ಆನಂದ ಕುಂಚನೂರ
ಹೆದ್ದಾರಿಯ ತವಕ
ಆಂಬ್ಯುಲೆನ್ಸಿನ ತಣ್ಣನೆಯ ಕೆಂಪು ದೀಪಕೆ
ಒಳರೋಗಿಯ ಹೊರ ಉಸಿರಾಟಕೆ.
ಕಾಲ ಹೇಗೆ ಓಡುತ್ತದೆ?
ಹೆದ್ದಾರಿಯ ಮೇಲೆ
ನಡೆದು ನೋಡಬೇಕು.
ಹೆದ್ದಾರಿಯ ಬೆಳದಿಂಗಳು
ಚಂದ್ರನ ಹೋಲುತ್ತಿದೆ
ಹಾಲು ಮೈ.
ಸಿಡಿದ ರಕ್ತ ಅವಸರದ್ದು
ಹೆದ್ದಾರಿಯೆದೆ ಮೇಲೆ ಚಿತ್ರವಾಗಿ
ಉಂಡು ಕೊಬ್ಬಿದ ಟಾರೂ ಟೈರೂ.
ಮಳೆ ಸುರಿದ ಹೆದ್ದಾರಿ
ಗರಿಕೆಗೂ ಒಡಲನೂಡುವುದಿಲ್ಲ
ಗಿಡುಗನದು ಬೆಂಕಿ ಕಣ್ಣು.
ಕಲಾವಿದನೊಬ್ಬನಿಗೆ ಕಾಯುತ್ತಿದ್ದೇನೆ
ಹೊತ್ತಾದರೂ ಸುಳಿವಿಲ್ಲ
ಹೆದ್ದಾರಿಗೆ ಕವಲುಗಳಿಲ್ಲ
ಹೆದ್ದಾರಿಯೆಂದ ಮೇಲೆ ಕೇಳಬೇಕೆ
ಅಲ್ಲಲ್ಲಿ ಸಿಗುವ ಎಳನೀರು, ಆರೇಂಜು, ಕಾಫಿ…
ನಿರ್ಲಕ್ಷ್ಯ ಗುರಿ.
(ಮುಂದುವರೆಯುವುದು….)
ಅತಿ ಸರಳವಾಗಿ, ಸುಂದರವಾಗಿ ಅರ್ಥೈಸಿಕೊಳ್ಳುವ ಹಾಗೆ ಬರೆವ ಕವಿ ಅವರ ಕಲ್ಪನೆಯಲ್ಲಿ ಮೂಡಿ ಬರುವ ಚಿಂತನೆಗಚ್ಚುವ ಸಾಲುಗಳು ನಿಜಕ್ಕೂ ಕಾಡುತ್ತವೆ.
ಕಾಲದ ಬಗ್ಗೆ ಅನೇಕರು ಬರೆಯುತ್ತಿದ್ದಾರೆ ಈಗಾಗಲೇ ಅನೇಕರು ಬರೆದಿದ್ದಾರೆ ಇದು ವಿಶಿಷ್ಟ ರೀತಿಯಲ್ಲಿ ಕಾಣ ಬರುತ್ತದೆ ಈ ಕವಿತೆ. ತುಂಬಾ ಚೆನ್ನಾಗಿದೆ.
“ಹೆದ್ದಾರಿ ಕಣಿವೆ” ಕವಿತೆ ಇಷ್ಟವಾಯಿತು ಸರ್..
Anil and Beeru..thank you.