ಮಾರ್ಚ್ 2, 2008ರಂದು ಭಾನುವಾರ, ಜಯನಗರ 1ನೇ ಬ್ಲಾಕ್ ನಲ್ಲಿರುವ ಆರ್.ವಿ.ಟೀಚರ್ಸ್ ಕಾಲೇಜಿನಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಿದೆ. ಮಾಧ್ಯಮ ಕ್ಷೇತ್ರದ ಗೆಳೆಯರು, ಪರಿಸರ, ವನ್ಯಜೀವಿ ವಿಷಯದ ಬಗ್ಗೆ ಪ್ರೀತಿಯಿರುವ ಅನೇಕರು ಆ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಆ ದಿನ ಕೇವಲ ಅಭಿನಂದನಾ ಸಮಾರಂಭ ಮಾತ್ರವಲ್ಲ, ‘ಪುಸ್ತಕದ ಹಬ್ಬ’ದ ದಿನವೂ ಹೌದು.
ಪುಸ್ತಕದ ಹಬ್ಬದ ಜೊತೆಗೆ ಒಂದಷ್ಟು ಮಸ್ತಕವನ್ನು ಮಸೆಯುವ ಸಲುವಾಗಿ ಪುಟ್ಟದೊಂದು ವಿಚಾರ ಮಂಡನೆಯೂ ಇದೆ. ಅದು ಭವಿಷ್ಯದಲ್ಲಿ ನೆಲ-ಜಲ ಸಂರಕ್ಷಣೆಗೆ ನಾವೇನು ಮಾಡಬೇಕೆಂಬ ವಿಷಯ ಕುರಿತು ಸ್ಲೈಡ್ ಷೋ ಮತ್ತು ಉಪನ್ಯಾಸ. ಜೊತೆಗೆ ಸಂವಾದವೂ ಇದೆ. ಖ್ಯಾತ ಜಲಪತ್ರಕರ್ತ ‘ಶ್ರೀ’ ಪಡ್ರೆಯವರು ಉಪನ್ಯಾಸದ ರೂವಾರಿಗಳು. ಪರಿಸರ ತಜ್ಞ ಸಂಜಯ್ ಗುಬ್ಬಿ ‘ಭವಿಷ್ಯದಲ್ಲಿ ಪರಿಸರ ಸಂರಕ್ಷಣೆ’ ಕುರಿತು ಮಾತನಾಡುತ್ತಾರೆ. ಇಷ್ಟೆಲ್ಲ ಗಂಭೀರ ಕಾರ್ಯಕ್ರಮಗಳ ಮಧ್ಯೆ ಪುಟ್ಟ ಮಕ್ಕಳು ಪರಿಸರ ಗೀತೆಗಳನ್ನು ಹಾಡುತ್ತಾ, ಕಾರ್ಯಕ್ರಮಕ್ಕೆ ಜೀವ ತುಂಬುತ್ತಾರೆ. ಇಂಥ ಅಪರೂಪದ ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ. ಕಾರ್ಯಕ್ರಮಕ್ಕೆ ಬರ್ತೀರಲ್ಲಾ ?ಹಾಂ ! ಇನ್ನೊಂದು ಮುಖ್ಯವಾದ ವಿಷಯ ಹೇಳೋದೇ ಮರೆತಿದ್ದೆ. ಈ ಕಾರ್ಯಕ್ರಮದಲ್ಲಿ ‘ಪಕೃತಿಯ ಸುಂದರ ಕ್ಷಣಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿರುವ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಕೋಲಾರದ ಡಿ.ಜಿ.ಮಲ್ಲಿಕಾರ್ಜುನ ಮತ್ತು ಅವರ ಗೆಳೆಯ ಶಿವು ಅವರು ಆ ಚಿತ್ರಗಳನ್ನು ಪ್ರದರ್ಶಿಸಲಿದ್ದಾರೆ. ಪ್ರಕೃತಿಯ ಅಪರೂಪದ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಇದೊಂದು ಸದಾವಕಾಶ. ಬನ್ನಿ ನಿಮಗಾಗಿ ಆರ್.ವಿ.ಟೀಚರ್ಸ್ ಗೇಟ್ ಬಳಿ ಕಾದಿರುತ್ತೇನೆ.
ಅಂದ ಹಾಗೆ ಈ ಪತ್ರದ ಜೊತೆ ಆಹ್ವಾನ ಪತ್ರಿಕೆಯನ್ನು ಕಳುಹಿಸಿದ್ದೇನೆ.
ಧನ್ಯವಾದಗಳು
ವಿಶ್ವಾಸದಿಂದ
ಗಾಣಧಾಳು ಶ್ರೀಕಂಠ





ಅರವತ್ತು ತುಂಬಿದ ಮೂವರು ಹಿರಿಯರಿಗೂ ಶುಭ ಹಾರೈಕೆಗಳು.
Many Happy returns and may you have many more.
All the best
🙂
malathi s