
ಸಿದ್ಧಲಿಂಗಯ್ಯ ಅವರ ಮನವಿ ಕುರಿತು ನನ್ನ ಸೀಮಿತ ಮತ್ತು ವೈಯಕ್ತಿಕ ಅನುಭವದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ.
ಯಾರಾದರೂ ಎಲ್ಲಿಂದಾದರೂ ಶುರು ಮಾಡಬೇಕಲ್ಲಾ. !
೧. ಹೋಟೇಲ್ಗಳಲ್ಲಿ ತಿಂಡಿ ತಿನ್ನೋದು, ಬಸ್ಸು ರೈಲು ವಿಮಾನಗಳಲ್ಲಿ ಒಟ್ಟಿಗೆ ಹೋಗೋದು … ನಮ್ಮ ನಮ್ಮ ಸ್ನೇಹಿತರುಗಳ ಜಾತಿ ಧರ್ಮ ಗೊತ್ತಿಲ್ಲದೆ ಇರುವುದು ಇವೆಲ್ಲಾ ಒಂದು ರೀತಿಯ ಯಾಂತ್ರಿಕ ಅನುಭವ. ಮತ್ತು ಪಟ್ಟಣ, ನಗರ ಜೀವನದ ಅನಿವಾರ್ಯತೆ ಕೂಡ. ಇಲ್ಲವಾದರೆ ಮಡಿ, ಮೈಲಿಗೆ ಅಂತ ಅಂದುಕೊಂಡ್ರೆ ಬದುಕಲಿಕ್ಕೆ ಸಾಧ್ಯವಾ ಅಲ್ಲಿ. !!!
ಹಾಗಂತ ಬೆಂಗಳೂರಿನಲ್ಲಿ ಬದುಕುವ ಮನಸ್ಸುಗಳಲ್ಲಿ ಜಾತಿ ಧರ್ಮ ಭಾಷೆ ಇಲ್ಲ ಅಂದ್ರೆ ಸುಳ್ಳೇ. ಕೆಲವರ ಅನುಭವಕ್ಕೆ, ಗಮನಕ್ಕೆ ಬರದೇ ಹೋಗಿರಬಹುದು ಅಷ್ಟೆ.
– ನಾನು ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವ ಸಂದರ್ಭದಲ್ಲಿ ( ನಾಲ್ಕು-ಐದು ವರ್ಷಗಳ ಹಿಂದೆ) … ನಾನು ಯಾವ ಜಾತಿ / ವೆಜ್ಜಾ … ನಾನ್ ವೆಜ್ಜಾ / ಹುಡುಗರು ಫ್ರೆಂಡ್ಸ್ ಇದ್ದಾರಾ ಇಲ್ವಾ, ಇವೆಲ್ಲಾ ಸಂದರ್ಶನ ಆಗಿಯೇ ಕೊನೆಗೆ ಮನೆ ಬಾಡಿಗೆಗೆ ಸಿಕ್ಕಿದ್ದು.
ಮೊನ್ನೆ ಮೊನ್ನೆ ಎರಡು ತಿಂಗಳ ಹಿಂದೆ ನನ್ನ ಗೆಳೆಯನೊಬ್ಬನ ಗಾಡಿ ಕಳುವಾಗಿ ಪೋಲಿಸ್ ಸ್ಟೇಶನ್ಗೆ complaint ಕೊಡ ಹೋದರೆ, ಅವನನ್ನು ಎಂತಹ ಕೆಟ್ಟ ರೀತಿಯಲ್ಲಿ ನಡೆಸಿಕೊಂಡರು ಎನ್ನುವುದನ್ನು ಕೇಳಿದರೆ ಇದು ಬೆಂಗಳೂರಾ ಅನ್ನಿಸಿಬಿಡ್ತು. ಅವನ ಹೆಸರು ಒಂದು ಧರ್ಮಕ್ಕೆ ಅಂಟಿಕೊಂಡಿತ್ತು. ಆದರೆ ಅವನಲ್ಲ. ಅವನು ಧರ್ಮವನ್ನು ಬಿಟ್ಟು ಯಾವ ಕಾಲವಾಗಿದೆಯೋ !!!
೨. ನಮಗೆ ಅಂದ್ರೆ, ಯಾರು (ಮಾನಸಿಕವಾಗಿ ಮತ್ತು ದೈಹಿಕವಾಗಿ) ತುಳಿತಕ್ಕೆ/ ಶೋಷಣೆಗೆ ಒಳಗಾಗದ ಅನುಭವ ಪಡೆದಿದ್ದಾರೆ ಅವರಿಗೆ ಮಾತುಗಳಲ್ಲಿ , ಬರಹಗಳಲ್ಲಿ – ಹೀಗಾದರೆ ಎಷ್ಟು ಒಳ್ಳೆಯದು ಎನ್ನುವ ಮೇಲ್ನೋಟದ ಆದರ್ಶದ ಭ್ರಮೆ ಇರುತ್ತದೆ. ಎಲ್ಲಾ ರೀತಿಯಲ್ಲೂ.
ಅದು ಧರ್ಮ ಇರಬಹುದು, ರಾಜಕೀಯ ಇರಬಹುದು, economy ಇರಬಹುದು. anything and everything . ಎಲ್ಲವೂ ಬಿಟ್ಟಿ ಅನಿಸಿಕೆಗಳು ಅಲ್ವಾ. ಓದಿ ತಿಳಿದುಕೊಂಡೇ ಈ ರೀತಿ ಅಭಿಪ್ರಾಯ ನೀಡಲು ಸಾಧ್ಯ.!!!
ನನ್ನನ್ನೂ ಸೇರಿಸಿಕೊಂಡೇ.
– ಈ ವರೆಗೂ ನನಗೆ, ನಾನು particular ಜಾತಿಯವಳು ಎನ್ನುವ ಕಾರಣಕ್ಕೆ ಯಾವ ರೀತಿಯ ಅವಮಾನವಾಗಲೀ, ಬೇಸರವಾಗಲೀ, ದೂಶಣೆಯಾಗಲೀ ಅನುಭವಕ್ಕೆ ಬಂದಿಲ್ಲ. ಅಂದ ಮಾತ್ರಕ್ಕೆ it does not exist ಅಂತ ನಾನು ಅಂದುಕೊಂಡರೆ ತಪ್ಪಾಗಲ್ವಾ.!
೩.. ಕೆಲವು ಸ್ತರಗಳಲ್ಲಿ ಪ್ರಜ್ನಾಪೂರ್ವಕವಾಗಿಯಾದರೂ ನಾವು ವೈಯಕ್ತಿಕ ನೆಲೆಯಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ಹತ್ತಬೇಕಲ್ಲಾ. ಹಿಂದಿನಿಂದಲೂ ಎಷ್ಟೊಂದು ಜನ ಇದನ್ನು ಮಾಡಿಕೊಂಡೇ ಬಂದಿದ್ದಾರೆ. ಸಮಾಜ ಅಂದ್ರೆ ನಾವೇ ಅಲ್ವಾ. ನಿಧಾನವಾಗಿಯಾದರೂ ಈ ಬಗ್ಗೆ ಯಾವ ಭಯ ಆತಂಕವಿಲ್ಲದೆ ಚರ್ಚೆ ಮಾಡುತ್ತಿದ್ದೇವೆ ಎಂದರೆ something must be happening over the period of time !!!
೪. ಕ್ರಾಂತಿ ಗಾಗಿ ಕ್ರಾಂತಿ ಎನ್ನುವ ಅನಿವಾರ್ಯತೆ ಈಗಲೂ ನಮ್ಮಲ್ಲಿ ಇದೆಯೇ !
ಹೌದು ಅಂದರೆ ಇನ್ನೂ ನಾವು ಮಾಡಬೇಕಾಗಿರುವುದು ತುಂಬಾ ಇದೆ. ಒಟ್ಟು ಸಾಮಾಜಿಕ ಕ್ರಾಂತಿಯಲ್ಲಿ ನನ್ನದೂ ಒಂದು ಪಾತ್ರ ಇರುವುದರಿಂದ ಅದಾಗಿಯೇ ಅದು ಆಗುತ್ತದೆ ಎಂದರೆ ಅದು ದೊಡ್ಡ ಸುಳ್ಳು.
– ನಾನು ಮದುವೆಯಾಗಲು ಯೋಚಿಸಿದಾಗ, ನನ್ನ ಅಪ್ಪ ಅಮ್ಮ ಮೊದಲು ಹುಡುಕಿದ್ದು ನಮ್ಮ ಜಾತಿಯಲ್ಲಿ ಯಾರಾದ್ರೂ ಒಳ್ಳೆ ಹುಡುಗ ಇದ್ದಾನಾ ಅಂತ. ಅಷ್ಟು ವರ್ಷ ಅವರಿಬ್ಬರೂ ಪ್ರಗತಿಪರರಾಗಿ ಬರೆದದ್ದು, ಭಾಷಣ ಮಾಡಿದ್ದು, ಚಿಂತನೆ ನಡೆಸಿದ್ದು, ಇವೆಲ್ಲ ಸುಳ್ಳಾ ಅಂತ ಮೊದಲ ಬಾರಿಗೆ ನನಗೆ ಅನ್ನಿಸಿತ್ತು. ಆ ಬಗ್ಗೆ ನಮ್ಮ ಮನೆಯಲ್ಲಿ ಚರ್ಚೆ ಆಯ್ತು ಅಂತ ನನ್ನ ಸ್ನೇಹಿತರಿಗೇ, ಅಪ್ಪ ಅಮ್ಮ ನ ಸ್ನೇಹಿತರಿಗೇ ಆಶ್ಚರ್ಯ. ಯಾಕಂದ್ರೆ ವಿಚಾರವಂತ ಬರಹಗಾರರ ಕುಟುಂಬ. ಇದು ಒಂದು ಚರ್ಚೆಯ ವಿಶಯವೇ ಅಲ್ಲ ನಮಗೆ. ಅನಾಯಾಸವಾಗಿ ನಮ್ಮ ಸಹಜ ಯೋಚನಾಕ್ರಮದಲ್ಲಿ ಇದು ಬಂದು ಹೋಗಿರಬೇಕಿತ್ತು. ಹಾಗಂತ ತಿಳ್ಕೊಂಡಿದ್ರು. ನಾನೂ ಹಾಗೇ ಅಂದ್ಕೊಂಡಿದ್ದೆ.
ಆದ್ರೆ ಸಮಸ್ಯೆ ಅದಲ್ಲ. ವೈಯಕ್ತಿಕವಾಗಿ ನಾವು ಈ ಬಗ್ಗೆ ಯೋಚನೆ ಮಾಡುವಾಗ ಎಲ್ಲರೂ ನಮ್ಮ ನಮ್ಮ ಅನುಭವಗಳ ನೆಲೆಯಲ್ಲೇ ನಮಗೆ ಬೇಕಾಗುವ comfort zoneಗಳಲ್ಲೇ ಬದುಕಲು ಇಷ್ಟ ಪಡುವವರು.
ಜಾತಿ, ಧರ್ಮ, ದೇವರನ್ನು ಮೂಟೆ ಕಟ್ಟಿ ಸಮುದ್ರಕ್ಕೆ ಬಿಸಾಡಿದ ನನ್ನ ಮನೆಯಲ್ಲೇ ನನ್ನ ನಿರ್ಧಾರದ ಬಗ್ಗೆ ಚರ್ಚೆಯಾದರೆ, ಪಾಪ ಅವನ್ನೆಲ್ಲಾ ಇನ್ನೂ ಹೊತ್ತುಕೊಂಡು ತಿರುಗುತ್ತಿರುವವರ ಪಾಡೇನು ಅಂತ ಯೋಚಿಸಿದೆ.
ಎಲ್ಲವೂ ಒಮ್ಮೆಲೇ ಬದಲಾಗಬೇಕು ಅಂದ್ರೆ ಹೇಗೆ. ಬಸವಣ್ಣ ಕ್ರಾಂತಿ ಮಾಡಿದ್ದು ಎಷ್ಟು ಶತಮಾನಗಳ ಹಿಂದೆ. ನಾವು ಈಗಲೂ ಹಾಗೆಯೇ ಇದ್ದೇವೆ ಅಲ್ವಾ. ನಿಧಾನವಾಗಿ ಬದಲಾಗುವ ಪ್ರಕ್ರಿಯೆ ಇದು.
ನಾನು ಮದುವೆಯಾದಾಗ, ನಾನು ಏನೋ ದೊಡ್ದ ಕ್ರಾಂತಿ ಮಾಡಿದೆ ಎಂದು ಅನ್ನಿಸಲೇ ಇಲ್ಲ. ಯಾಕಂದ್ರೆ, ಮೊದಲೇ ನಾನು ಈ ಜಾತಿ, ಆ ಧರ್ಮ, ಈ ದೇಶ ಎನ್ನುವ ನೆಲೆಗಟ್ಟನ್ನು ಮೀರಿ ಯೋಚಿಸಲು ಸಾಧ್ಯವಾಗಿದ್ದರಿಂದ. ಜತೆಗೆ ನನ್ನ ಮೊದಲೇ ಎಷ್ಟೊಂದು ಜನ ಈ ಮೆಟ್ಟಿಲು ಹತ್ತಿ ಹೋಗಿದ್ದಾರೆ ಎನ್ನುವ ಸರಳ ಸತ್ಯದ ಅರಿವು ನನಗೆ ಇದ್ದ ಕಾರಣ. ಮತ್ತು ನನಗೆ ನನ್ನ ಅಪ್ಪ ಅಮ್ಮ ನೀಡಿದ ಆತ್ಮಬಲ. (ದ್ವಂದ್ವಗಳು ಏನೇ ಇದ್ದರೂ ಅವರ ಧೈರ್ಯ ಮತ್ತು ಪ್ರೋತ್ಸಾಹ ಜತೆಗಿದ್ದರಿಂದ).
ನನ್ನ ಕುಟುಂಬದ ಪ್ರತಿಕ್ರಿಯೆ ಅತ್ಯಂತ ಸಹಜ and I do understand it.
Its a micro example ಅಷ್ಟೆ. ನಮ್ಮ ಸಮಾಜ ಮಾನಸಿಕವಾಗಿ ಬದಲಾವಣೆಗೆ ರೆಡಿಯಾಗಿಲ್ಲ ಎನ್ನುವುದಕ್ಕೆ.
ಯಾಕಂದ್ರೆ, ನಾನು ಜಾತಿ ಧರ್ಮ ದೇವರನ್ನು ಬಿಟ್ಟರೂ ನನ್ನ ಸುತ್ತಮುತ್ತ ಇರುವ ಜನರು ಇನ್ನೂ ಅದೇ ಲೇಬಲ್ ಹಚ್ಚಿಕೊಂಡಿದ್ದಾರಲ್ಲಾ. ಅವರೆಲ್ಲಾ ಯಾವಾಗ ಈ tag ಗಳನ್ನು ಕಳಚಿಡುತ್ತಾರೋ ಅಲ್ಲಿಯವರೆಗೆ ನಾನು ಅವರ ಜತೆ ಗುದ್ದಾಡಲೇಬೇಕಲ್ಲ.
೫. ನಾವು ಎಷ್ಟು ಮಂದಿ ಧರ್ಮ, ಜಾತಿ ಬಿಡಲು ತಯಾರು.???
ನಮ್ಮ ನಮ್ಮ ಹೆಸರುಗಳಲ್ಲಿನ ಜಾತಿ ಸೂಚಕ, ಧರ್ಮ ಸೂಚಕ ಹೆಸರುಗಳನ್ನು ( ಸರ್ ನೇಮ್ ) ಬಿಟ್ಟರೂ ಸ್ವಲ್ಪ ಮಟ್ಟಿನ ಬದಲಾವಣೆ ಬಂದೀತು. ಅಲ್ಲವೇ.
ಎಲ್ಲಿವರೆಗೆ ಜಾತಿ, ಧರ್ಮ ಎನ್ನುವ ಬಾಲ ಕಟ್ಟಿಕೊಳ್ಳುತ್ತೇವೆಯೋ ಅಲ್ಲಿವರೆಗೆ ಯಾವ ಮೀಸಲಾತಿ ಯಾರಿಗೆ ನೀಡಿದರೂ ಉಪಯೋಗವಾಗದು.
೬. ಪ್ರಸ್ತುತ ಭಾರತದ ದುರಂತ ಅಂದರೆ ಯಾವುದೇ ಸಾಮಾಜಿಕ ಬದಲಾವಣೆಯೂ, ರಾಜಕೀಯವಾದ ಫಿಲ್ಟರ್ ನಿಂದ ಹಾದು ಹೋಗಲೇ ಬೇಕಾದ ಸಂದರ್ಭ ಇದೆ. ಅದನ್ನು ಅರಿತೇ ಸಿದ್ಧಲಿಂಗಯ್ಯನವರು ಇ ಮನವಿಯನ್ನು ಮಂಡಿಸಿರುವುದು.
ಅಂಬೇಡ್ಕರ್ ಅನ್ನೋ ಮಹಾನ್ ಚಿಂತಕ ಭಾರತದಲ್ಲಿ ಹುಟ್ಟದೇ ಇರುತ್ತಿದ್ದಲ್ಲಿ ಈಗಿನ ಚರ್ಚೆ, ವಾದ, ಮೀಸಲಾತಿಯ ಹೊಸ ಹೊಳಹುಗಳು ಸಾಧ್ಯವೇ ಆಗುತ್ತಿರಲಿಲ್ಲ. ಮಾರ್ಟಿನ್ ಲುಥರ್ ನ civil rights movement ಆಗದೇ ಇರುತ್ತಿದ್ದಲ್ಲಿ ಒಬಾಮಾ ಅಮೇರಿಕಾ ಅಧ್ಯಕ್ಷನಾಗುವುದು ಸಾಧ್ಯವಿತ್ತಾ?
ಆತ ಎಷ್ಟು ಸಬಲ ಮತ್ತು ಪರಿಣಾಮಕಾರಿ ಎನ್ನುವುದು ಬೇರೆಯೇ ಮಾತು. ಅಥವಾ ಜಾತಿ ರಾಜಕೀಯ, ಧರ್ಮ ರಾಜಕೀಯ ಅಮೇರಿಕೆಯಲ್ಲಿ ಇಲ್ಲವೇ ಎನ್ನುವ ಪ್ರತಿವಾದ ಬೇರೆಯೇ. ಅದು ಇಲ್ಲಿ ಬೇಡ.
ಕುವೆಂಪು ಅವರ ವಿಶ್ವಮಾನವ concept ಆದರ್ಶ. ಅದು practical ಆದಾಗ ಮಾತ್ರ ಅಲ್ವಾ ನಿಜವಾದ ಬೆಲೆ.
೭. ಇನ್ನು ಮೀಸಲಾತಿಯಿಂದ ಉಪಯೋಗ ಏನು ಎನ್ನುವ ಅಥವಾ ಕೇವಲ ಬಡವ – ಶ್ರೀಮಂತ ಎನ್ನುವುದನ್ನು ಪರಿಗಣಿಸಿ ಎನ್ನುವ ವಾದಗಳು, ಮತ್ತೆ basic point ಗೇ ಮರಳುವಂತೆ ಮಾಡುತ್ತವೆ. ಅದು ಪ್ರಸ್ತುತ ಸಮಯ ಸಂದರ್ಭದಲ್ಲಿ ಅನಗತ್ಯ. ಯಾಕಂದ್ರೆ ಆ ಕಾಲಘಟ್ಟವನ್ನು ದಾಟಿ ಯಾವತ್ತೋ ನಾವು ಮುಂದೆ ಬಂದಾಗಿದೆ.
೮. ಅಂತರ್ ಧರ್ಮೀಯ, ಅಂತರ್ ಜಾತೀಯ ವಿವಾಹಗಳು ನಡೆಯುತ್ತಲೇ ಇರುತ್ತವೆ. ಆದರೆ ಸಿದ್ಧಲಿಂಗಯ್ಯ ಅವರು ಪ್ರಸ್ತಾಪಿಸಿದ ರೀತಿಯಲ್ಲಿ ….
[ ಅವರು ಈ ರೀತಿ ವಿವಾಹವಾಗಬೇಕಾದರೆ ಅವರ ಮನಸ್ಸಿನಲ್ಲಿ ಒಂದು ಬದಲಾವಣೆ, ಆಂದೋಲನ ನಡೆದಿರುತ್ತದೆ. ಅವರು ಕ್ರಾಂತಿಯ ಕಡೆ ಒಲಿದಿರುವುದರಿಂದ ಇಂತಹ ವಿವಾಹ ಆಗಿದ್ದಾರೆ. ] …
ಎನ್ನುವುದನ್ನು ನಾನು ಪೂರ್ತಿಯಾಗಿ ಒಪ್ಪಿಕೊಳ್ಳಲಾರೆ. ಮತ್ತು ಇದೇ ಕಾರಣದಿಂದಾಗಿ ಮೀಸಲಾತಿ ನೀಡುವ ಪ್ರಯತ್ನ ಸಾಮಾಜಿಕ ಕ್ರಾಂತಿಗೆ ಉಪಯೋಗವಾಗಲಾರದು. ಮೀಸಲಾತಿ ಸಿಗುತ್ತದೆ ಎನ್ನುವ ಕಾರಣಕ್ಕೇ ಈ ರೀತಿಯ ಮದುವೆಗಳಾದರೂ ಆಶ್ಚರ್ಯವಿಲ್ಲ. ಲಾಭಕ್ಕಾಗಿ ಏನು ಬೇಕಾದರು ಮಾಡುವ ಜನ ನಾವು.
೯. ಅವರೇ ಹೇಳಿದ ಇನ್ನೊಂದು ಅಂಶ ಹೆಚ್ಚು ಸೂಕ್ತ : …… [ ಇವರು ಜಾತಿರಹಿತರು, ನಿಜವಾದ ಭಾರತೀಯರು, ಜಾತ್ಯತೀತರು ಎಂದು ಇವರನ್ನು ಗುರುತಿಸುವಂತಾಗಬೇಕು. ]
ಅಂತರ್ ಜಾತಿ/ ಧರ್ಮ ವಿವಾಹವಾದವರು ತಮ್ಮ ಜಾತಿ / ಧರ್ಮ / ಭಾಷೆ ಎನ್ನುವ ಅಸ್ತಿತ್ವವನ್ನು ಕಳೆದುಕೊಳ್ಳಲು ಸಿದ್ಧರಾಗಿರಬೇಕು.
ಆ ನೆಲೆಗಟ್ಟನ್ನು ಮೀರಿ ತಾವು, ತಮ್ಮ ಮಕ್ಕಳು ಜಾತಿ / ಧರ್ಮ ರಹಿತ ಮಾನವರು ಎನ್ನುವುದು ಗಟ್ಟಿಯಾಗಿ ಪ್ರತಿಪಾದಿಬೇಕು. ಮತ್ತು ಅದು ಮಕ್ಕಳ ಮನಸ್ಸಲ್ಲೂ ಬೆಳೆಯಬೇಕು.
ಇಲ್ಲವಾದಲ್ಲಿ ಈಗ ಹೆಚ್ಚಾಗಿ ಆಗುತ್ತಿರುವ ಹಾಗೆ, ಒಂದು ಜಾತಿ/ ಧರ್ಮದ ಪ್ರಾಬಲ್ಯವಾಗುತ್ತದೆಯೇ ಹೊರತು ಜಾತಿ ರಹಿತ , ಧರ್ಮ ರಹಿತ ಸಮಾಜ ಸಾಧ್ಯವಾಗಲಾರದು. ಮಕ್ಕಳು ತಂದೆಯ ಜಾತಿ/ಧರ್ಮವನ್ನೇ (dominant paradigm) ಆಧಾರವಾಗಿಸಿಕೊಳ್ಳುವ ಸಂದರ್ಭವೇ ಹೆಚ್ಚು, ಅದು ಪೂರ್ವಾಗ್ರಹ ಪೀಡಿತ ಸಮಾಜದೊಳಗೆ ಬದುಕುವ ಅನಿವಾರ್ಯ ಆಯ್ಕೆ.
ಯಾಕಂದ್ರೆ, ಪ್ರತಿಯೊಂದು application ನಲ್ಲೂ ನಿಮ್ಮ ಜಾತಿ ಯಾವುದು, ನಿಮ್ಮ ಧರ್ಮ ಯಾವುದು ಎನ್ನುವ box ಗಳು ಇರುತ್ತವಲ್ಲ. ಅವುಗಳನ್ನು ತುಂಬದೇ ಇದ್ದರೆ ಎದುರಿಗಿರುವ clerk/officer ನೀವು ಬೇರೆ ಗ್ರಹದಿಂದ ಬಂದವರೇನೋ ಅಂತ ನೋಡ್ತಾರಲ್ಲಾ. (ಈಗ ಇವು optional ಆಗಿವೆ ಅಂತ ಅಂದ್ಕೊಂಡಿದ್ದೇನೆ … ಗೊತ್ತಿಲ್ಲ). ಆ embarrassment ಯಾರಿಗೆ ಬೇಕು. ಮತ್ತೆ ಹಾಗೆ ಪ್ರತಿ ಸಲ ಎಲ್ಲರಿಗೂ ಹೇಳ್ಕೊಂಡೇ ಇರ್ಬೇಕು ಅಲ್ವಾ. ನಾನು ಹುಟ್ಟಿದ್ದು ಅಂತರ್ ಜಾತಿ / ಧರ್ಮೀಯ ವಿವಾಹವಾದ ನನ್ನ ಅಪ್ಪ ಅಮ್ಮನಿಗೆ ಅಂತ.
– ಈಗಾಗಲೇ ಅರವತ್ತು – ಎಪ್ಪತ್ತು ವರ್ಷಗಳ ಹಿಂದೆ ಅಂತರ್ ಜಾತಿ ವಿವಾಹವಾಗಿದ್ದ ನನ್ನ ಒಬ್ಬ ಅಜ್ಜ-ಅಜ್ಜಿಯ (ನನ್ನ ಅಜ್ಜನ ತಮ್ಮ) ಮಕ್ಕಳ ಮದುವೆಯ ಸಂದರ್ಭದಲ್ಲಿ ( ಇಪ್ಪತ್ತು – ಇಪ್ಪ್ಪತೈದು ವರ್ಶಗಳ ಹಿಂದೆ) ಮತ್ತೆ ಅದೇ ಪ್ರಶ್ನೆಗಳು, ಅದೇ ಸಂದರ್ಭ, ಗೊಂದಲಗಳು – ಅವರನ್ನು ಕಾಡಿದ್ದವು. ಇನ್ನು ಈಗ ಅವರ ಮೊಮ್ಮಕ್ಕಳ ಸಂದರ್ಭದಲ್ಲೂ ಹೆಚ್ಚೇನೂ ಬದಲಾಗಲಿಲ್ಲ.!!!
ಈಗಲೂ ಸಂದರ್ಭ ಹಾಗೇ ಇದೆ ಅಂದರೆ !!! ಮೀಸಲಾತಿಯಿಂದ ಕ್ರಾಂತಿ ಸಾಧ್ಯವೇ??? …ಕೆಲವೊಮ್ಮೆ ಅನ್ನಿಸುತ್ತದೆ!!!.
೧೦. ಬಹುಶಃ as a concept – ಮೀಸಲಾತಿ ಎನ್ನುವುದು ಆದರ್ಶ.
ಆದರೆ ಅದು ಆಮಿಶವಾದರೆ … ಮದುವೆ ಅನ್ನುವುದೂ ರಾಜಕೀಯ ದಾಳವಾಗಿ … ಇನ್ನು ಏನೇನೋ ಹೊಸ ಹೊಸ ರೀತಿಯ ಸಮಸ್ಯೆಗಳು ಸೃಷ್ಟಿ ಮಾಡಿಕೊಳ್ಳಬಾರದಲ್ಲಾ ನಾವು. !!!
ಹಾಗಾಗದೇ … ಸರಿಯಾಗಿ ಸಲ್ಲುವ ಪಾತ್ರರಿಗೇ ಅದು ದಕ್ಕಿದರೆ ಆಗ ಸಹಜವಾಗಿ ಹೋರಾಟದ ದಾರಿ ಸುಲಭವಾಗುತ್ತದೆ.
ಯಾರಾದರೂ ಎಲ್ಲಿಂದಾದರೂ ಶುರು ಮಾಡಬೇಕಲ್ಲಾ. ! ಅದನ್ನು ಸಿದ್ಧಲಿಂಗಯ್ಯ ಶುರು ಮಾಡಿದ್ದಾರೆ.
– ಹೇಮಶ್ರೀ





Namaste Hemashriji,
Nimma baraha tumba ne balanced agide….ella maggulugalannoo avalokiside.
Sunil.
thank you Sunil.
when most of politicians thinks about the number of votes while announcing any project or scheme, its really difficult to say how the revolution should proceed……..
ಹೇಮಶ್ರೀ ಅವರೇ ನಿಮ್ಮ ನಿಲುವು ಮತ್ತು ಸಾಮಾಜಿಕ ಒಳತೋಟಿ ನಿಜಕ್ಕೂ ಮೆಚ್ಚುವಂತಹದ್ದು.
ಸಂಬುದ್ಧ
et
aakasmikavaagi nimma e lekhana oduva avakaasha
sikkitu. ega neevu amerikaadallisiruvudaagi
amma helidaru. nimage shubhavaagali