ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ 'ಮೀಡಿಯಾ ಮಿರ್ಚಿ' ಬಂದಿದೆ

ಜಗಲಿ ಭಾಗವತರು ಅಂತ ಒಬ್ರಿದಾರೆ, ಅವರಿಗೆ ಆಗೀಗ ಮಾರುವೇಷ ಹಾಕ್ಕೊಂಡು ಬ್ಲಾಗ್ ಲೋಕದಲ್ಲಿ ಸುತ್ತಾಡೋ ಅಭ್ಯಾಸ. ಹಿಂದೆ ರಾಜ ಮಹಾರಾಜರು ಹಿಂಗೆ ವೇಷ ಬದ್ಲಾಯ್ಸಿಕೊಂಡು ಹಗಲೂ ರಾತ್ರಿ, ಅಲ್ಲಿ ಇಲ್ಲಿ ಸುತ್ತಿ ಪ್ರಜೆಗಳು ನನ್ನ ಬಗ್ಗೆ, ನನ್ನ ಆಡಳಿತದ ಬಗ್ಗೆ ಏನ್ ಮಾತಾಡ್ತಾ ಇದಾರೆ ಅಂತ ಫಸ್ಟ್ ಹ್ಯಾಂಡ್ ರಿಪೋರ್ಟ್ ತಗೊಳ್ತಾ ಇದ್ರಂತೆ. ಪಾಪ ‘ಚಪ್ಪನ್ನಾರು’ ರಾಣಿಯರನ್ನು ಹೀಗೆ ಒಂಟಿಯಾಗಿ ಬಿಟ್ಟು ಅವರಾದರೂ ಯಾಕೆ ಸುತ್ತಾಡುತ್ತಿದ್ದರೋ..ಆ ಪರಮಾತ್ಮನೇ ಬಲ್ಲ. ಜಗಲಿ ಭಾಗವತರ ಕಥೆ ಹೀಗಂತೆ ಅಂತ ಗೊತ್ತಾದ ತಕ್ಷಣ ನಂಗೂ ಎಲಾ ಇವನಾಪ್ನ!, ನಾನೂ ಒಂದು ಕೈ ಯಾಕೆ ನೋಡಬಾರದು ಅನಿಸ್ತು. ಸರಿ ವೇಷ ಬದಲಾಯ್ಸಿಕೊಳ್ಳೋದು ಹೇಗೆ ಅಂತ ತಲೆ ಕೆರಕೊಂಡೆ. ಯುರೇಕಾ..! ತಕ್ಷಣ ಬಲ್ಬ್ ಹತ್ತಿಕೊಳ್ತು . ಸಿಂಪಲ್, ಎಲ್ಲಾರೂ ನನ್ನನ್ನ ಬಾಲ್ಡಿ ಅನ್ಕೊಂಡಿದಾರೆ. ಅದನ್ನೇ ಬದಲಾಯ್ಸಿಬಿಟ್ರೆ? ಆ ಅಮೆರಿಕಾದ ಒಬಾಮನಿಗೂ ನನ್ನ ಗುರ್ತು ಸಿಗಲ್ಲ ಅಂತ ಡಿಸೈಡ್ ಮಾಡಿದೆ.

ಪ್ರಾಬ್ಲಂ ಶುರು ಆಗಿದ್ದು ಅಲ್ಲೇ, ನಾನು ಟೋಫನ್ ಹಾಕ್ಕೊಂಡು ಎಸ್ ಎಂ ಕೃಷ್ಣ ಥರಾ ಕಾಣಿಸಿದ್ರೆ ‘ಯಾಕಪ್ಪಾ ಆಸ್ಟ್ರೇಲಿಯಾ ಪ್ರಾಬ್ಲಂ ಸಾಲ್ವ್ ಮಾಡ್ಲಿಲ್ಲ’ ಅಂತ ಹಿಡಕೊಳ್ತಾರೆ. ಬ್ಯಾಡ ಬಿಡು ಸುಮ್ನೆ ದೇಶಾಂತರ ಹೋಗೋ ಥರಾ ತಲೆ ಮೇಲೆ ಶಾಲು ಹೊದ್ದುಕೊಂಡ್ರೆ ಆಯ್ತು ಅನ್ಕೊಂಡೆ. ಅರೆ…! ಹಂಗಾಗಿಬಿಟ್ರೆ ದೇವೇಗೌಡರ ಥರಾ ಕಾಣ್ತೀನಿ. ಮೊದ್ಲೇ ಲಾಯರ್ ಗಳೂ, ಬಿ ಜೆಪಿ ಯವರೂ ಗರಂ ಆಗವ್ರೆ. ನನ್ನೇ ಅವರೂ ಅಂತ ತಿಳ್ಕೊಂಡು ‘ಬ್ಯಾ, ಬ್ಲ, ಬೋ…’ ಅಂದ್ಬಿಟ್ರೆ ಅಂತ ಹೆದರಿಕೆ ಆಯ್ತು. ಅವಾಗ್ಲೇ ನಮ್ಮ ದಾವಣಗೆರೆ ಮಲ್ಲೇಶಿ ಮಂಡಕ್ಕಿ ತಿನ್ಕಂಡು ಎದುರಿಗೆ ಸಿಕ್ಕಿದ್ದು. ಲೇ, ನಿನ್ನ ಆಕಾರ ನೋಡೋ, ಆ ಅಮೇರಿಕಾ ರಿಸೆಷನ್ನೂ ಯಾವ ಪರಿಣಾಮಾನೂ ಬೀರಿಲ್ವಲ್ಲೋ, ಜೀರೋ ಬಾಡಿ, ಸಿಕ್ಸ್ ಪ್ಯಾಕ್ ಇದ್ದೋನು ದೊಡ್ಡಣ್ಣನ ಥರಾ ಆಗೊಗಿದ್ದೀಯಲ್ಲೋ, ಯಾವೋನ್ ಗುರುತು ಹಿಡೀತಾನ್ಲೆ ನಿನ್ನ’ ಅಂತ ಅವನ ‘ಬ್ರೇಕಿಂಗ್ ನ್ಯೂಸ್’ ಬುಕ್ ಹೀರೋ ತೆಪರೇಸಿ ಥರಾ ಮಾತಾಡಿದ. ಹೌದಲ್ಲಾ, ನಾನೂ ಹಂಗೆ ನಡ್ಕೊಂಡು ಹೋದರೂ ಜನ ನನ್ನ ಗುರ್ತು ಹಿಡಿಯಲ್ಲ ಅಂತ ಹೊರಟೇಬಿಟ್ಟೆ.
ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್

‍ಲೇಖಕರು avadhi

8 February, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading