ಜೀವಯಾನದ ಕವಿ ಎಸ್ ಮಂಜುನಾಥ್ ಇಂದು ಸಂಜೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವಧಿಯು ಸಂತಾಪವನ್ನು ಸೂಚಿಸುತ್ತದೆ.
ಜೀವಯಾನದ ಕವಿ ಎಸ್ ಮಂಜುನಾಥ್ ಇಂದು ಸಂಜೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವಧಿಯು ಸಂತಾಪವನ್ನು ಸೂಚಿಸುತ್ತದೆ.
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
Very sad
ಆದುನಿಕ ಕನ್ನಡದ ಒಬ್ಬ ಅತ್ಯುತ್ತಮ ಕವಿ ಮಂಜುನಾಥ್ ಅಕಾಲ ನಿಧನಗೊಂಡುದಕ್ಕೆ ದುಃಖವಾಗುತ್ತದೆ. ಅವರು ಕನ್ನಡಕ್ಕೆ ಇತ್ತ ಕೊಡುಗೆಗೆ ನಾವೆಲ್ಲರೂ ಆಭಾರಿಗಳಾಗಿರಬೇಕು.
ಅವರ ಕುಟುಂಬಕ್ಕೆ ನನ್ನ ಸಹತಾಪ.
ಕೆ.ವಿ.ತಿರುಮಲೇಶ್
RIP
ಅತ್ಯಂತ ದುಃಖದಾಯಕ. ಅಪಾರ ಸಾಧ್ಯತೆಯ ಕವಿ.ನೋವಾಗುತ್ತೆ.
ಲಂಕೇಶ್ ಒಮ್ಮೆ ಅವರನ್ನು ಅಳುಬುರುಕ ಕವಿ ಎಂದ ನೆನಪು. ಪುತಿನ ಕುರಿತಂತೆ ಅಪಾರ ಪ್ರೀತಿ ಇಟ್ಟುಕೊಂಡ ಕವಿ.
ಮಡಿಕೇರಿಯ ಒಂದು ಸಮಾರಂಭದಲ್ಲಿ ಅವರ ಜೊತೆ ಬೆರೆಯುವ ಅವಕಾಶ ದೊರೆಯಿತು … ಅವರ ಕವಿತೆಯೊಳಗಿರುವ ತಾಯ್ತನ ಹಲವು ಕವಿಗಳನ್ನು ಬೆಳೆಸಿದೆ …
“ಮಾಂಸದೊಳಗೂ, ಧಾನ್ಯದೊಳಗೂ, ತರಕಾರಿಯೊಳಗೂ ಇರುವೋದೊಂದೇ ರುಚಿ ಭೂಮಿಯದು … ” ಎಂದು ಬರೆದ ಕವಿ ಮತ್ತೆ ಭೂಮಿಗೇ ಸಂದಿದ್ದಾರೆ … ಓಹ್
ಬಿ. ಎಂ. ಬಶೀರ್
ಇಂದು ಬೇಂದ್ರೆಯವರು ಹುಟ್ಟಿದ ದಿನ. ಅವರ ಪಾಲಿಗೆ ಸಾವು ಯಾಕೆ ಈ ದಿನವನ್ನೇ ಆರಿಸಿಕೊಂಡಿತು?
ನಿಜಕ್ಕೂ ಬೆಸರವಾಗುತ್ತದೆ ಆದರೆ ಕವಿತೆಗಳು ಅಜರಾಮರವಾಗಿಸುತ್ತವೆ
ಬಹಳ ನೋವಾಗ್ತಾಯಿದೆ, ಕಡೆಗೆ ಅವರನ್ನು ಭೇಟಿಯಾಗಲೇ ಇಲ್ಲವೆಂದು. ನನ್ನ ಹೆಸರು ಕೂಡ ಎಸ್. ಮಂಜುನಾಥ, ನನ್ನ ಕವಿತೆ ಮತ್ತು ಲೇಖನಗಳು ಪತ್ರಿಕೆಯಲ್ಲಿ ಗಮನಿಸುತ್ತಿದ್ದಂತೆ, ಅವರು ತಮ್ಮ ಹೆಸರು ‘ಜೀವಯಾನದ ಎಸ್. ಮಂಜುನಾಥ’ ಎಂದು ಬದಲಾಯಿಸಿ ಕೊಂಡರು. ಅವರ ಕುಟುಂಬಕ್ಕೆ ದುಖ ಭರಿಸುವ ಶಕ್ತಿ ದೊರೆಯಲಿ. ಶಾಂತಿ ನೆಲೆಸಲಿ.
ಅವರಿಗೆ ನಮನ ಕಾರ್ಯಕ್ರಮ ಇದೆ ಸಾದ್ಯವಾದರೆ ಬನ್ನಿ ಶನಿವಾರ