಸಾಲಿನ ಕೊನೆಯಲ್ಲಿ ನಿಂತವಗೆ ಟಿಕೇಟು ಸಿಗುವುದು ಅನುಮಾನ ವಾಗಿ ಪದಪದ ಚಡಪಡಿಕೆ ಕಣ್ಣ ಕನಸುಗಳಿಗೆ ದಾರಿ ತೋರುವ ಕೌಂಟರಿನ ಹಿಂದೆ ಕೂತ ಮುಖಕ್ಕೆ ಸುಮ್ಮನೆ ಬಿಗುಮಾನ […]
ಅಸ್ತ …
-ರಾಜು ಹೆಗಡೆ ಸೂರ್ಯ ಮುಳುಗುತ್ತಿದ್ದಾನೆ ಎತ್ತರದ ಮರ ನೆಲಕೆ ಉರುಳಿದೆ ತೊಡೆ ಮುರಿದು ಎಲೆ ಬಾಡಿವೆ ಜೀವರಸ ಒಣಗುತ್ತಿದೆ ಎಂಥ ಮರವಾಗಿದ್ದರೂ,ಇಲ್ಲಿ ಹಕ್ಕಿ ಹಾಡಿದ್ದವು ಗೂಡು ಕಟ್ಟಿದ್ದವು ಮಕ್ಕಳಾಡಿದ್ದರು ಇದರ ಕೆಳಗೆ ಆಕಳು, ಎಮ್ಮೆ ಮೆಂದು ಮೆಲುಕಾಡಿಸಿದ್ದವು, ಪ್ರೇಮಿಗಳು ಕೂತು ಮಾತಾಡಿದ್ದರು, […]
ಸುಖದ ಸ್ವಪ್ನಗಾನ
– ನರೇಶ್ ಮಯ್ಯ ಅಂಗನಾಂಗನೆಯ ಅಂಬುಗೆಯ ಅಪ್ಪುಗೆಯೇ ಅಹಹಾ. . . ಆತ್ಮಸಾನ್ನಿಧ್ಯದ ಅಂತರಂಗದ ಅಲೌಕಿಕ ಸುಖವೇ ಬಾ ಇತ್ತ ಬಾ ಇತ್ತ ನನ್ನತ್ತ ಬಿತ್ತುತ್ತ ನಿನ್ನೊಲವ ಕಾವ. ಕಾದು ಕಾದೆದ್ದು ಸೆಟೆದೆಳೆದ ಸರ್ಪ ಸಂಭೋಗದ ಸೊಗದ ಸಂಗಡ ಸರಸವಾಡುತ್ತೆ ಇನಿಯೆ […]
ಉಯಿಲಿಲ್ಲದವನ ಉಸಾಬರಿ…
– ನರೇಶ್ ಮಯ್ಯ ಹೀಗೆ ಹತ್ತು ಹದಿನಾರು ಮುಂಗಾರು ಮುಗಿದುಹೋಗಿದ್ದವು ನಿನ್ನ ಮಜ್ಜನದಲ್ಲಿ. ಮಸಣದಿಂದೆದ್ದು ಬಂದ ಆ ಘಮಲು ನಿನ್ನ ಮುಡಿ ಮುಟ್ಟಿ ಮಟ ಮಟ ಮಧ್ಯಾಹ್ನವೇ ಮಾಡಿಹೋಗಿತ್ತು ಮಾಟ. ಮಾತಿಗೂಮೀರಿದದಾವುದೋ ಒಂದು ನಿವರ್ಿಣ್ಣ ಭಾವ ಮಿಣುಕು ಮಿಂಚುಳ್ಳಿಗಳ ಆಲಾಪಲೋಲುಪದಲ್ಲಿ ಲೀನವಾದಾಗ ಅದೋ. […]
ಯಾಕೆಂದರೆ…
-ರಾಜು ಹೆಗಡೆ ಬೆಳದಿಂಗಳು ಹಾಲು ಚೆಲ್ಲಿದಂತೆ ಅಲ್ಲ ಯಾಕೆಂದರೆ ಹಾಲು ಚೆಲ್ಲಿದರೆ ಖುಷಿಯಾಗುವುದಿಲ್ಲ. ಹುಡುಗಿಯರ ತುಟಿ ತೊಂಡೆ ಹಣ್ಣಿನಂತಲ್ಲ ಯಾಕೆಂದರೆ ಹಣ್ಣು ತೊಂಡೆಯನ್ನು ಯಾರೂ ಅಷ್ಟಾಗಿ ಖಾಯಾಸು ಮಾಡುವುದಿಲ್ಲ. ಹೌದಲ್ಲ ಅನಿಸುವುದೆಲ್ಲ ಹೌದಾಗಿರುವುದಿಲ್ಲ ಯಾಕೆಂದರೆ ಹೌದಿನ ಜತೆ ಅಲ್ಲ ಇದೆಯಲ್ಲ! ಹಾಗೆಯೆ […]
ನರೇಶ್ ಮಯ್ಯ ಕವಿತೆ-’ಮಂದ್ರ ಲಾಲಿ’..
-ನರೇಶ್ ಮಯ್ಯ ಮೃಷ್ಟಾನ್ನ ಮೊಗೆಮೊಗೆದು ಕೊಟ್ಟಾಗಲೂ ಏಳಲಿಲ್ಲ ಅಗೆದಗೆದು ತೆಗೆದಾಗ ನಿನ್ನಾತ್ಮದಂತಧ್ಯರ್ಾನ; ಮೋಹವೆಂಬ ನಿನ್ನ ಮಸಣದಲ್ಲಿ. ಮಗು, ಮಲಗಬೇಡ ಏಗು ನಿರಂತರ-ಸಾಗು ಕಾಲಾಂತರ, ಬಾಗುವುದೇ ಭಾಗ್ಯವೆಂದು ಬಗೆದುಕೋ; ಮಗು, ‘ಮಗುವಾಗು, ಶಾರದೆಯ ಮಗುವಾಗು’ ಶ್ರಾದ್ಧದ ಶ್ರದ್ಧೆ ಬೇಡೆನಗೆ ಶುದ್ಧ-ನಿಶಿದ್ಧ ನೆವಗಳ […]
ಅವಳು ನಿಜವಾಗಿ ಬಂದಿರಲಿಲ್ಲ…
-ರಾಜು ಹೆಗಡೆ ಅಗಮನ ಒಂದು ಚಳಿ ಇಳಿಯುವ ಸಂಜೆ ಅವಳು ಬಂದಳು ಬಗಲಲ್ಲಿ ಮಗು ಏನೇನೊ ಮಾತುಕತೆ ನಡುನಡುವೆ ಮಗುವಿನ ಜತೆ ಉಲ್ಲಲ್ಲಾಯಿ ನಾನೂ ಕೂಡ ರೂಮು ತುಂಬ ಹರಡಿರುವ ಪಾತ್ರೆ ಪಗಡೆ, ಕಸ ಗಿಸ, ಪುಸ್ತಕ ಗಿಸ್ತಕ ಇತ್ಯಾದಿ […]
ನರೇಶ್ ಮಯ್ಯ ಕವಿತೆ-‘ಉಲಿದೆದ್ದ ಉರುಸು’..
–-ನರೇಶ್ ಮಯ್ಯ ಸೊಬಗ ಸೀರಿಯೊಳಗೆ ಬಚ್ಚಿಟ್ಟ ಹಸಿರ ಹಸಿವು ಚಣ್ಣೆಂದು ಎಗರಿ ಎಪ್ಪತ್ತಾರು ಗಾವುದ ಹಾರಿ ಹರಿದುಹೋದ ಹರಿಣ ಸರಿ ಹೊತ್ತಾದರೂ ಗೊಣಗುತ್ತಲೇ ಮುಸುಕಿನೊಳಗೇ ಮುದುಡಿ ಮಲಗಿದ್ದ ಟಾಮಿ ಹೆಬ್ಬಾರ ಎತ್ತಲಾರದೇ ಹೆಳವನ ಮಾಡಿದ್ದ ಬಂಡಿ ಸೆರೆಸಿಕ್ಕಾಗ ಗಕ್ಕೆಂದು ಗಾಳಕ್ಕಿಡಿದು ಗುಳುಂ […]
ವಿಳಾಸಗಳ ಸುಳಿವಿಲ್ಲದೆ..
–ಪ್ರತಾಪ್ ಬ್ರಹ್ಮಾವರ ಅಳಿಸಿ ಹೋದ ಹೆಜ್ಜೆ-ಗುರುತುಗಳ ಹಿಂಬಾಲಿಸಿ , ವಿಳಾಸಗಳ ಸುಳಿವಿಲ್ಲದೆ ಭ್ರಮ-ನಿರಸರಾದವರು ನಾವು…, ಕತ್ತಲ ರಾತ್ರಿಯಲಿ ಕಳೆದುಹೋದವರನು’ , ಕತ್ತಿಗೆ ಮುಸುಕು ಹಾಕಿ ಕತ್ತಲಲ್ಲೇ ಹುಡುಕ ಹೊರಟವರು ನಾವು , ನಾವು ವಿಳಾಸವಿಲ್ಲದವರು, ದಯವಿಟ್ಟು ಹುಡುಕ ಬೇಡಿ , ನಮ್ಮ […]
ತೊಮಸ್ ತ್ರಾನ್ಸ್ತ್ರೋಮರ್ರವರ ಇನ್ನಷ್ಟು ಪದ್ಯಗಳು..
-ಡಾ.ಜೆ.ಬಾಲಕೃಷ್ಣ ಅಂತರಗಂಗೆ ಯಿಂದ ಅನುವಾದದಿಂದ ದೊರಕುವುದೇ ಕಾವ್ಯ ಎಂದು ಒಬ್ಬ ಕಾವ್ಯ ವಿಮರ್ಶಕ ತೊಮಸ್ ತ್ರಾನ್ಸ್ತ್ರೋಮರ್ರವರ ಕಾವ್ಯದ ಬಗ್ಗೆ ಹೇಳುತ್ತಾ ಬರೆದಿದ್ದಾನೆ. ಇಲ್ಲಿ ಅನುವಾದವೆಂದರೆ, ಕವಿ ನಿಶ್ಶಬ್ದದಿಂದ ತನ್ನ ಸಂವೇದನೆಗಳಿಗೆ ಸೂಕ್ತ`ಶಬ್ದ’ವನ್ನರಸಿ ಅವ್ಯಕ್ತದಿಂದ ವ್ಯಕ್ತಕ್ಕೆ ಅದನ್ನು ಅನುವಾದಿಸುವುದು ಎಂದರ್ಥ.ತೊಮಸ್ ಸ್ವೀಡನ್ನಿನ ಅತ್ಯಂತ ಜನಪ್ರಿಯ ಕವಿ. 2011ರ ಸಾಹಿತ್ಯ ನೋಬೆಲ್ಪಾರಿತೋಷಕ ಆ ಕವಿಗೆ ದೊರಕಿದೆ. ಸ್ವೀಡನ್ನಿಗೆ 36 ವರ್ಷಗಳ ನಂತರನೋಬೆಲ್ ಪಾರಿತೋಷಕ ದೊರೆತಿದೆ. ಆದರೆ ಹಲವಾರು ವಿಮರ್ಶಕರ ಪ್ರಕಾರಈ ಬಹುಮಾನ ತೊಮಸ್ಗೆ ಈ ಮೊದಲೇ ದೊರಕಬೇಕಿತ್ತು. ಪ್ರತಿ ವರ್ಷಸಾಹಿತ್ಯದ ನೋಬೆಲ್ ಬಹುಮಾನ ಪ್ರಕಟಿಸುವ ಸಮಯಕ್ಕೆ ಅದು ತೊಮಸ್ಗೇದೊರಕುತ್ತದೆ ಎಂದು ಪತ್ರಕರ್ತರು ತೊಮಸ್ ಮನೆಯ ಎದುರುಕಾದಿರುತ್ತಿದ್ದರಂತೆ. ಚಿಲಿಯಲ್ಲಿ ಪ್ಯಾಬ್ಲೊ ನೆರುಡಾ ಮನೆಮಾತಾಗಿದ್ದಂತೆ ತೊಮಸ್ ಸ್ವೀಡನ್ನಿನಲ್ಲಿಮನೆಮಾತಾಗಿದ್ದಾನೆ. ನೆರುಡಾ ಸಾಮಾಜಿಕ ಮತ್ತು ಧಾರ್ಮಿಕ ಚೌಕಟ್ಟುಗಳನ್ನುಧಿಕ್ಕರಿಸಿದರೆ, ತೊಮಸ್ ಆಧ್ಯಾತ್ಮ ಮತ್ತು ಪ್ರಕೃತಿಯಲ್ಲಿ ಆಸರೆ ಪಡೆದಾತ.ಭಾಷೆಯನ್ನೇ ಒಂದು ಮೆಟಫರ್ ಆಗಿ ಬಳಸುವ ಕವಿ ತೊಮಸ್. ಆತನಿಶ್ಶಬ್ದದಲ್ಲಿ ಶಬ್ದಗಳನ್ನು ಹೆಕ್ಕಿ ತೆಗೆಯುವ ಕವಿ. `ಭಾಷೆ ವಧಿಸುವವರೊಂದಿಗೆಹೆಜ್ಜೆ ಹಾಕಿ ನಡೆಯುತ್ತಿರುತ್ತದೆ. ಹಾಗಾಗಿ ನಾವು ಹೊಸ ಭಾಷೆಕಂಡುಕೊಳ್ಳಬೇಕು’ ಎನ್ನುತ್ತಾನೆ ತೊಮಸ್. ಪದಗಳ ಹೊರೆ ಹೊತ್ತವರು ಹೇಸಿಗೆ ತರಿಸುತ್ತಾರೆ, ಬರೇ ಪದಗಳು – ಭಾಷೆಯೇ ಇಲ್ಲ. ಹಿಮಾಚ್ಛಾದಿತ ದ್ವೀಪದೆಡೆಗೆ ನನ್ನ ಪಯಣ ಮುಂದುವರಿಸುತ್ತೇನೆ. ದಟ್ಟಾರಣ್ಯಕ್ಕೆ ಪದಗಳೇ ಇಲ್ಲ. ಖಾಲಿ ಖಾಲಿ ಪುಟಗಳು ಎಲ್ಲ ದಿಕ್ಕಿಗೂ ಹರಡಿವೆ. ಹಿಮದಲ್ಲಿ ಜಿಂಕೆಯ ಹೆಜ್ಜೆಯ ಗುರುತು: ಅದೊಂದು ಭಾಷೆ, ಪದಗಳೇ ಇಲ್ಲದ ಭಾಷೆ. (ಫ್ರಂ ಮಾರ್ಚ್ 1979 ಪದ್ಯದಿಂದ) ತೊಮಸ್ ರವರ ಬಹುಕಾಲದ ಗೆಳೆಯ ಮತ್ತು ಆತನ ಪದ್ಯಗಳನ್ನು ಇಂಗ್ಲಿಷಿಗೆಅನುವಾದಿಸಿರುವ ರಾಬಿನ್ ಫುಲ್ಟನ್ ತೋಮಸ್ ಮತ್ತು ಆತನ ಕಾವ್ಯದ ಬಗ್ಗೆಈ ರೀತಿ ಹೇಳಿದ್ದಾನೆ: `ಕೆಲವೊಂದು ಕವಿಗಳು ಭಾಷೆಯನ್ನು ಅದೆಷ್ಟು ದಟ್ಟವಾಗಿಬಳಸುತ್ತಾರೆಂದರೆ, ಅವುಗಳನ್ನು ಅನುವಾದಿಸಲು ಆಸ್ಪದವೇ ಇರುವುದಿಲ್ಲ.