ಕುವೆಂಪು ಮನೆಗೆ ರಾತ್ರಿ ನುಗ್ಗಿ ಇದ್ದ ಸಿಸಿಟಿವಿಗಳಲ್ಲಿ ಸಾಕಷ್ಟನ್ನು ಒಡೆದು ಹಾಕಿ ಪದಕ ಹಾಗೂ ಇತರ ಅಮೂಲ್ಯ ವಸ್ತುಗಳನ್ನು ದೋಚಿದ್ದ, ಆ ಮೂಲಕ ಭಾರೀ ಕೋಲಾಹಲ ಸೃಷ್ಟಿಸಿದ ಕಳ್ಳ ಇನ್ನಷ್ಟು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದಾನೆ
ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಸಿಸಿಟಿವಿ ಕ್ಯಾಮೆರಾಗಳು ನಾಶವಾಗಿರುವುದು ಕಂಡು ಬಂದಿದೆ. ಇದೇ ಸಮಯದಲ್ಲಿ ಇನ್ನೂ ಅರೆ ಜೀವ ಉಳಿಸಿಕೊಂಡಿದ್ದ ಕ್ಯಾಮೆರಾ 3 ಹಾಗೂ ಕ್ಯಾಮೆರಾ 16 ಅವರಿಗೆ ವರವಾಗಿ ಪರಿಣಮಿಸಿತು. ಈ ಎರಡರಲ್ಲೂ ಆತ ಕುವೆಂಪು ಅವರ ನೆನಪನ್ನು ದ್ವಂಸ ಮಾಡುವ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪದಕಗಳನ್ನು ಎಗರಿಸುವ, ಅದಕ್ಕಾಗಿ ಆ ಭವ್ಯ ನೆನಪಿನ ಮನೆಗೆ ಹಾರೆಯಿಂದ ಒಡೆದಿರುವುದು ದಾಖಲಾಗಿದೆ.
ಈ ಮಧ್ಯೆ ಈ ಘಟನೆ ಇಡೀ ರಾಜ್ಯ ತಲ್ಲಣಿಸುವಂತೆ ಮಾಡಿದೆ. ಕನ್ನಡದ ಸಾರಸ್ವತ ಲೋಕ ದಿಗ್ಭ್ರಮೆಗೆ ಒಳಗಾಗಿದೆ









ಛೆ… ಇದು ನಿಜಕ್ಕೂ ಹೇಯ ಕೃತ್ಯ.. ಅಪರಾಧಿ ಗೆ ತಕ್ಕ ಶಿಕ್ಷೆ ಆಗಲೇ ಬೇಕು.
tappithastharnnu bega huduki shikshe kodabeku.. etthichina belavanigeyannu gamanisidre samaja gathukaru sahithigalannu target madutthiruvareno yenisutthide………