೧
ಇರುಳಿಗಾಗಿ ಕಾದು
ನೆರಳ ಚಿಂದಿ ಆಯುತ
ಬಂದ ಚಂದಿರ
ಬೆತ್ತಲ ಜನರ ಬದುಕ
ಕಂಡು
ಮೋಡದಲ್ಲಿ ಅಡಗಿ
ಕಳುಹಿಸಿದ ಮಂಕು
ಬೆಳಕನು.
೨
ದಣಿದ ಕೈಗಳು
ಇರುಳ ಮಡಿಲಲ್ಲಿ
ತಲೆಯಿಟ್ಟು ಬೇಡುತಿವೆ
ಬಿಡುವಿಗಾಗಿ,
ಮರಭೂಮಿಯ ಚಿರತೃಷೆಯಂತೆ.
೩
ಇರುಳು
ಮೌನದಷ್ಟೇ ಕ್ರೂರ
ಭಯ, ದಿಗಿಲು, ನೆನಪು, ಸಾವು
ಹೀಗೆ ಕಾಣದ ಕೈಗಳಿಂದ
ನಮ್ಮ ತಲೆಸವರುತ್ತ ನಿಂತಿದೆ
ಸುಮ್ಮನಿರುವ ಗುಮ್ಮನಂತೆ.
ಎಲ್ಲರು ಅದಕೆ ಶರಣಾಗಲೇ ಬೇಕು ,
ಇರುಳ ಬೆರಳು ಹಿಡಿದ ಬದುಕು
ಬೆಳಕು ಕಾಣವವರೆಗೂ.
೪
ಸ್ವರ ಹೊರ ಸೂಸುವ
ನೊಂದ ದನಿಯನ್ನೆಲ್ಲ
ಕೂಡಿಸಿ
ಇರುಳಿಂದ ಗಂಟು ಕಟ್ಟಿದರು
ಕಿರ್ರೆನ್ನುವ
ಅದರ ಬಿಕ್ಕು
ಹಿಡಿದಿಡಲು ಸೋತಿತು.
]]>
ನೆರಳ ಚಿಂದಿ ಆಯುತಾ ಬಂದ ಚಂದಿರ- ಚಂದದ ಚಿತ್ರ.
Thank u sir….:-)
ಅರ್ಥಪೂರ್ಣ ಸಾಲುಗಳು..