ತ್ರಾನ್ಸ್ತ್ರೋಮರ್ ಸಹ ಅದೇ ರೀತಿಯ ಕವಿ. ಆತ ಹಲವಾರು ರೀತಿಗಳಲ್ಲಿಸಾಪೇಕ್ಷವಾಗಿ ಸಾಹಸಿಕೆಯಿಲ್ಲದ ಮತ್ತು ಸರಳವಾಗಿರುವ ಭಾಷೆ ಬಳಸುತ್ತಾನೆಹಾಗೂ ಓದುಗರಿಗೆ ವಿಶಿಷ್ಟ ಪ್ರತಿಮೆಗಳನ್ನು ನೀಡುತ್ತಾನೆ. ಆ ಪ್ರತಿಮೆಗಳುಓದುಗರಿಗೆ ಅಚ್ಚರಿ ಮೂಡಿಸುವುದರ ಜೊತೆಗೆ ಶಾಕ್ ಸಹ ನೀಡುತ್ತವೆ. ಕವಿಮಾಡಬೇಕಾದುದು ಅದನ್ನೇ.’ ತೊಮಸ್ ತನ್ನ ಪದ್ಯಗಳನ್ನು `ಭೇಟಿಯತಾಣಗಳು’ ಎಂದು ಕರೆದಿದ್ದಾನೆ. ಆತನ ಪ್ರಕಾರ ಅಲ್ಲಿ ಕತ್ತಲು ಮತ್ತು ಬೆಳಕು,ಅಂತರಂಗ ಮತ್ತು ಬಹಿರಂಗ ಪರಸ್ಪರ ಘರ್ಷಿಸಿ ಜಗತ್ತಿನೊಂದಿಗೆ,ಚರಿತ್ರೆಯೊಂದಿಗೆ ಅಥವಾ ನಮ್ಮೊಂದಿಗೇ ಒಂದು ಆ ಕ್ಷಣವೇ ರೂಪುಗೊಳ್ಳುವಹೊಸ ಸಂಪರ್ಕವೊಂದನ್ನು ಉಂಟುಮಾಡುತ್ತದೆ. ಎಂಭತ್ತು ವರ್ಷದ ತೊಮಸ್ ರವರ ಹದಿನೈದು ಕವನ ಕೃತಿಗಳು ಅರವತ್ತಕ್ಕೂಹೆಚ್ಚು ಭಾಷೆಗಳಿಗೆ ಅನುವಾದಗೊಂಡಿವೆ. ಅವುಗಳನ್ನು ಮಲಯಾಳಂಗೆಕೆ.ಸಚ್ಚಿದಾನಂದನ್ ಅನುವಾದಿಸಿದ್ದಾರೆ. 1984ರಲ್ಲಿ ಭೋಪಾಲ್ ಗ್ಯಾಸ್ದುರಂತದ ನಂತರ ಭೋಪಾಲ್ ಗೆ ತೊಮಸ್ ಭೇಟಿ ನೀಡಿದ್ದರು ಹಾಗೂಸಚ್ಚಿದಾನಂದನ್ ರವರ ಜೊತೆಯಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಎದುರು ದುರಂತದಲ್ಲಿ ಮಡಿದವರ ಸಾಂತ್ವನಕ್ಕಾಗಿ ಕಾವ್ಯ ವಾಚನಮಾಡಿದ್ದರೆಂದು ಸಚ್ಚಿದಾನಂದನ್ ರವರೇ ಹೇಳಿದ್ದಾರೆ. ತೊಮಸ್ ಗಾಸ್ಟ ತ್ರಾನ್ಸ್ತ್ರೋಮರ್ ಹುಟ್ಟಿದ್ದು 1931ರ ಏಪ್ರಿಲ್ 15ರಂದು. ತನ್ನತಂದೆ ವಿಚ್ಛೇದನದಿಂದ ದೂರವಾದ ನಂತರ ಶಾಲಾ ಅಧ್ಯಾಪಕಿತಾಯಿಯೊಂದಿಗೆ ಬೆಳೆದ. ಸ್ಟಾಕ್ಹೋಮ್ ನಲ್ಲಿನ ತನ್ನ ಶಾಲಾ ದಿನಗಳಲ್ಲಿಯೇ ಆತಪದ್ಯ ಬರೆಯಲು ಆರಂಭಿಸಿದ. ತನ್ನ ಇಪ್ಪತ್ತಮೂರನೇ ವಯಸ್ಸಿನಲ್ಲಿಯೇ ತನ್ನಮೊಟ್ಟ ಮೊದಲ ಕವನ ಸಂಕಲನ `ಹದಿನೇಳು ಪದ್ಯಗಳು’ ಪ್ರಕಟಿಸಿದ. 1956ರಲ್ಲಿಸ್ಟಾಕ್ಹೋಮ್ ವಿಶ್ವವಿದ್ಯಾನಿಲಯದಲ್ಲಿ ಮನಶಾಸ್ತ್ರದಲ್ಲಿ ಪದವಿಯನ್ನು ಪಡೆದುಕೆಲವರ್ಷಗಳು ಬಾಲಾಪರಾಧಿಗಳ ಕೇಂದ್ರದಲ್ಲಿ ಆ ಮಕ್ಕಳು ಸಮಾಜದಲ್ಲಿಉತ್ತಮ ಪ್ರಜೆಗಳಾಗಲು ಮನಶಾಸ್ತ್ರಜ್ಞನಾಗಿ ಕಾರ್ಯನಿರ್ವಹಿಸಿದ. ಆತಮನಶಾಸ್ತ್ರಜ್ಞನಾಗಿದ್ದುದು ಮನುಕುಲದ ಮನಸ್ಸಿನ ಜಾಲಾಟವನ್ನು ತನ್ನಕಾವ್ಯದಲ್ಲಿ ವ್ಯಕ್ತಗೊಳಿಸಲು ಸಾಧ್ಯವಾಗಿರಬಹುದು. 1990ರಲ್ಲಿ ಪಾರ್ಶ್ವವಾಯುವಿಗೆಬಲಿಯಾದ ಆತ ಹೆಚ್ಚು ಓಡಾಡದಾದ ಹಾಗೂ ಮಾತು ಸಹ ನಿಂತುಹೋಯಿತು.ಆದರೆ ಆತ ತನ್ನ ಕಾವ್ಯರಚನೆಯನ್ನು ಮುಂದುವರಿಸಿದ. ಆತನ ಇತ್ತೀಚಿನಕೃತಿಯೆಂದರೆ 2004ರಲ್ಲಿ ಪ್ರಕಟವಾದ `ದ ಗ್ರೇಟ್ ಎನಿಗ್ಮಾ’. ಕಾವ್ಯದ ರಚನೆಯಜೊತೆಗೆ ಆತ ಪಿಯಾನೊ ವಾದಕ ಸಹ. ಪಾಶ್ರ್ವವಾಯುವಿಗೆ ಬಲಿಯಾಗಿದ್ದರೂಒಂದೇ ಕೈಯಲ್ಲಿ ಈಗಲೂ ಪಿಯಾನೊ ನುಡಿಸುತ್ತಾನೆ. ನೋಬೆಲ್ ಬಹುಮಾನಸೇರಿದಂತೆ 1966ರಿಂದ ತೊಮಸ್ಗೆ ಒಂಭತ್ತು ರಾಷ್ಟ್ರೀಯ ಮತ್ತುಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. […]
ನರೇಶ್ ಮಯ್ಯ ಕವಿತೆ: ಸೆಲೆಸುಟ್ಟ ಸಂಗಾತ
-ನರೇಶ್ ಮಯ್ಯ ಸೆಲೆಸುಟ್ಟರೂ ಬಿಡಲಿಲ್ಲ ಭ್ರಾಂತ ಭೂಯಿಷ್ಟ ಬ್ರಹ್ಮಾಂಡ, ನೆಲೆಬಿಟ್ಟರೂ ನೆಡಲಿಲ್ಲ ನೀಗಿಕೊಂಡ ನೆನಪ. ಅಜ್ಙಾತದವಸ್ಥೆಯ ನಟ್ಟ ನಡುವಲ್ಲೇ ನಿಲುಕಬೇಕು ನೀಲಾಂಜನನ ಕಾಲಾಂತರ ಥಿಯರಿ. ಬುಡ ಮಟ್ಟಸಮೇಲು ಮಾಡಿ ಬಿದ್ದಿತ್ತುತಾತ ಬಿತ್ತಿದ್ದ ಹುಣಸೆ. ಕಾದು ಕಾವಲಿಗಿರುತ್ತಿತ್ತು ಅಮ್ಮ ಹಚ್ಚಿಟ್ಟ ಹಣತೆ ಅಪ್ಪನ […]
‘ಆರ್. ವಿ. ಭಂಡಾರಿ ನೆನಪು’ ಕಾರ್ಯಕ್ರಮದ ಒಂದು ನೋಟ..
ಆರ್. ವಿ. ಭಂಡಾರಿಯವರು ನಮ್ಮನ್ನಗಲಿ ಮೂರು ವರುಷ ಕಳೆಯಿತು. ಈದಿನದ ನೆನಪಿನಲ್ಲಿ ಅವರ ಎರಡು ಪುಸ್ತಕಗಳ (ಚಿನ್ನದ ಹುಡುಗಿ ಚಿನ್ನಮ್ಮ,-ಮಕ್ಕಳ ಕಾದಂಬರಿ ಹಾಗೂ ಪ್ರೀತಿಯ ಕಾಳು-ಮಕ್ಕಳ ನಾಟಕ) ಬಿಡುಗಡೆ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಮುದಾಯದ ರಾಜ್ಯ ಜತೆ ಕಾರ್ಯದರ್ಶಿಗಳು ಹಾಗೂ ಜನವಾದಿ ಮಹಿಳಾ ಸಂಘಟನೆಯ […]
ಜೋಗಿ ಕವಿತೆ ‘ಇಂದು ಪತ್ರಿಕೆಗೆ ರಜೆ’
ದೇವರು ದೊಡ್ಡವನು ಇಂದು ಪತ್ರಿಕೆಗೆ ರಜೆ. ತುಮಕೂರು ರಸ್ತೆಯಲ್ಲಿ ಬಸ್ಸು ಅಪಘಾತ ಆಗುವುದಿಲ್ಲ. ಮೈಸೂರು ರೋಡಿನಲ್ಲಿ ಸ್ಕೂಟರ್ ಡಿಕ್ಕಿಯಾಗಿ ವೃದ್ಧದಂಪತಿ ಸಾಯುವುದಿಲ್ಲ. ದರ್ಶನ್ ಥೇಟರಿಗೆ ಹೋದಾಗ ಅಭಿಮಾನಿಗಳು ಮುತ್ತಿಕೊಂಡು ಕಂಗೆಡಿಸುವುದಿಲ್ಲ. ಜೈಲಿನಲ್ಲಿರುವ ರಾಜಕೀಯ ನಾಯಕರಿಗೆ ಹುಟ್ಟೂರ ಮಣ್ಣು ತಂದು ಕೊಡುವವರಿಲ್ಲ […]
ದೀಪಾವಳಿ – ಕೆಲ ಪದ್ಯಗಳು
-ಲಡಾಯಿ ಬಸು ೧ ಹಣತೆ ಸುಟ್ಟುಕೊಳ್ಳುವಾಗ ಲೋಕಕ್ಕೆ ಬೆಳಕಿನ ಸಂಭ್ರಮ ..! ೨ ನಿನಗೆ ಬೆಳಕಿನ ಅನುಭವವಾಗುವುದು ನೀನು ಹಣತೆಯಾದರಷ್ಟೇ ..! ೩ ಹಣತೆ ಹಚ್ಚಿಟ್ಟವರ ಓಣಿಯಲ್ಲಿ ಸಂಚಾರವಿತ್ತು ಬರೀ ಚಾಳೀಸು ತೊಟ್ಟ ಕುರುಡರೇ ಎದುರಾದರು ..! ೪ ಇಡೀ ಇರುಳು ಪ್ರೇಮಿಸಿದ ಫಲವೆನ್ನುವ ಹಾಗೆ ಕತ್ತಲು ಬೆಳಕಾಗಿ ಮಾರ್ಪಟ್ಟಿತು ಹೆಚ್ಚೇನಿಲ್ಲ ಪ್ರೇಮಿಸುವದೆಂದರೆ ಕತ್ತಲನ್ನು ಬೆಳಕಾಗಿಸುವುದು ಇದು ಇರುಳಿನ ನೀತಿಪಾಠವಂತೂ ಅಲ್ಲ ..! ೫ ಸೂರ್ಯನಿರುವ ಹಗಲಿನಲ್ಲಿ ಹಣತೆ ಹಚ್ಚುವ ನಿನ್ನ ಸಂಭ್ರಮಕೆ ಏನನ್ನಲಿ ? ಉರಿವ ಹಣತೆ ಹೇಳುವುದು ಇದನ್ನೇ ಸುಡದೆ ಬೆಳಕಾಗಲು […]
ಸಹಯಾನಕ್ಕೆ ಸಹಿ
ಆರ್. ವಿ. ಭಂಡಾರಿಯವರು ನಮ್ಮನ್ನಗಲಿ 3 ವರುಷ. ಅವರ ನೆನಪಿಗೆ – ವಿಷ್ಣು ನಾಯ್ಕ ಅವರು ಬರೆದಿರುವ ಈ ಕವಿತೆ — (ಡಾ. ಆರ್.ವಿ.ಭಂಡಾರಿ ಒಡನಾಟದ ಮೆಲುಕು) 1 ನಿನ್ನ `ಸಹಯಾನಕ್ಕೆ’ ಸಹಿಮಾಡಿದ ಖುಷಿಯಲ್ಲಿ ಬಂದಿರಲಿಲ್ಲ ನಿದ್ದೆ, ಕಾರಣ ಗೊತ್ತು ನಿನಗೇ! ಬಾಗಿಲು […]
ಸಹಸ್ರ ನಾಲಗೆ..
-ದಿನೇಶ್ ಕುಮಾರ್ ಎಸ್.ಸಿ. ಕೃಪೆ-‘ದೇಸೀಮಾತು‘ ತುಟಿ ಹೊಲೆದುಕೊಂಡಿದ್ದಾಗ ಹೃದಯಕ್ಕೆ ಸಾವಿರ ನಾಲಗೆ ಚಿಮ್ಮುತ್ತದೆ. -ರೂಮಿ ಅಲ್ಲೋ ರೂಮಿ ತುಟಿ ಹೊಲೆದುಕೊಳ್ಳೋದೇನೋ ಸುಲಭ ಹೃದಯದ ನಾಲಗೆಯ ಮಾತುಗಳಿಗೆ ಕಿವುಡಾಗೋದು ಹೇಗೆ? ನಿನಗೋ ಶಂಸ್ನ ಕನವರಿಕೆ ಎದೆಯಲ್ಲಿ ಧಗಧಗನೆ ಉರಿಯುವ ಪ್ರೇಮ ತುಟಿ ನೀನೇ […]

























