ಹಿರಿಯ ರಂಗಭೂಮಿ ಕಲಾವಿದ ನಾಡೋಜ ಏಣಗಿ ಬಾಳಪ್ಪ (೧೦೩) ಇನ್ನಿಲ್ಲ.
ದೀರ್ಘ ಕಾಲದ ಅನಾರೋಗ್ಯದ ನಂತರ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ಗ್ರಾಮದಲ್ಲಿ ಇಂದು ನಿಧನ ಹೊಂದಿದರು.
ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕ ಎಂ ಆರ್ ವಿಶುಕುಮಾರ್ ಅವರು ತಿಳಿಸಿದ್ದಾರೆ.
ಒಮ್ಮೆ ಈ ಹಿರಿಯರ ಆಶೀರ್ವಾದ ಪಡೆಯುವ ಅವಕಾಶ ದೊರಕಿತ್ತು. ಕನ್ನಡ ರಂಗಭೂಮಿಯ ಚರಿತ್ರೆಯು ಏಣಗಿ ಕುಟುಂಬದ ಪ್ರಸ್ತಾಪವಿರದೆ ಜರುಗುವುದುಂಟೆ ,,,, ನಿಜ ಕಲಾವಿದರು. ಅವರು ನಂಬಿದ್ದ ದೈವ ಅವರಿಗೆ ಸದ್ಗತಿಯನ್ನೀಯಲೆಂದು ಪ್ರಾರ್ಥಿಸುವೆ.
May his Soul Rest in peace….
ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ.